ಪತ್ನಿ ಭೇಟಿ ಬಳಿಕ ದರ್ಶನ್ ಓಡುತ್ತಿದ್ದುದು ವಿಲ್ಸನ್ ​ಗಾರ್ಡನ್​ ನಾಗನ ಬಳಿ; ಕಾರಣವೇನು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿಯಾಗಿ ಬದುಕುತ್ತಿದ್ದ ನಟ ದರ್ಶನ್‌ ಹಾಗೂ ಗ್ಯಾಂಗ್‌ಗೆ ಸಂಕಷ್ಟ ಫಿಕ್ಸ್‌ ಆಗಿದೆ. ಹಿಂಡಲಗಾ ಜೈಲಿನ ʼಅಂದೇರಿʼ ಸೆಲ್‌ಗಳಿಗೆ ಈ ಹಿಂಡು ಶಿಫ್ಟ್‌ ಆಗುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ದರ್ಶನ್ ಕಳ್ಳಾಟ ಬಯಲಾಗಿದೆ.

ಪತ್ನಿ ಭೇಟಿ ಬಳಿಕ ದರ್ಶನ್ ಓಡುತ್ತಿದ್ದುದು ವಿಲ್ಸನ್ ​ಗಾರ್ಡನ್​ ನಾಗನ ಬಳಿ; ಕಾರಣವೇನು?
ಪತ್ನಿ ಭೇಟಿ ಬಳಿಕ ದರ್ಶನ್ ಓಡುತ್ತಿದ್ದುದು ವಿಲ್ಸನ್​ಗಾರ್ಡನ್​ ನಾಗನ ಬಳಿ; ಕಾರಣವೇನು?
Follow us
|

Updated on:Aug 27, 2024 | 8:21 AM

ನಟ ದರ್ಶನ್ ಅವರು ತಪ್ಪಿನ ಮೇಲೆ ತಪ್ಪನ್ನು ಮಾಡುತ್ತಿದ್ದಾರೆ. ಅವರು ರೌಡಿಶೀಟರ್​ಗಳ ಜೊತೆ ಆರಾಮಾಗಿ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದನ್ನು ಬೆನ್ನು ಹತ್ತಿ ಹೋದಾಗ ಸಾಕಷ್ಟು ವಿಚಾರಗಳು ಬಯಲಿಗೆ ಬಂದಿವೆ. ಜೈಲಿಗೆ ಮದ್ಯ, ಬಿರಿಯಾನಿ ಎಲ್ಲವೂ ಬರುತ್ತದೆ ಅನ್ನೋ ವಿಚಾರ ಗೊತ್ತಾಗಿದೆ. ಈ ಮಧ್ಯೆ ದರ್ಶನ್ ಮಾಡುತ್ತಿದ್ದ ಕಳ್ಳಾಟಗಳು ಕೂಡ ಒಂದೊಂದೇ ಬಯಲಾಗುತ್ತಿದೆ.

ಪರಪ್ಪನ ಅಗ್ರಹಾರ ಜೈಲಿನ ಸೆಕ್ಯೂರಿಟಿ 3ರಲ್ಲಿ ನಟ ದರ್ಶನ್ ಅವರನ್ನು ಇಡಲಾಗಿದೆ. ವಿಸಿಟರ್​ಗಳು ಬಂದಾಗ ಮೂರನೇ ಬ್ಯಾರಕ್​ನಿಂದ ದರ್ಶನ್ ಹೊರ ಬರುತ್ತಿದ್ದರು. ಪತ್ನಿ ಹಾಗೂ ಇತರರನ್ನು ಭೇಟಿ ಆದ ಬಳಿಕ ದರ್ಶನ್ ನೇರವಾಗಿ ತೆರಳುತ್ತಿದ್ದುದು ವಿಲ್ಸನ್ ಗಾರ್ಡ್​ ನಾಗನ ಬಳಿ. ಈತನನ್ನು ಸೆಕ್ಯೂರಿಟಿ 1ರ ಬ್ಯಾರಾಕ್​ನಲ್ಲಿ ಇಡಲಾಗಿದೆ.

ದರ್ಶನ್ ಅವರು ಅಧಿಕಾರಿಗಳ ಕಣ್ಣು ತಪ್ಪಿಸಿ ನಾಗನ ಬ್ಯಾರಕ್ ಕಡೆ ಓಡುತ್ತಿದ್ದರು. ನಾಗನ ಜೊತೆ ಹರಟೆ ಹೊಡೆಯುವಾಗ ಅಧಿಕಾರಿಗಳು ಬಂದು ಇಲ್ಲಿ ಇರೋ ಹಾಗಿಲ್ಲ ಎಂದರೆ ಒಂದೆರಡು ನಿಮಿಷ ತಡೆಯಿರಿ ಎಂದು ನಾಗ ಹೇಳುತ್ತಿದ್ದನಂತೆ. ಜೈಲಿನ ಅಧಿಕಾರಿಗಳು ಹೇಳಿದರೂ ದರ್ಶನ್ ಹೋಗುತ್ತಿರಲಿಲ್ಲ. ದರ್ಶನ್​ನ ಕರೆಸಿಕೊಳ್ಳಲು ನಾಗನ ಕುಮ್ಮಕ್ಕು ಕೂಡ ಇದೆ ಎನ್ನಲಾಗಿದೆ.

ಇದನ್ನೂ ಓದಿ: 3 ಪ್ರಕರಣಗಳ ಪೈಕಿ ಎರಡರಲ್ಲಿ ದರ್ಶನ್​ A1; ಕುಖ್ಯಾತ ರೌಡಿಗಳ ಜತೆ ದಾಸನ ಕೇಸ್

ಇನ್ನು, ದರ್ಶನ್ ಮಾಡಿಕೊಂಡ ಎಡವಟ್ಟಿನಿಂದ ಅವರನ್ನು ಈಗ ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಜೈಲಿನ ‘ಅಂದೇರಿʼ ಸೆಲ್‌ಗಳಿಗೆ ಶಿಫ್ಟ್ ಮಾಡಲು ಚಿಂತನೆ ನಡೆದಿದೆ. ದರ್ಶನ್ ಅವರ ಸಂಪೂರ್ಣ ಗ್ಯಾಂಗ್ ಇಲ್ಲಿಗೆ ತೆರಳಲಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:04 am, Tue, 27 August 24