Viral Video: ಲಿಫ್ಟ್​ನೊಳಗೆ ಮೂತ್ರ ಮಾಡಿದ ಬಾಲಕ ಶಾಕ್; ಮಾಡಿದ್ದುಣ್ಣೋ ಮಾರಾಯ ಎಂದ ನೆಟ್ಟಿಗರು

Viral Video: ಲಿಫ್ಟ್​ನೊಳಗೆ ಮೂತ್ರ ಮಾಡಿದ ಬಾಲಕ ಶಾಕ್; ಮಾಡಿದ್ದುಣ್ಣೋ ಮಾರಾಯ ಎಂದ ನೆಟ್ಟಿಗರು
|

Updated on: Jul 10, 2024 | 8:49 PM

ಮಕ್ಕಳು ಹೋದಲ್ಲೆಲ್ಲ ಕಿತಾಪತಿ ಮಾಡುವುದು, ತರಲೆ ಮಾಡುವುದು ಸಾಮಾನ್ಯ. ಅದೇ ರೀತಿ ಬಾಲಕನೊಬ್ಬನಿಗೆ ಲಿಫ್ಟ್​ ಹತ್ತುತ್ತಿದ್ದಂತೆ ತರಲೆ ಐಡಿಯಾವೊಂದು ಬಂದಿದೆ. ಚಡ್ಡಿ ಬಿಚ್ಚಿದ ಆತ ಕ್ಲೀನಾಗಿದ್ದ ಲಿಫ್ಟ್​ನೊಳಗೆ ಹಾಗೂ ಲಿಫ್ಟ್​ ಬಟನ್​ಗಳ ಮೇಲೆ ಮೂತ್ರ ಮಾಡಿದ್ದಾನೆ. ಆಮೇಲೆ ಏನಾಯ್ತು ಎಂದು ನೀವೇ ನೋಡಿ.

ಲಿಫ್ಟ್​ನಲ್ಲಿ ತನ್ನ ಮನೆಗೆ ಹೋಗಲು ಲಿಫ್ಟ್ ಹತ್ತಿದ ಬಾಲಕನೊಬ್ಬನಿಗೆ ಸ್ವಲ್ಪ ತರಲೆ ಮಾಡುವ ಮನಸಾಯಿತು. ಹೀಗಾಗಿ, ಲಿಫ್ಟ್​ ಬಟನ್​ಗಳ ಮೇಲೆ ಮೂತ್ರ ಮಾಡಿದ್ದಾನೆ. ಆದರೆ, ಮೂತ್ರ ತಾಗುತ್ತಿದ್ದಂತೆ ಆ ಲಿಫ್ಟ್ ಜಾಮ್ ಆಗಿ ಮಧ್ಯದಲ್ಲೇ ನಿಂತುಬಿಟ್ಟಿತು. ಇದರಿಂದ ಶಾಕ್ ಆದ ಆ ಬಾಲಕ ತನ್ನ ಚಡ್ಡಿಯನ್ನು ಮೇಲೆತ್ತಿಕೊಂಡು ಕಿರುಚಾಡಿದ್ದಾನೆ, ತಲೆಕೂದಲು ಜಗ್ಗಿಕೊಂಡು ಗೋಳಾಡಿದ್ದಾನೆ. ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನ ಮಾಡಿ ಒದ್ದಾಡಿದ್ದಾನೆ. ಈ ದೃಶ್ಯ ಲಿಫ್ಟ್​ನೊಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಷ್ಯಾದ ಅಪಾರ್ಟ್​ಮೆಂಟ್​ವೊಂದರಲ್ಲಿ ಈ ಘಟನೆ ನಡೆದಿದೆ. ಕೊನೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ಬಾಲಕನನ್ನು ಲಿಫ್ಟ್​ನಿಂದ ಹೊರಗೆ ತಂದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇನ್​ಸ್ಟಂಟ್ ಕರ್ಮ ಎಂದರೆ ಇದೇ ನೋಡಿ ಎಂದು ಲೇವಡಿ ಮಾಡಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ