
Trending
ದೇಶದಲ್ಲಿ ನಡೆಯುವ ಅಚ್ಚರಿಯ ಘಟನೆಗಳನ್ನು ಹಾಗೂ ವೈರಲ್ ಆಗಿರುವ ಸುದ್ದಿಗಳನ್ನು ಇಲ್ಲಿ ಪ್ರಕಟ ಮಾಡಲಾಗುವುದು. ಜನರಿಗೆ ಆಸಕ್ತಿದಾಯಕ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್ ಕ್ಯಾಟಗರಿಯಲ್ಲಿ ತಿಳಿಸಲಾಗುವುದು
Viral: ಬೈಕ್ ಸವಾರನಿಗೆ ಗುದ್ದಿದ ಟ್ಯಾಂಕರ್; ಇಲ್ಲಿ ತಪ್ಪು ಯಾರದ್ದು?
ಪ್ರತಿನಿತ್ಯ ಅಲ್ಲೊಂದು ಇಲ್ಲೊಂದರಂತೆ ಹತ್ತಾರು ಅಪಘಾತ ಪ್ರಕರಣಗಳ ಸುದ್ದಿ ಕೇಳಿ ಬರುತ್ತಿರುತ್ತವೆ. ವಾಹನ ಸವಾರರ ಸಂಚಾರ ನಿಯಮ ಪಾಲನೆಯ ಉದಾಸಿನತೆಯಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಇಲ್ಲೊಂದು ಅಂತಹದ್ದೇ ಭೀಕರ ಅಪಘಾತ ಸಂಭವಿಸಿದ್ದು, ಸೀದಾ ಬಂದಂತಹ ಟ್ಯಾಂಕರ್ ಬೈಕ್ ಸವಾರನಿಗೆ ಗುದ್ದಿದೆ. ಈ ಭೀಕರ ಆಕ್ಸಿಡೆಂಟ್ ದೃಶ್ಯ ವೈರಲ್ ಆಗುತ್ತಿದ್ದು, ಇಲ್ಲಿ ತಪ್ಪು ಯಾರದ್ದು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.
- Malashree anchan
- Updated on: Mar 21, 2025
- 4:13 pm
Viral: ಮಿಮ್ಸ್ ಮೆಡಿಕಲ್ ಕಾಲೇಜು ಆವರಣದೊಳಗೆ ಬಂದ ಬುಸ್ ಬುಸ್ ನಾಗಪ್ಪ; ಹೇಗಿತ್ತು ನೋಡಿ ರಕ್ಷಣಾ ಕಾರ್ಯ
ಬೇಸಿಗೆಯಲ್ಲಿ ಉರಿ ಬಿಸಿಲ ಶಾಖ ಒಂದು ಕಡೆಯಾದರೆ, ಇನ್ನೊಂದೆಡೆ ಹಾವುಗಳ ಕಾಟ. ಬಿಸಿಲ ತಾಪ ಹೆಚ್ಚಾಗುತ್ತಿದ್ದಂತೆ ತಂಪಾದ ಸ್ಥಳವನ್ನು ಹುಡುಕಿ ಬರುವ ಹಾವುಗಳು ಮನೆ ಸಮೀಪ, ಜನನಿಬಿಡ ಪ್ರದೇಶಗಳಿಗೆ ಬಂದು ಆತಂಕ ಸೃಷ್ಟಿಸುತ್ತವೆ. ಅದೇ ರೀತಿ ಇಲ್ಲೊಂದು ಹಾವು ತಂಪಾದ ಸ್ಥಳವನ್ನು ಹುಡುಕುತ್ತಾ ಬಂದು ಸೀದಾ ಮೆಡಿಕಲ್ ಕಾಲೇಜು ಆವರಣದೊಳಗೆ ನುಗ್ಗಿದೆ. ಬುಸ್ ಬುಸ್ ಎಂದು ಹೆಡೆ ಬಿಚ್ಚಿ ಬುಸುಗುಡುತ್ತಿದ್ದ ನಾಗಪ್ಪನನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
- Malashree anchan
- Updated on: Mar 21, 2025
- 2:13 pm
Viral: 2 ತಿಂಗಳು ಡಿಜಿಟಲ್ ಅರೆಸ್ಟ್; ಸೈಬರ್ ವಂಚನೆಗೆ ಬಲಿಯಾಗಿ ಬರೋಬ್ಬರಿ 20 ಕೋಟಿ ರೂ. ಕಳೆದುಕೊಂಡ 86ರ ವೃದ್ಧೆ
ಅಮಾಯಕರನ್ನು ವಂಚಿಸಿ ಹಣ ವಸೂಲಿ ಮಾಡುವ ಡಿಜಿಟಲ್ ಅರೆಸ್ಟ್ ಸೇರಿದಂತೆ ಇನ್ನಿತರೆ ಸೈಬರ್ ಕ್ರೈಂ ಪ್ರಕರಣ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಇಂತಹ ವಂಚನೆಗೆ ಬಲಿಯಾಗುವವ ಸಂಖ್ಯೆ ಕಮ್ಮಿಯಾಗಿಲ್ಲ. ಇಲ್ಲೊಬ್ಬರು ವೃದ್ಧೆ ಕೂಡಾ ಡಿಜಿಟಲ್ ಅರೆಸ್ಟ್ ವಂಚನೆಗೆ ಬಲಿಯಾಗಿ ಬರೋಬ್ಬರಿ 20 ಕೋಟಿ ರೂ. ಕಳೆದುಕೊಂಡಿದ್ದಾರೆ. ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ, ನಿಮ್ಮ ಮಕ್ಕಳು ಕೂಡಾ ಬಂಧನ ಭೀತಿಯಲ್ಲಿದ್ದಾರೆ ಎಂದು ಸುಳ್ಳು ಹೇಳಿ ಮೋಸ ಮಾಡಿ ಸ್ಕ್ಯಾಮರ್ಸ್ ವೃದ್ಧೆಯ ಬ್ಯಾಂಕ್ ಅಕೌಂಟ್ನಿಂದ 20 ಕೋಟಿ ರೂ. ಹಣವನ್ನು ದೋಚಿದ್ದಾರೆ.
- Malashree anchan
- Updated on: Mar 21, 2025
- 8:58 am
ಹೆಲ್ಮೆಟ್ ಧರಿಸದೆ ಪ್ರಯಾಣಿಸಿದ ಲೇಡಿ ಕಾನ್ಸ್ಟೇಬಲ್; ಜನರಿಗೊಂದು ನ್ಯಾಯ ನಿಮಗೊಂದು ನ್ಯಾಯಾನಾ
ಸುರಕ್ಷತೆಯ ದೃಷ್ಟಿಯಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಪೊಲೀಸರು ಕೂಡಾ ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಾರೆ. ಅಂತದ್ರಲ್ಲಿ ಇಲ್ಲೊಬ್ರು ಲೇಡಿ ಕಾನ್ಸ್ಟೇಬಲ್ ಹೆಲ್ಮೆಟ್ ಧರಿಸದೆ ರಾಜಾರೋಷವಾಗಿ ಪ್ರಯಾಣಿಸಿದ್ದಾರೆ. ಈ ದೃಶ್ಯವನ್ನು ಕಂಡಂತಹ ಯುವಕನೊಬ್ಬ ಜನ ಸಾಮಾನ್ಯರಿಗೊಂದು ನ್ಯಾಯ, ನಿಮಗೊಂದು ನ್ಯಾಯಾನಾ ಎಂದು ಪ್ರಶ್ನಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
- Malashree anchan
- Updated on: Mar 20, 2025
- 4:36 pm
Viral: ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿದ ಕೈ; ನೋವಿನಿಂದ ಒದ್ದಾಡಿದ ಮಹಿಳೆ
ಬೆಳೆ ಕಟಾವು, ಮೇವು ಕತ್ತರಿಸುವಂತಹದ್ದು, ಇತ್ಯಾದಿ ಕೆಲಸಗಳನ್ನು ಯಂತ್ರಗಳ ಸಹಾಯದಿಂದ ಮಾಡುವಾಗ ಎಚ್ಚರಿಕೆಯನ್ನು ಮಹಿಸುವುದು ಬಹಳ ಅತ್ಯಗತ್ಯ. ಕೆಲವೊಂದು ಬಾರಿ ಅಜಾಗರೂಕತೆಯಿಂದ ಈ ಯಂತ್ರಗಳಿಂದ ಅವಘಡ ಸಂಭವಿಸುತ್ತವೆ. ಇಲ್ಲೊಂದು ಅಂತಹದ್ದೇ ದುರಂತ ಸಂಭವಿಸಿದ್ದು, ಮೇವು ಕಟಾವು ಮಾಡುವಂತಹ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೈ ಯಂತ್ರಕ್ಕೆ ಸಿಲುಕಿದೆ. ಮಹಿಳೆ ನೋವಿನಲ್ಲಿ ನರಳಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
- Malashree anchan
- Updated on: Mar 20, 2025
- 3:36 pm
Viral: ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ 38 ಲಕ್ಷ ರೂ. ದೋಚಿ ಪರಾರಿಯಾದ ಖದೀಮರು
ಕಳ್ಳತನ, ದರೋಡೆ ಪ್ರಕರಣಗಳ ಸುದ್ದಿಗಳು ಪ್ರತಿನಿತ್ಯ ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕಳ್ಳರ ಗುಂಪೊಂದು ಸಿನಿಮೀಯ ಶೈಲಿಯಲ್ಲಿ ಎಟಿಎಂನಲ್ಲಿದ್ದ 38 ಲಕ್ಷ ಹಣವನ್ನು ದೋಚಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ಗೆ ಸೇರಿದ ಎಟಿಎಂಗೆ ನುಗ್ಗಿ, ಅಲ್ಲಿದ್ದ ಸಿಸಿ ಕ್ಯಾಮೆರಾಗಳಿಗೆ ಸ್ಪ್ರೇ ಹೊಡೆದು ಬಳಿಕ ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ ಹಣ ದೋಚಿ ಪರಾರಿಯಾಗಿದ್ದಾರೆ.
- Malashree anchan
- Updated on: Mar 20, 2025
- 1:01 pm
ಕಾಲ್ ಸೆಂಟರ್ಗೆ ನುಗ್ಗಿ ಲ್ಯಾಪ್ಟಾಪ್, ಮಾನಿಟರ್ ಸೇರಿದಂತೆ ಸಿಕ್ಕಿದ್ದನ್ನೆಲ್ಲಾ ದೋಚಿದ ಪಾಕಿಸ್ತಾನದ ಜನ; ವಿಡಿಯೋ ವೈರಲ್
ಇತ್ತೀಚಿಗಷ್ಟೇ ಮದರಸದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದ ಊಟವನ್ನು ಸವಿಯಲು ಪಾಕಿಸ್ತಾನಿಯರು ಮುಗಿಬಿದ್ದ ಸುದ್ದಿಯೊಂದು ಸಖತ್ ವೈರಲ್ ಆಗಿತ್ತು. ಇದೀಗ ಇಲ್ಲೊಂದು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಚೀನಾ ಮೂಲದ ನಕಲಿ ಕಾಲ್ ಸೆಂಟರ್ಗೆ ನುಗ್ಗಿದ ಅಲ್ಲಿನ ಜನ ಲ್ಯಾಪ್ಟಾಪ್, ಮಾನಿಟರ್ ಸೇರಿದಂತೆ ಕೈಗೆ ಸಿಕ್ಕ ಬೆಳೆಬಾಳುವ ಉಪಕರಣಗಳನ್ನೆಲ್ಲಾ ಲೂಟಿ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
- Malashree anchan
- Updated on: Mar 20, 2025
- 11:43 am
Viral: ಭಾರತೀಯ ಪೌರತ್ವ ತೊರೆದು, ಖುಷಿ ಖುಷಿಯಾಗಿ ನ್ಯೂಜಿಲೆಂಡ್ ಪೌರತ್ವ ಸ್ವೀಕರಿಸಿದ ಯುವಕ; ವಿಡಿಯೋ ವೈರಲ್
ಮನೆ ಬಿಟ್ಟು ಅಥವಾ ತಾಯ್ನಾಡು ಬಿಟ್ಟು ಬೇರೆಡೆ ಹೋಗುತ್ತಿದ್ದೇವೆ ಎಂದ್ರೆ ಹೆಚ್ಚಿನವರು ಬಹಳ ದುಃಖ ಪಡ್ತಾರೆ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ಖುಷಿಯಲ್ಲಿ ಕುಣಿದಾಡುತ್ತಾ ಭಾರತೀಯ ಪೌರತ್ವ ತೊರೆದು ನ್ಯೂಜಿಲೆಂಡ್ ಪೌರತ್ವ ಸ್ವೀಕರಿಸಿದ್ದಾನೆ. ವೇದಿಕೆಯ ಮೇಲೆ ಭಾರತದ ಜೆರ್ಸಿ ಬಿಚ್ಚಿ ಕುಣಿದಾಡುತ್ತಾ ನ್ಯೂಜಿಲೆಂಡ್ ಪೌರತ್ವ ಸ್ವೀಕರಿಸಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕೆಲವರು ಈತನ ಈ ನಿಲುವನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಈತನದ್ದು ಇದು ತಪ್ಪು ನಿರ್ಧಾರ ಎಂದು ಕಿಡಿ ಕಾರಿದ್ದಾರೆ.
- Malashree anchan
- Updated on: Mar 20, 2025
- 8:26 am
ತೋಳದ ರೂಪದ ನಾಯಿ! 49 ಕೋಟಿ ಕೊಟ್ಟು ಜಗತ್ತಿನ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿನ ಶ್ವಾನ ಪ್ರೇಮಿ
Cadabom Okami: ಬೆಂಗಳೂರಿನ ಶ್ವಾನ ಪ್ರೇಮಿಯಾದ ಎಸ್. ಸತೀಶ್ ಎಂಬ ವ್ಯಕ್ತಿ ಅಪರೂಪದ ವುಲ್ಫ್-ಕಕೇಶಿಯನ್ ಶೆಫರ್ಡ್ ಹೈಬ್ರಿಡ್ ನಾಯಿಗಾಗಿ ಸುಮಾರು 50 ಕೋಟಿ ರೂ. ಖರ್ಚು ಮಾಡಿದ್ದಾರೆ. ಬೆಂಗಳೂರು ಮೂಲದ ನಾಯಿ ಬ್ರೀಡರ್ ಸತೀಶ್ ವಿಶ್ವದ ಅತ್ಯಂತ ದುಬಾರಿ ನಾಯಿ 'ವುಲ್ಫ್ಡಾಗ್' ಅನ್ನು 49.23 ಕೋಟಿ ರೂ (4.4 ಮಿಲಿಯನ್ ಪೌಂಡ್) ಖರ್ಚು ಮಾಡಿ ಬ್ರೀಡ್ ಮಾಡಿಸಿದ್ದಾರೆ. ಕ್ಯಾಡಬಾಮ್ ಒಕಾಮಿ ಎಂಬ ಜಾತಿಯ ಈ ನಾಯಿ ಅರ್ಧ ತೋಳ ಮತ್ತು ಅರ್ಧ ನಾಯಿಯ ರೂಪದಲ್ಲಿರುತ್ತದೆ. ಇದು ಜಗತ್ತಿನ ಅತ್ಯಂತ ದುಬಾರಿ ನಾಯಿಯಾಗಿದೆ.
- Sushma Chakre
- Updated on: Mar 19, 2025
- 8:08 pm
Viral: ದೈವಾರಾಧನೆಗೆ ಅಪಮಾನ; ದೈವದ ವೇಷ ಹಾಕಿ ವೇದಿಕೆ ಮೇಲೆ ನರ್ತನ ಮಾಡಿದ ಯುವಕ
ತುಳುನಾಡಿನ ದೈವಾರಾಧನೆ, ಭೂತಾರಾಧನೆಗೆ ಅದರದ್ದೇ ಆದ ನಿಯಮ, ಕಟ್ಟು ಪಾಡುಗಳಿವೆ. ಆದರೆ ಕಾಂತಾರ ಸಿನಿಮಾ ಬಂದ ಬಳಿಕ ಪಂಜುರ್ಲಿ ದೈವವನ್ನು, ದೈವಾರಾಧನೆ ಕಲೆಯನ್ನು ಅಣಕಿಸುವವರ, ದೈವದ ನೃತ್ಯ ಮಾಡಿ ಹುಚ್ಚಾಟ ಮೆರೆಯುವವರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಮತ್ತೊಂದು ಅಂತಹದ್ದೇ ಘಟನೆ ನಡೆದಿದ್ದು, ದೈವದ ವೇಷ ಹಾಕಿ ವೇದಿಕೆಯ ಮೇಲೆ ದೈವಕೋಲದ ಅನುಕರಣೆ ಮಾಡುವ ಮೂಲಕ ಯುವಕರಿಬ್ಬರು ತುಳುನಾಡಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
- Malashree anchan
- Updated on: Mar 17, 2025
- 5:34 pm