
Trending
ದೇಶದಲ್ಲಿ ನಡೆಯುವ ಅಚ್ಚರಿಯ ಘಟನೆಗಳನ್ನು ಹಾಗೂ ವೈರಲ್ ಆಗಿರುವ ಸುದ್ದಿಗಳನ್ನು ಇಲ್ಲಿ ಪ್ರಕಟ ಮಾಡಲಾಗುವುದು. ಜನರಿಗೆ ಆಸಕ್ತಿದಾಯಕ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್ ಕ್ಯಾಟಗರಿಯಲ್ಲಿ ತಿಳಿಸಲಾಗುವುದು
Viral : ನಡುರಸ್ತೆಯಲ್ಲೇ ಪತಿಯ ಎದೆ ಮೇಲೆ ಕುಳಿತು ಹಿಗ್ಗಾಮುಗ್ಗ ಥಳಿಸಿದ ಪತ್ನಿ, ವಿಡಿಯೋ ವೈರಲ್
ಪತಿ ಪತ್ನಿಯರ ನಡುವೆ ಜಗಳ ಸರ್ವೇ ಸಾಮಾನ್ಯ. ಆದರೆ ಎಷ್ಟೋ ಸಲ ಈ ಜಗಳಗಳು ಅತೀರೇಕಕ್ಕೆ ತಿರುಗಿ ಬೀದಿಗೆ ಬಂದ ಘಟನೆಗಳು ಸಾಕಷ್ಟು ನಡೆದಿದೆ. ಇದೀಗ ಇಂತಹದೊಂದು ಘಟನೆಯೂ ನಡೆದಿದೆ. ಇದೀಗ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪತಿ ಪತ್ನಿಯರಿಬ್ಬರೂ ನಡುರಸ್ತೆಯಲ್ಲೇ ಗುದ್ದಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ.
- Sainandha P
- Updated on: Apr 16, 2025
- 11:51 am
ಅಬ್ಬಬ್ಬಾ ಸೈಬರ್ ವಂಚಕನನ್ನೇ ಯಾಮಾರಿಸಿಯೇ ಬಿಟ್ಲು ಈ ಯುವತಿ, ವಿಡಿಯೋ ವೈರಲ್
ಇತ್ತೀಚೆಗಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಏನಾದರೂ ಹೇಳಿದರೆ ಸಾಕು ಅದನ್ನು ಕಣ್ಣು ಮುಚ್ಚಿ ನಂಬುವ ಅದೆಷ್ಟೋ ಜನರಿದ್ದಾರೆ. ಈ ಸೈಬರ್ ವಂಚಕರು ಸುಳ್ಳು ಹೇಳಿ ಹಣ ಪಡೆಯುವ ಮೂಲಕ ಈಗಾಗಲೇ ಜನರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದ್ದಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಸೈಬರ್ ವಂಚಕರನ್ನೇ ಯಾಮಾರಿಸಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈಕೆಯ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Sainandha P
- Updated on: Apr 16, 2025
- 10:59 am
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಈ ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಆಗಮಿಸಿ ಗಾಯಗೊಂಡ ಅಂಗಡಿ ಮಾಲೀಕರನ್ನು ತಕ್ಷಣ ಸಿವಿಲ್ ಆಸ್ಪತ್ರೆಗೆ ಸಾಗಿಸಿದರು. ಪಿರಾನ್ ಕಲಿಯಾರ್ನ ಮುಕರ್ರಬ್ಬೂರ್ ನಿವಾಸಿ ಆಸಿಫ್ ಸೋಮವಾರ ಸಂಜೆ ಸೊಹಲ್ಪುರ ರಸ್ತೆಯಲ್ಲಿರುವ ತಮ್ಮ ವೈದ್ಯಕೀಯ ಅಂಗಡಿಯಲ್ಲಿ ಕುಳಿತಿದ್ದಾಗ ಹಲವಾರು ಯುವಕರು ಕೋಲುಗಳು ಮತ್ತು ಲಾಠಿಗಳನ್ನು ಹಿಡಿದು ಆವರಣಕ್ಕೆ ಪ್ರವೇಶಿಸಿದರು. ಹತ್ತಿರದ ಅಂಗಡಿಯವರು ಗದ್ದಲಕ್ಕೆ ಪ್ರತಿಕ್ರಿಯಿಸಿದಾಗ ಹಲ್ಲೆಕೋರರು ಅಂಗಡಿ ಮಾಲೀಕರನ್ನು ತೀವ್ರವಾಗಿ ಥಳಿಸಿದರು ಮತ್ತು ಸ್ಥಳದಿಂದ ಪರಾರಿಯಾಗಿದರು.
- Sushma Chakre
- Updated on: Apr 15, 2025
- 10:04 pm
ತಂದೆಯ ಹಳೆಯ ಪಾಸ್ ಬುಕ್ನಿಂದಲೇ ಖುಲಾಯಿಸಿತು ಮಗನ ಅದೃಷ್ಟ, ಕೋಟಿಗಟ್ಟಲೇ ಹಣವು ಕೈ ಸೇರಿದ್ದು ಹೇಗೆ? ಇಲ್ಲಿದೆ ಮಾಹಿತಿ
ಅದೃಷ್ಟ ಯಾವಾಗ ಹೇಗೆ ಬದಲಾಗುತ್ತದೆ ಎಂದು ಹೇಳಲು ಅಸಾಧ್ಯ. ಕೆಲವರು ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧಿಪತಿಗಳಾಗಿರುವ ಘಟನೆಗಳನ್ನು ಕೇಳಿರಬಹುದು. ಆದರೆ, ವ್ಯಕ್ತಿಯೊಬ್ಬನಿಗೆ ಕಸದ ತೊಟ್ಟಿಯಲ್ಲಿ ತನ್ನ ತಂದೆಯ 62 ವರ್ಷದ ಹಳೆಯ ಪಾಸ್ಬುಕ್ ಸಿಕ್ಕಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ತಂದೆ ಮರಣ ಹೊಂದಿದ ಹತ್ತು ವರ್ಷಗಳ ಬಳಿಕ ಆತನ ಅದೃಷ್ಟವೇ ಬದಲಾಗಿದೆ. ಅದೇಗೆ ಅಂತೀರಾ ಈ ಕುರಿತಾದ ಕುತೂಹಕಾರಿಯಾದ ಮಾಹಿತಿ ಇಲ್ಲಿದೆ.
- Sainandha P
- Updated on: Apr 15, 2025
- 6:15 pm
RCB ಪರ ಮೋದಿ, CSK ಪರ ಅಮಿತ್ ಶಾ, ರಾಹುಲ್ ಗಾಂಧಿ ಯಾರ ಪರ? ಹೇಗಿದೆ ನೋಡಿ ರಾಜಕಾರಣಿಗಳ ಐಪಿಎಲ್ ತಂಡ
ಐಪಿಎಲ್ ಹಬ್ಬ ಆರಂಭವಾಗಿದೆ. ಎಲ್ಲ ಕಡೆ ಕ್ರಿಕೆಟ್ ಹುಚ್ಚು ಹೆಚ್ಚಿದೆ. ತಮ್ಮ ತಮ್ಮ ತಂಡಗಳ ಪರ ಗೆಲುವಿನ ಲೆಕ್ಕಚಾರ ಶುರುವಾಗಿದೆ. ಇದರ ಮಧ್ಯೆ ರಾಜಕಾರಣಿಗಳು ಒಂದು ವೇಳೆ ಐಪಿಎಲ್ಗೆ ಬಂದರೆ ಹೇಗಿರುತ್ತದೆ. ರಾಜಕೀಯ ಬಿಟ್ಟು ಯಾರು ಕ್ರಿಕೆಟ್ ಆಡಲು ಬರುತ್ತಾರೆ ಎಂಬ ಪ್ರಶ್ನೆಗಳು ಮೂಡಬಹುದು. ಆದರೆ ಎಐ ತಂತ್ರಜ್ಞಾನ ಅದನ್ನು ಮಾಡಿದೆ ನೋಡಿ. ಯಾವುದು ಅಸಾಧ್ಯವೋ ಅದನ್ನೇ ಈ ಕೃತಕ ಬುದ್ಧಿಮತ್ತೆ ಮಾಡಿ ತೋರಿಸುತ್ತದೆ. ಪ್ರಧಾನಿ ಮೋದಿ, ಅಮಿತ್ ಶಾ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಇನ್ನು ಅನೇಕ ನಾಯಕರು ಐಪಿಎಲ್ನಲ್ಲಿ ಆಡಲು ಬಂದಿದ್ದಾರೆ ನೋಡಿ.
- Sainandha P
- Updated on: Apr 15, 2025
- 3:19 pm
ಈಕೆ ಸೊಳ್ಳೆ ಕಂಡ್ರೆ ಬಿಡೋದೇ ಇಲ್ಲ, ಕೊಂದು ಏನ್ ಮಾಡ್ತಾಳೆ ನೋಡಿ
ಕೆಲವರು ವಿಚಿತ್ರವಾದ ಹವ್ಯಾಸವನ್ನು ಹೊಂದಿರುತ್ತಾರೆ. ಈ ರೀತಿಯ ಜನರು ಕಂಡಾಗ ಅಚ್ಚರಿಯಾಗೋದು ಸಹಜ. ಸಾಮಾನ್ಯವಾಗಿ ನಾವೆಲ್ಲರೂ ಸೊಳ್ಳೆಗಳು ಕಚ್ಚಿದರೆ ಅದನ್ನು ಸಾಯಿಸಿ ಬಿಸಾಡುತ್ತೇವೆ. ಆದರೆ ಈ ಯುವತಿ ಮಾತ್ರ ಸೊಳ್ಳೆ ಯನ್ನು ಸಾಯಿಸಿ, ಅದರ ಹೆಸರು, ಸತ್ತ ಸಮಯ ಹಾಗೂ ಸಮಯವನ್ನು ಬರೆದು ಸಂಗ್ರಹಿಸಿಡುತ್ತಾಳೆ. ಈ ಯುವತಿಯ ವಿಚಿತ್ರ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಶಾಕ್ ಆಗಿದ್ದಾರೆ.
- Sainandha P
- Updated on: Apr 15, 2025
- 2:07 pm
ನಾನು ಬದುಕಿರುವುದು ಎರಡೇ ತಿಂಗಳು ಎಂದು ಬದುಕಿರುವಾಗಲೇ ತನ್ನ ಅಂತಿಮ ವಿಧಿವಿಧಾನವನ್ನು ತಾನೇ ಮಾಡಿದ ಮಹಿಳೆ
ಮನುಷ್ಯನಿಗೆ ಸಾವು ಕಟ್ಟಿಟ್ಟ ಬುತ್ತಿ, ಅದು ಹೇಗೆ ಬರುತ್ತದೆ ಎಂಬ ತಿಳಿವಳಿಕೆಯೂ ನಮಗೆ ಇರಲ್ಲ. ಹೆಚ್ಚಾಗಿ ರೋಗಗಳಿಂದಲ್ಲೇ ಈ ಸಾವು ಎನ್ನುವುದು ಸಂಭವಿಸುತ್ತದೆ. ಅದರಲ್ಲೂ ಈ ಕ್ಯಾನ್ಸರ್ ಎನ್ನುವುದು ಯುವ ಸಮಾಜವನ್ನು ಕಾಡುತ್ತಿದೆ. ಅದೆಷ್ಟು ದಂಪತಿಗಳ ಜೀವಕ್ಕೆ ಇದು ಕರಾಳವಾಗಿದೆ. ಚೀನಾದ ಮಹಿಳೆಯೊಬ್ಬಳಿಗೆ ಈ ಕ್ಯಾನ್ಸರ್ ಎಂಬ ಕತ್ತಲೆ ಕಾಡಿದೆ. ನಾನು ಇನ್ನು ಎರಡು ತಿಂಗಳು ಬದುಕುವುದು ಎಂದು ಆಕೆ ತನ್ನ ಅಂತಿಮ ಕಾರ್ಯವನ್ನು ತಾನೇ ಮಾಡಿದ್ದಾಳೆ. ಇದೀಗ ಈ ಬಗ್ಗೆ ಎಲ್ಲ ಕಡೆ ವೈರಲ್ ಆಗಿದೆ.
- Sainandha P
- Updated on: Apr 15, 2025
- 1:42 pm
ಇದೊಂದು ಹೃದಯಸ್ಪರ್ಶಿ ವಿಡಿಯೋ : ಹಕ್ಕಿಗೆ ಆಹಾರ ನೀಡಿ ಹಸಿವು ನೀಗಿಸುತ್ತಿರುವ ಪುಟಾಣಿ
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಅದರಲ್ಲಿಯೂ ಈ ಪುಟಾಣಿಗಳ ವಿಡಿಯೋವನ್ನು ನೋಡುವ ಖುಷಿಯೇ ಬೇರೆ. ಮುಗ್ಧತೆ, ತರಲೆ, ತುಂಟಾಟಗಳು ಸಹಜವಾಗಿ ನೋಡುಗರ ಮನಸ್ಸನ್ನು ಗೆಲ್ಲುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿಯೊಂದು ಪುಟ್ಟ ಪಕ್ಷಿಗೆ ಆಹಾರವನ್ನು ನೀಡುತ್ತಿದೆ. ಈ ಪುಟಾಣಿಯ ಹೃದಯವಂತಿಕೆಯೂ ನೆಟ್ಟಿಗರ ಮನಸ್ಸನ್ನು ಗೆದ್ದುಕೊಂಡಿದ್ದು ಮೆಚ್ಚುಗೆಯ ಕಾಮೆಂಟ್ ಗಳನ್ನು ಮಾಡಿದ್ದಾರೆ.
- Sainandha P
- Updated on: Apr 15, 2025
- 11:40 am
ಸಿಂಹದೊಂದಿಗೆ ಸೆಲ್ಫಿ ಕ್ಲಿಕಿಸಲು ಹೋದ ವ್ಯಕ್ತಿ, ಮುಂದೇನಾಯ್ತು ನೋಡಿ
ಕೆಲವರಿಗೆ ಫೋಟೋ ಕ್ರೇಜ್ ಸಿಕ್ಕಾಪಟ್ಟೆ ಇರುತ್ತದೆ. ಹೀಗಾಗಿ ಸಿಕ್ಕ ಸಿಕ್ಕ ಜಾಗದಲ್ಲಿ ಕ್ಯಾಮೆರಾ ಗೆ ಪೋಸ್ ನೀಡುತ್ತಾ ಸೆಲ್ಫಿ ಕ್ಲಿಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಾರೆ. ಹೌದು, ಈಗಿನ ಕಾಲದ ಯುವಕರು ಕ್ರೂರ ಪ್ರಾಣಿಗಳ ಜೊತೆಗೆ ಸೆಲ್ಫಿ ಕ್ಲಿಕಿಸಲು ಹೋಗಿ ಎಡವಟ್ಟು ಮಾಡಿಕೊಳ್ಳುವುದೇ ಹೆಚ್ಚು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಸಿಂಹದೊಂದಿಗೆ ಸೆಲ್ಫಿ ಕ್ಲಿಕಿಸಲು ಹೋಗಿ ಜೀವಕ್ಕೆ ಸಂಚಕಾರ ತಂದುಕೊಂಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
- Sainandha P
- Updated on: Apr 15, 2025
- 11:17 am
ತರಗತಿ ಕೊಠಡಿ ತಂಪಾಗಿಸಲು ಸಾಂಪ್ರಾದಾಯಿಕ ವಿಧಾನದ ಮೊರೆ ಹೋದ ಪ್ರಾಂಶುಪಾಲೆ, ಇಲ್ಲಿದೆ ವಿಡಿಯೋ
ಈಗಿನ ಕಾಲದಲ್ಲಿ ಗೋಡೆಗೆ ಸೆಗಣಿ ಹಚ್ಚುವುದು ಬಿಡಿ ಅಂಗಳಕ್ಕೆ ಸೆಗಣಿ ಹಚ್ಚುವುದನ್ನು ನೋಡುವುದೇ ಕಡಿಮೆ. ಹಿಂದೆಲ್ಲಾ ಮನೆಯ ನೆಲ ಹಾಗೂ ಅಂಗಳಕ್ಕೆ ಸೆಗಣಿ ಹಚ್ಚಿ ಮನೆಯ ಅಂದವನ್ನು ಹೆಚ್ಚಿಸುತ್ತಿದ್ದರು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ದೆಹಲಿ ಕಾಲೇಜಿನ ಪ್ರಾಂಶುಪಾಲರೊಬ್ಬರು, ಬಿಸಿಲಿನ ಬೇಗೆಯಿಂದ ಶಾಖವನ್ನು ತಡೆಯಲು ಗೋಡೆಗಳಿಗೆ ಹಸುವಿನ ಸೆಗಣಿಯನ್ನು ಲೇಪಿಸಿದ್ದು, ಪ್ರಾಂಶುಪಾಲರ ಈ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Sainandha P
- Updated on: Apr 15, 2025
- 9:57 am