
Trending
ದೇಶದಲ್ಲಿ ನಡೆಯುವ ಅಚ್ಚರಿಯ ಘಟನೆಗಳನ್ನು ಹಾಗೂ ವೈರಲ್ ಆಗಿರುವ ಸುದ್ದಿಗಳನ್ನು ಇಲ್ಲಿ ಪ್ರಕಟ ಮಾಡಲಾಗುವುದು. ಜನರಿಗೆ ಆಸಕ್ತಿದಾಯಕ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್ ಕ್ಯಾಟಗರಿಯಲ್ಲಿ ತಿಳಿಸಲಾಗುವುದು
Optical Illusion : ಈ ಚಿತ್ರದಲ್ಲಿ ಅಡಗಿರುವ ಆನೆಯನ್ನು ನೀವು ಹುಡುಕುವುದಕ್ಕೆ ಸಾಧ್ಯ ಇದ್ಯಾ?
ಆಪ್ಟಿಕಲ್ ಇಲ್ಯೂಷನ್ ನೋಡುವುದಕ್ಕೆ ಬಹಳ ಸುಲಭವಾಗಿ ಕಂಡರೂ ಕೂಡ ಅದನ್ನು ಬಿಡಿಸುವುದು ಅಷ್ಟು ಸುಲಭವಾಗಿರುವುದಿಲ್ಲ. ಈ ರೀತಿಯ ಚಿತ್ರಗಳು ನಿಮ್ಮ ಮೆದುಳಿಗೆ ಕೆಲಸ ನೀಡುವುದು ಮಾತ್ರವಲ್ಲ, ನಿಮ್ಮ ಬುದ್ಧಿವಂತಿಕೆ ಹಾಗೂ ಯೋಚನಾಶಕ್ತಿ ಎಷ್ಟಿದೆ ಎಂಬುದನ್ನು ಕೂಡ ಪರೀಕ್ಷಿಸಲು ಸಹಾಯ ಮಾಡುತ್ತದೆ. ಈಗ ಅದೇ ರೀತಿಯ ಒಗಟಿನ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬ ವಿಚಿತ್ರ ವೇಷ ಧರಿಸಿ, ಖಡ್ಗ, ವಾದ್ಯಗಳನ್ನು ಹಿಡಿದುಕೊಂಡು ಸರ್ಕಸ್ ಟೆಂಟ್ ಬಳಿ ಹೋಗುತ್ತಿದ್ದಾನೆ. ಆದರೆ ಈ ಚಿತ್ರದಲ್ಲಿ ಆನೆಯೂ ಇದ್ದು ಅದು ಎಲ್ಲಿದೆ ಎಂಬುದನ್ನು ನೀವು ಕೇವಲ ಐದೇ ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು, ಅದು ನಿಮ್ಮಿಂದ ಸಾಧ್ಯನಾ?.
- Preethi Bhat Gunavante
- Updated on: Jun 21, 2025
- 6:16 pm
ಸೈಟ್ ಮಾರಿದ 19 ವರ್ಷಗಳ ಬಳಿಕ ಪರಿಹಾರ ಬೇಕೆಂದು ಖರೀದಿದಾರರ ಬಳಿ ಪಟ್ಟು ಹಿಡಿದ ಬೆಂಗಳೂರಿನ ಮಹಿಳೆ
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಒಂದಾದ ರೆಡ್ಡಿಡ್ನಲ್ಲಿ ಬಳಕೆದಾರರು ತಮ್ಮ ಸುಖ-ದುಃಖಗಳಿಗೆ ಸಂಬಂಧಪಟ್ಟ ಇಂಟರೆಸ್ಟಿಂಗ್ ಸ್ಟೋರಿಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಇಲ್ಲೊಬ್ಬ ಬಳಕೆದಾರರು ತಮಗಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದು, ನನ್ನ ತಂದೆ 2006 ರಲ್ಲಿ ಬೆಂಗಳೂರಿನಲ್ಲಿ ಒಂದು ಜಮೀನು ಖರೀದಿಸಿದ್ದರು, ಇದೀಗ ಮಾರಾಟಗಾರನ ಮಗಳು ತನಗೆ ನ್ಯಾಯಯುತ ಪರಿಹಾರ ನೀಡಬೇಕೆಂದು ನೋಟಿಸ್ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.
- Malashree anchan
- Updated on: Jun 21, 2025
- 3:47 pm
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ದೊಡ್ಡ ಗಾತ್ರದ ಮರವೊಂದು ತೇಲಿಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ನೀರಿನ ಹರಿವಿನೊಂದಿಗೆ ಬೇರು ಸಮೇತ ತೇಲಿ ಬಂದ ಮರಕ್ಕೆ ಸೇತುವೆ ಅಡ್ಡವಾಯಿತು. ಆದರೆ, ಆ ಸೇತುವೆಯ ಅಡಿಯಲ್ಲಿ ತೂರಿಕೊಂಡ ಆ ಬೃಹತ್ ಮರ ಮತ್ತೆ ನೀರಿನೊಂದಿಗೆ ವಿಲೀನವಾಯಿತು. ಈ ದೃಶ್ಯವನ್ನು ನೋಡಲು ಸುತ್ತಲೂ ಊರಿನ ಜನರು ಸೇರಿದ್ದರು.
- Sushma Chakre
- Updated on: Jun 17, 2025
- 10:53 pm
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಮುದ್ದಾಗಿ ಥ್ಯಾಂಕ್ಸ್ ಹೇಳಿದ ಆನೆ ಮರಿ
ಛತ್ತೀಸ್ಗಢದ ರಾಯಗಢದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಗುಂಡಿಯಿಂದ ಮರಿ ಆನೆಯನ್ನು ರಕ್ಷಿಸಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಆನೆಯನ್ನು ರಕ್ಷಿಸಿದ ನಂತರ ಆ ಆನೆಮರಿಯ ಹೃದಯಸ್ಪರ್ಶಿ ಸೂಚನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜೂನ್ 3ರಂದು ನಡೆದ ರಕ್ಷಣಾ ಕಾರ್ಯಾಚರಣೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಿಲ್ಕಗುಡ ಗ್ರಾಮದ ಬಳಿ ಮರಿಯಾನೆ ಗುಂಡಿಗೆ ಬಿದ್ದಿತ್ತು.
- Sushma Chakre
- Updated on: Jun 6, 2025
- 10:35 pm
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಭಾರತ ಮೂಲದ ಅರ್ಷಿದ್ ವೈದ್ಯಕೀಯ ಅಧ್ಯಯನಕ್ಕಾಗಿ ಮೂರು ವರ್ಷಗಳ ಹಿಂದೆ ವಿಯೆಟ್ನಾಂಗೆ ತೆರಳಿದ್ದರು. ಅವರ ಪೋಷಕರು ಬಟ್ಟೆ ವ್ಯಾಪಾರಿ ಅರ್ಜುನ್ ಮತ್ತು ಪ್ರತಿಮಾ ಎಂಬುವವರು. ಅರ್ಷಿದ್ ವೈದ್ಯಕೀಯ ಅಧ್ಯಯನಕ್ಕಾಗಿ 3 ವರ್ಷಗಳ ಹಿಂದೆ ವಿಯೆಟ್ನಾಂಗೆ ತೆರಳಿದ್ದರು. ಅವರ ಪೋಷಕರು ಬಟ್ಟೆ ವ್ಯಾಪಾರಿ ಅರ್ಷಿದ್ ಅರ್ಜುನ್ ಮತ್ತು ಪ್ರತಿಮಾ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಶಾಸಕ ಡಾ. ಪಿ. ಹರೀಶ್ ಬಾಬು ಅವರು ಅರ್ಷಿದ್ ಅವರ ಮನೆಗೆ ಭೇಟಿ ನೀಡಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅವರು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಶವವನ್ನು ಭಾರತಕ್ಕೆ ಕಳುಹಿಸಲು ಅನುಕೂಲ ಮಾಡಿಕೊಡುವಂತೆ ವಿನಂತಿಸಿದರು.
- Sushma Chakre
- Updated on: Jun 5, 2025
- 8:16 pm
ಡಿಜಿಟಲ್ ಪಾವತಿಗೆ ಮೊಬೈಲ್ ಬೇಕಿಲ್ಲ, ಕೈಯ ಉಗುರಿನಿಂದ ಪಾವತಿ ಸಾಧ್ಯ
ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ. ಹೀಗಾಗಿ ಹಣಕಾಸಿನ ವ್ಯವಹಾರದಿಂದ ಹಿಡಿದು ಪ್ರತಿಯೊಂದು ಕೆಲಸ ಕಾರ್ಯಗಳು ಡಿಜಿಟಲ್ ಮಯವಾಗಿದೆ. ಈಗ ಎಲ್ಲಿ ನೋಡಿದರಲ್ಲಿಯೂ ಯುಪಿಐ ವಹಿವಾಟುನದ್ದೇ ಕಾರುಬಾರು. ಆದರೆ ಇನ್ನು ಮುಂದೆ ನೀವು ಕೈಯಲ್ಲಿನ ಉಗುರುನಿಂದ ಹಣ ಪಾವತಿಸಬಹುದು. ಇದಕ್ಕೆ ಸಂಬಂಧಿಸಿದ ಪೋಸ್ಟ್ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಹೊಸ ತಂತ್ರಜ್ಞಾನ ನೋಡಿ ಶಾಕ್ ಆಗಿದ್ದಾರೆ.
- Sainandha P
- Updated on: Jun 1, 2025
- 4:02 pm
ವೇದಿಕೆ ಮೇಲೆ ಹಾಡು ಹಾಡುತ್ತಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಮಾಜಿ ಶಿಕ್ಷಕ
ಇತ್ತೀಚಿನ ದಿನಗಳಲ್ಲಿ ಹಿರಿಯರು ಮಕ್ಕಳೆನ್ನದೆ ಎಲ್ಲಾ ವಯೋಮಿತಿಯವರು ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ. ಇಂತಹದ್ದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರದಲ್ಲಿ ಮಾಜಿ ಶಿಕ್ಷಕರೊಬ್ಬರು ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಖುಷಿ ಖುಷಿಯಿಂದ ಹಾಡು ಹಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
- Malashree anchan
- Updated on: May 31, 2025
- 5:15 pm
ಚೀಫ್ ಹ್ಯಾಪಿನೆಸ್ ಆಫೀಸರ್ ಆಗಿ ನೇಮಕಗೊಂಡ ಶ್ವಾನ, ಇದು ವಿಶೇಷ ಹುದ್ದೆ
ಸಾಮಾನ್ಯವಾಗಿ ಕಂಪನಿಯೂ ಹೊಸ ಉದ್ಯೋಗಿಯನ್ನು ನೇಮಕ ಮಾಡಿಕೊಳ್ಳುತ್ತಾರೆ ಎಂದಾದರೆ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುವುದು ಸಹಜ. ಆದರೆ ಕಂಪನಿಯೊಂದು ವಿಶೇಷ ಹುದ್ದೆಗೆ ಆಯ್ಕೆ ಮಾಡಿಕೊಂಡಿರುವುದು ವ್ಯಕ್ತಿಯನ್ನಲ್ಲ ಬದಲಾಗಿ ಶ್ವಾನವನ್ನು. ಹೌದು, ಕಂಪನಿಯೊಂದು ಶ್ವಾನವೊಂದನ್ನು ಚೀಪ್ ಹ್ಯಾಪಿನೆಸ್ ಆಫೀಸರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಾದ್ರೆ ಈ ಶ್ವಾನ ಏನಪ್ಪಾ ಕೆಲಸ ಮಾಡಲು ಸಾಧ್ಯ ಎನ್ನುವ ಪ್ರಶ್ನೆಯೊಂದು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
- Sainandha P
- Updated on: May 28, 2025
- 5:17 pm
ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಕಲಿಸಿದ ಮೇಘಾಲಯ ಸಿಎಂ; ಸರಳತನಕ್ಕೆ ಭಾರೀ ಮೆಚ್ಚುಗೆ
ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಶಾಲಾ ಭೇಟಿಯ ಸಮಯದಲ್ಲಿ ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಕಲಿಸುತ್ತಿರುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದ್ದು, ಇದಕ್ಕೆ ಜನರ ಮೆಚ್ಚುಗೆ ವ್ಯಕ್ತವಾಗಿದೆ. ರಿ-ಭೋಯ್ ಜಿಲ್ಲೆಯ ಪಹಮ್ಜುಲಾ ಗ್ರಾಮದಲ್ಲಿರುವ ಸ್ಥಳೀಯ ಶಾಲೆಗೆ ಭೇಟಿ ನೀಡಿದ ಸಿಎಂ, ಈ ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಕಲಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವಿದ್ಯಾರ್ಥಿ ಸ್ವರಮೇಳ ನುಡಿಸಲು ಕಷ್ಟಪಡುತ್ತಿರುವುದನ್ನು ಸಂಗ್ಮಾ ಗಮನಿಸಿದ್ದಾರೆ. ಆದ್ದರಿಂದ ಅವರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗೆ ಗಿಟಾರ್ ನುಡಿಸಲು ಸಹಾಯ ಮಾಡಿದರು. ಈ ವಿಡಿಯೋವನ್ನು ಸಿಎಂ ಸ್ವತಃ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
- Sushma Chakre
- Updated on: May 26, 2025
- 10:24 pm
ಫೋನ್ ಟ್ಯಾಪಿಂಗ್ ನಿಂದ ಬದಲಾಯ್ತು ಅದೃಷ್ಟ, 231 ಕೋಟಿ ಗೆದ್ದು, ಕೋಟ್ಯಾಧಿಪತಿಯಾದ ವ್ಯಕ್ತಿಯ ಕಥೆಯಿದು
ಈಗಿನ ಕಾಲದಲ್ಲಿ ಕೈಯಲ್ಲಿ ದುಡ್ಡಿದ್ರೆ ಮಾತ್ರ ಬೆಲೆ. ಹೀಗಾಗಿ ಕೆಲವರು ಕಳ್ಳ ದಾರಿ ಮೂಲಕ ಹಣ ಸಂಪಾದಿಸುವುದನ್ನು ನೋಡಿರಬಹುದು. ಕೆಲವರು ಕಷ್ಟ ಪಟ್ಟು ದುಡಿದ ಹಣ ಸಂಪಾದಿಸುತ್ತಾರೆ. ಇನ್ನು ಕೆಲವರು ಇದ್ದಾರೆ, ಕಷ್ಟ ಪಡದೆ ತಮ್ಮ ಅದೃಷ್ಟದಿಂದಲೇ ಲಾಟರಿ ಇತ್ಯಾದಿಗಳಿಂದ ಲಕ್ಷಾಧಿಪತಿ, ಕೋಟ್ಯಾಧಿಪತಿಗಳಾಗುತ್ತಾರೆ. ಇಲ್ಲೊಬ್ಬ ನಿವೃತ್ತ ಇಂಜಿನಿಯರ್ ಅವರ ಅದೃಷ್ಟವೇ ಖುಲಾಯಿಸಿದೆ. ಹೌದು, ಯುಎಇಯ 'ಎಮಿರೇಟ್ಸ್ ಡ್ರಾ'ದಲ್ಲಿ 231 ಕೋಟಿ ರೂಪಾಯಿ ಗೆಲ್ಲುವ ಮೂಲಕ ರಾತ್ರಿ ಬೆಳಗಾಗುವಷ್ಟರಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಹಾಗಾದ್ರೆ ಈ ವ್ಯಕ್ತಿಯ ಅದೃಷ್ಟ ಖುಲಾಯಿಸಿದ್ದು ಹೇಗೆ? ಎನ್ನುವ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
- Sainandha P
- Updated on: May 26, 2025
- 4:47 pm