AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending

Trending

ದೇಶದಲ್ಲಿ ನಡೆಯುವ ಅಚ್ಚರಿಯ ಘಟನೆಗಳನ್ನು ಹಾಗೂ ವೈರಲ್​​ ಆಗಿರುವ ಸುದ್ದಿಗಳನ್ನು ಇಲ್ಲಿ ಪ್ರಕಟ ಮಾಡಲಾಗುವುದು. ಜನರಿಗೆ ಆಸಕ್ತಿದಾಯಕ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್​​​ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್​​​ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್​​​ ಕ್ಯಾಟಗರಿಯಲ್ಲಿ ತಿಳಿಸಲಾಗುವುದು

ಇನ್ನೂ ಹೆಚ್ಚು ಓದಿ

Viral: ಆರೋಗ್ಯ ಸರಿಯಿಲ್ಲ, ವರ್ಕ್ ಫ್ರಮ್ ಹೋಮ್ ಮಾಡ್ತೇನೆ; ಉದ್ಯೋಗಿಯ ಮಾತಿಗೆ ಮ್ಯಾನೇಜರ್ ಏನಂದ್ರು ನೋಡಿ

ಖಾಸಗಿ ಕಂಪನಿಗಳಲ್ಲಿನ ಉದ್ಯೋಗಿಗಳು ರಜೆ ಹಾಗೂ ವರ್ಕ್ ವಿಷ್ಯದಲ್ಲಿನ ಮ್ಯಾನೇಜರ್ ಜತೆಗೆ ನಡೆಸುವ ಸಂಭಾಷಣೆಗಳು ಆಗಾಗ್ಗೆ ವೈರಲ್ ಆಗುತ್ತವೆ. ಆದರೆ ಇದೀಗ ಉದ್ಯೋಗಿಯೊಬ್ಬರು ಮ್ಯಾನೇಜರ್‌ ಜೊತೆಗಿನ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮ್ಯಾನೇಜರ್‌ನ ಒಳ್ಳೆಯ ಗುಣವನ್ನು ಮೆಚ್ಚಿಕೊಂಡಿದ್ದಾರೆ. ಈ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ರಸ್ತೆ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್‌ ಕೊಟ್ಟ ಪೌರಕಾರ್ಮಿಕರು

ಸ್ವಚ್ಛತೆಯ ಬಗ್ಗೆ ಜಾಗೃತಿ ವಹಿಸಿ ಅಂದ್ರು ಯಾರು ಕೂಡ ಕ್ಯಾರೆ ಎನ್ನದವರೇ ಹೆಚ್ಚು. ಎಲ್ಲೆಂದರಲ್ಲಿ ಕಸ ಸುರಿದು ಹೋಗ್ತಾರೆ. ಇದೀಗ ಅಂತಹವರಿಗಾಗಿಯೇ ರಸ್ತೆ ಬದಿ ಬ್ಯಾನರ್ ಹಾಕಿ ಪೌರಕಾರ್ಮಿಕರು ಖಡಕ್ ವಾರ್ನಿಂಗ್ ನೀಡಿದ್ದಾರೆ . ವ್ಯಕ್ತಿಯೊಬ್ಬ ಈ ಬ್ಯಾನರ್ ಹಾಕಿರುವುದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಹಂಚಿಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಆಟೋದಲ್ಲಿ ಅಳುತ್ತಾ ಕುಳಿತಿದ್ದ ಯುವತಿಗೆ ಧೈರ್ಯ ತುಂಬಿದ ಡ್ರೈವರ್, ಕಾರಣ ಇದೇ ನೋಡಿ

ಈಗಿನ ಕಾಲದಲ್ಲಿ ಬೇರೆಯವರ ಕಷ್ಟಕ್ಕೆ ಸ್ಪಂದಿಸುವವರು ಸಿಗೋದೇ ಕಡಿಮೆ. ಆದರೆ ಇಲ್ಲೊಬ್ಬ ಆಟೋ ಡ್ರೈವರ್ ತನ್ನ ಒಳ್ಳೆಯ ನಡೆ ನುಡಿಯಿಂದಲೇ ಗಮನ ಸೆಳೆದಿದ್ದಾನೆ. ತನ್ನ ಆಟೋದಲ್ಲಿ ಅಳುತ್ತಾ ಕುಳಿತಿದ್ದ ಯುವತಿಗೆ ಸಾಂತ್ವನ ನೀಡಿದ್ದಾನೆ. ಈ ಹೃದಯ ಸ್ಪರ್ಶಿ ಘಟನೆಯ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು; ವಿಡಿಯೋ ವೈರಲ್

ಆನೆಗಳ ಹಿಂಡು ರೈಲ್ವೆ ಹಳಿಯನ್ನು ಸುರಕ್ಷಿತವಾಗಿ ದಾಟುವ ಸಲುವಾಗಿ ಅಸ್ಸಾಂನ ಹೋಜಾಯ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ತಡೆಯಲಾಯಿತು. ಡೌನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಆಗಮಿಸುತ್ತಿದ್ದಾಗ, ಹವಾಯ್‌ಪುರದ ಬಳಿ ಕಾಡಾನೆಗಳ ಹಿಂಡು ರೈಲ್ವೆ ಹಳಿಯನ್ನು ದಾಟಲು ಯತ್ನಿಸುತ್ತಿರುವುದನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಗಮನಿಸಿದರು. ಅರಣ್ಯ ಸಿಬ್ಬಂದಿ, ಲೋಕೋ-ಪೈಲಟ್ ಮತ್ತು ಲುಮ್ಡಿಂಗ್ ರೈಲ್ವೆ ನಿಯಂತ್ರಣ ಕೊಠಡಿಯ ತಕ್ಷಣದ ಜಾಗರೂಕತೆಯ ಕ್ರಮದಿಂದಾಗಿ ಆನೆಗಳ ಹಿಂಡು ಹಳಿಯನ್ನು ಸುರಕ್ಷಿತವಾಗಿ ದಾಟಿತು.

Viral: ಕೆಲಸ ಬಿಟ್ಟು ಮನೆಯಲ್ಲಿ ಇರ್ಬೇಕು; ಯುವಕನ ಕಂಡೀಶನ್ ಕೇಳಿ ಪ್ರಪೋಸಲ್ ರಿಜೆಕ್ಟ್ ಮಾಡಿದ ಐಟಿ ಉದ್ಯೋಗಿ

ಈಗಿನ ಕಾಲದಲ್ಲಿ ಮದುವೆ ಆಗಲು ಹುಡ್ಗಿ ಸಿಗೋದೇ ಕಷ್ಟ. ಹೀಗಿರುವಾಗ ಮದುವೆ ಆಗುವ ಹುಡ್ಗಿಗೆ ಕಂಡೀಶನ್ ಹಾಕಿದ್ರೆ ಯಾರು ಕೇಳಲ್ಲ. ಐಟಿ ಕೆಲಸ ಬಿಡಲು ಯುವಕ ಹೇಳುತ್ತಿದ್ದಂತೆ ಯುವತಿ ಪ್ರಪೋಸಲ್‌ನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ಈ ಪೋಸ್ಟ್ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಈ ಯುವತಿಯ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: 45 ದಿನಕ್ಕೂ ಮುಂಚಿತವಾಗಿ ರಜೆ ಕೇಳಿದ್ರೂ ಕೊಡದ ಮ್ಯಾನೇಜರ್; ನೆಟ್ಟಿಗರಲ್ಲಿ ಸಲಹೆ ಕೇಳಿದ ಉದ್ಯೋಗಿ

ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ರಜೆ ಸಿಗೋದು. ಇದೀಗ ಕಂಪನಿಯಲ್ಲಿ ಕೆಲಸ ಮಾಡುವ ತನ್ನ ಪತ್ನಿಗೆ ಆದ ಅನುಭವದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಹೌದು, ಒಂದು ತಿಂಗಳಿಗೂ ಮುಂಚಿತವಾಗಿ ರಜೆ ಕೇಳಿದ್ರು ಮ್ಯಾನೇಜರ್ ಮಾತ್ರ ರಜೆ ಕೊಡಲಿಲ್ಲವಂತೆ. ಹೀಗಾಗಿ ಈ ಪೋಸ್ಟ್‌ ಹಂಚಿಕೊಂಡು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ರೈಲಿನಲ್ಲಿ ಪ್ರಯಾಣಿಕರಿಗೆ ಬಿಳಿ ಬಣ್ಣದ ಬೆಡ್ ಶೀಟ್ ಕೊಡುವುದರ ಹಿಂದಿದೆ ಕಾರಣ

ಸಾಮಾನ್ಯವಾಗಿ ನಾವೆಲ್ಲಾ ಡ್ರೆಸ್ ಅಥವಾ ಸೀರೆ ಖರೀದಿಸಲು ಹೋದ್ರೆ ಬಿಳಿ ಬಣ್ಣದ ಉಡುಗೆಗಳ ಖರೀದಿಯತ್ತ ಅಷ್ಟಾಗಿ ಮನಸ್ಸು ಮಾಡುವುದಿಲ್ಲ. ಬಿಳಿ ಬಣ್ಣದ ಉಡುಪು ಬೇಗನೆ ಕೊಳೆಯಾಗುತ್ತವೆ. ಆದರೆ ಈ ರೈಲಿನಲ್ಲಿ ಬಿಳಿ ಬಣ್ಣದ ಬೆಡ್​​​​​ಶೀಟನ್ನೇ ಬಳಸುತ್ತಾರೆ. ಬಿಳಿ ಬಣ್ಣದ ಬೆಡ್​​​​​ಶೀಟ್ ಹಾಗೂ ದಿಂಬನ್ನು ಬಳಸುವುದರ ಹಿಂದೆ ಸ್ವಚ್ಫತೆ ಹಾಗೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂಬ ಕಾರಣವು ಅಡಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಈ ಯುವಕನನ್ನು ವರಿಸಲು ಅಂದ ಚಂದ ಇದ್ರೆ ಸಾಲಲ್ಲ, ಹುಡ್ಗಿಯಲ್ಲಿ ಈ ಗುಣಗಳಿರಲೇ ಬೇಕು

ಈಗಿನ ಕಾಲದಲ್ಲಿ ಮದುವೆಯಾಗಲು ಹುಡುಗಿಯೇ ಸಿಗುತ್ತಿಲ್ಲ. ಹುಡುಗಿ ಸಿಕ್ಕರೆ ಸಾಕು ಎನ್ನುವ ಗಂಡು ಮಕ್ಕಳ ನಡುವೆ ಇಲ್ಲೊಬ್ಬ ಯುವಕನು ಈ ಗುಣಗಳು ತಾನು ಮದುವೆಯಾಗುವ ಹುಡುಗಿಯಲ್ಲಿ ಇರ್ಬೇಕು ಎಂದು ಷರತ್ತುಗಳನ್ನು ಹಾಕಿದ್ದಾನೆ. ಈ ಗುಣಗಳಿದ್ರೆ ಮದ್ವೆಗೆ ಓಕೆ, ಇಲ್ಲದಿದ್ದರೆ ರಿಜೆಕ್ಟ್ ಎಂದಿದ್ದಾನೆ. ಈ ಪೋಸ್ಟ್‌ ಸದ್ಯ ವೈರಲ್‌ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಇಂದು ಅವರಿಬ್ಬರ ಸರದಿ, ಮುಂದೆ ನನ್ನದು; ಕಾರ್ಪೊರೇಟ್ ಜಗತ್ತಿನ ಉದ್ಯೋಗ ಅಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಉದ್ಯೋಗಿ

ಖಾಸಗಿ ಹಾಗೂ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಉದ್ಯೋಗ ಭದ್ರತೆ ಇರೋದಿಲ್ಲ. ಇದೀಗ ಐಟಿ ಉದ್ಯೋಗಿ ಮಾಡಿದ ಪೋಸ್ಟ್ ಇದಕ್ಕೆ ಸಾಕ್ಷಿಯಾಗಿದೆ. ತನ್ನ ಕಣ್ಣಾರೆ ಸಹ ಉದ್ಯೋಗಿಗಳನ್ನು ವಜಾಗೊಳಿಸಿದ ಕಂಪನಿಯ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಅವರ ಸರದಿ, ಮುಂದೆ ನನ್ನ ಸರದಿ ಎಂಬ ಕಟು ಸತ್ಯವನ್ನು ಹೇಳಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದರ ಹಿಂದಿದೆ ಈ ಕಾರಣ

ಐಷಾರಾಮಿ ಅಥವಾ ಹೈ ಫೈವ್ ಹೋಟೆಲ್ ಗೆ ಹೋದಾಗ ಅಲ್ಲಿ ಗಾಜಿನಿಂದ ಮಾಡಲ್ಪಟ್ಟ ಬಾತ್ ರೂಮ್‌ನ್ನು ನೀವು ಗಮನಿಸಿರುತ್ತೀರಿ. ಈ ರೀತಿ ವಿನ್ಯಾಸವಿರಲು ಕಾರಣವಿದೆ. ಹೌದು, ರೂಮ್‌ ದೊಡ್ಡದಾಗಿ ಕಾಣಿಸಲು ಹಾಗೂ ನೈಸರ್ಗಿಕ ಬೆಳಕು ಕೊಠಡಿಯೊಳಗೆ ಬರಲು ಐಷಾರಾಮಿ ಹೋಟೆಲ್ ಕೊಠಡಿಗಳಲ್ಲಿ ಬಾತ್‌ರೂಮ್‌ಗೆ ಗಾಜನ್ನು ಬಳಸಲಾಗುತ್ತದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

Video: ಇದು ಕಾರ್ಪೋರೆಟ್ ಜಗತ್ತು; ಟ್ರಾಫಿಕ್ ಜಾಮ್‌ ನಡುವೆಯೇ ಬೈಕ್‌ನಲ್ಲಿ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಿದ ವ್ಯಕ್ತಿ

ದುಡಿಯೋದು ಅನಿವಾರ್ಯ, ಹೀಗಾಗಿ ಕೆಲವರು ಹಗಲು ರಾತ್ರಿ ಎನ್ನದೇ ದುಡಿಯುತ್ತಾರೆ. ಈ ಕಾರ್ಪೋರೇಟ್ ಜಗತ್ತಿನಲ್ಲಿ ಒತ್ತಡ ಹೆಚ್ಚು. ಇಲ್ಲೊಬ್ಬ ಉದ್ಯೋಗಿಯದ್ದು ಅದೇ ಕಥೆ. ಟ್ರಾಫಿಕ್ ನಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬ ತನ್ನ ಬೈಕ್ ಮೇಲೆ ಲ್ಯಾಪ್ ಟಾಪ್ ಹಿಡಿದು ಕೆಲಸ ಮಾಡಲು ಶುರು ಮಾಡಿದ್ದಾನೆ. ಇದು ಭಾರತೀಯ ಕೆಲಸದ ಸಂಸ್ಕೃತಿಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಓದಲು ವಯಸ್ಸಿನ ಮಿತಿಯಿಲ್ಲ; ಐಐಟಿ ಮದ್ರಾಸ್​​ನಲ್ಲಿ ಒಟ್ಟಿಗೇ ಪದವಿ ಪಡೆದ ತಾಯಿ-ಮಗ!

ಇತ್ತೀಚೆಗೆ ನಡೆದ ಪ್ರತಿಷ್ಠಿತ ಐಐಟಿ ಮದ್ರಾಸ್ ಘಟಿಕೋತ್ಸವದಲ್ಲಿ ಜಗತ್ತೇ ಮೆಚ್ಚುವಂತಹ ಅಪರೂಪದ ಹಾಗೂ ಪ್ರೇರಣಾದಾಯಿ ಘಟನೆಯೊಂದು ನಡೆದಿದೆ. 45 ವರ್ಷದ ತಾಯಿ ಜಿಗೀಷಾ ಟೇಲರ್ ಮತ್ತು ಅವರ 21 ವರ್ಷದ ಮಗ ಆದಿತ್ಯ ಕಪಾಡಿಯಾ ಇಬ್ಬರೂ ಒಟ್ಟಿಗೆ ಒಂದೇ ವೇದಿಕೆಯ ಮೇಲೆ ಐಐಟಿ ಪದವಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಇಬ್ಬರೂ ಒಟ್ಟಿಗೆ ವೇದಿಕೆ ಹತ್ತಿ ಪದವಿ ಸ್ವೀಕರಿಸುತ್ತಿದ್ದಾಗ ಇಡೀ ಸಭಾಂಗಣ ಚಪ್ಪಾಳೆಗಳಿಂದ ಮೊಳಗಿತ್ತು. ಗುಜರಾತ್‌ನ ಭರೂಚ್ ಮೂಲದವರಾದ ಜಿಗೀಷಾ ಟೇಲರ್ ಈ ಮೂಲಕ ಶಿಕ್ಷಣಕ್ಕೆ ವಯಸ್ಸು ಅಡ್ಡಿಯಾಗಲಾರದು ಎಂಬುದನ್ನು ಸಾಬೀತಪಡಿಸಿ ತೋರಿಸಿದ್ದಾರೆ.

ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು
ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ: ಗೃಹ ಸಚಿವ ಖರ್ಗೆ ಖಡಕ್ ಎಚ್ಚರಿಕೆ
ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ: ಗೃಹ ಸಚಿವ ಖರ್ಗೆ ಖಡಕ್ ಎಚ್ಚರಿಕೆ
4 ವರ್ಷದೊಳಗೆ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್
4 ವರ್ಷದೊಳಗೆ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್