AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರದೀಪ್ ಈಶ್ವರ್​​​​ ಭೇಟಿಗೆ ಸದ್ಗುರು ಅವಕಾಶ ನೀಡಬಾರದಿತ್ತು: ಸಂಸದ ಡಾ. ಸುಧಾಕರ್

ಪ್ರದೀಪ್ ಈಶ್ವರ್​​​​ ಭೇಟಿಗೆ ಸದ್ಗುರು ಅವಕಾಶ ನೀಡಬಾರದಿತ್ತು: ಸಂಸದ ಡಾ. ಸುಧಾಕರ್

ಅಕ್ಷಯ್​ ಪಲ್ಲಮಜಲು​​
|

Updated on: Sep 30, 2025 | 4:18 PM

Share

ಶಾಸಕ ಪ್ರದೀಪ್ ಈಶ್ವರ್ ಅವರು ಅಭಿವೃದ್ದಿ ಕಡೆ ಗಮನ ನೀಡುತ್ತಿಲ್ಲ. ಶಂಕುಸ್ಥಾಪನೆಗೊಂಡ ಯೋಜನೆಗಳ ವಿಳಂಬಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಸಂಸದ ಡಾ.ಸುಧಾಕರ್​ ದೂಷಿಸಿದ್ದಾರೆ. ತಾತ್ಕಾಲಿಕ, ತಾಂತ್ರಿಕ ಹಾಗೂ ಕಾನೂನು ಸಮಸ್ಯೆಗಳಿಂದ ಕಾಮಗಾರಿಗಳು ನಿಂತಿವೆ. ಅಲ್ಲದೆ, ಐಷಾರಾಮಿ ಮೂರ್ತಿಗಳ ನಿರ್ಮಾಣದ ಬದಲು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುಬೇಕು. ನಿಮ್ಮ ಕೆಲಸ ನೋಡಿ ನಂತರ ಜನರೇ ನಿಮಗೆ ಮೂರ್ತಿ ಮಾಡಿಸುತ್ತಾರೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಯಾವುದೇ ಕೆಲಸವನ್ನು ಮಾಡುತ್ತಿಲ್ಲ. ನಾವು ಶಂಕುಸ್ಥಾಪನೆ ಮಾಡಿದ ಹಲವಾರು ಯೋಜನೆಗಳನ್ನು ಕಾಂಗ್ರೆಸ್​​​ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಸಂಸದ ಡಾ. ಸುಧಾಕರ್ ಟೀಕಿಸಿದ್ದಾರೆ. ​​​​​​​ ಅನೇಕ ಅಭಿವೃದ್ಧಿ ಕಾರ್ಯಗಳು ತಾತ್ಕಾಲಿಕ, ತಾಂತ್ರಿಕ ಮತ್ತು ಕಾನೂನು ಸಮಸ್ಯೆಗಳಿಂದ ಸ್ಥಗಿತಗೊಂಡಿವೆ ಎಂದು ಅವರು ಆರೋಪಿಸಿದ್ದಾರೆ. ನಮ್ಮ ಸರ್ಕಾರ ಅಧಿಕಾರಿ ಬಂದರೆ ಯಾವುದೇ ಸಮಸ್ಯೆಗಳಿಲ್ಲದೆ ತಾವು ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಪ್ರದೀಪ್ ಈಶ್ವರ್ ಹೇಳಿದರು. ಈಗ ಆ ಮಾತುಗಳು ಎಲ್ಲಿಗೆ ಹೋಗಿದೆ ಎಂದು ಕೇಳಿದ್ದಾರೆ. ಇನ್ನು ಸದ್ಗುರು ಜಗ್ಗಿವಾಸುದೇವ್ ಅವರ ಇಶಾ ಫಂಡೇಶನ್​​​​​ ಚಿಕ್ಕಬಳ್ಳಾಪುರದಲ್ಲಿ ಸ್ಥಾಪನೆ ಮಾಡುತೇವೆ ಎಂದಾಗ ನಮ್ಮ ಬಿಜೆಪಿ ಸರ್ಕಾರ ಎಲ್ಲ ರೀತಿಯ ಸಹಾಯ ಹಾಗೂ ಸಹಕಾರವನ್ನು ನೀಡಿದ್ದೇವೆ. ಆದರೆ ಈಗಿನ ಸರ್ಕಾರ ಅದೆಲ್ಲವನ್ನು ಮೊಟಕುಗೊಳಿಸಿದೆ. ಈಗ ಪ್ರದೀಪ್ ಈಶ್ವರ್ ಅವರು ಹೋಗಿ ಸದ್ಗುರು ಅವರ ಕಾಲಿಗೆ ಬೀಳುತ್ತಿದ್ದಾರೆ. ನನ್ನ ಪ್ರಕಾರ ಸದ್ಗುರು ಪ್ರದೀಪ್ ಈಶ್ವರ್ ಅವರಿಗೆ ಅವಕಾಶನೇ ನೀಡಬಾರದಿತ್ತು ಎಂದು ಸುಧಾಕರ್​​​ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ