AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಿಶ್ರೀ ಪ್ರಸಾದ್ ಎದುರು ತಮ್ಮ ಮ್ಯೂಸಿಕ್ ಹಿಸ್ಟರಿ ಬಿಚ್ಚಿಟ್ಟ ಸಾಧುಕೋಕಿಲ

ದೇವಿಶ್ರೀ ಪ್ರಸಾದ್ ಎದುರು ತಮ್ಮ ಮ್ಯೂಸಿಕ್ ಹಿಸ್ಟರಿ ಬಿಚ್ಚಿಟ್ಟ ಸಾಧುಕೋಕಿಲ

ಮಂಜುನಾಥ ಸಿ.
|

Updated on: Mar 05, 2025 | 1:45 PM

Share

Sadhu Kokila: ತೆಲುಗಿನ ಸಂಗೀತ ನಿರ್ದೇಶಕರುಗಳ ನಡುವಿನ ಸಂಬಂಧದ ಬಗ್ಗೆ ಸಾಧುಕೋಕಿಲ ಮಾತನಾಡಿದ್ದಾರೆ. ಈಗ ತೆಲುಗಿನಲ್ಲಿ ಟಾಪ್​ನಲ್ಲಿರುವ ತಮನ್, ತಮಿಳಿನ ಹ್ಯಾರಿಸ್ ಅವರುಗಳು ತಮಗಾಗಿ ಕೆಲಸ ಮಾಡಿದ್ದರು ಎಂದು ಸಾಧುಕೋಕಿಲ ಹೇಳಿದರು. ಇದು ದೇವಿಶ್ರೀ ಪ್ರಸಾದ್​ಗೆ ಆಶ್ಚರ್ಯ ತಂದಿತು. ದೇವಿಶ್ರೀ ಪ್ರಸಾದ್ ಬೆಂಗಳೂರು ಫಿಲಂ ಫೆಸ್ಟ್​ಗೆ ಅತಿಥಿಯಾಗಿ ಆಗಮಿಸಿದ್ದರು.

ಕನ್ನಡ ಸಿನಿಮಾ ಪ್ರೇಕ್ಷಕರಿಗೆ, ಪರಭಾಷೆಯವರಿಗೂ ಸಹ ಸಾಧುಕೋಕಿಲ ಹಾಸ್ಯನಟನಾಗಿ ಬಹಳ ಜನಪ್ರಿಯ. ಆದರೆ ಅವರೊಬ್ಬ ಬಹಳ ಒಳ್ಳೆಯ ಸಂಗೀತ ನಿರ್ದೇಶಕ. ಹಲವಾರು ನೆನಪುಳಿಯುವ ಹಾಡುಗಳನ್ನು ಸಾಧುಕೋಕಿಲ ನೀಡಿದ್ದಾರೆ. ನಿನ್ನೆಯಷ್ಟೆ ಬೆಂಗಳೂರು ಫಿಲಂ ಫೆಸ್ಟ್​ಗೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಆಗಮಿಸಿದ್ದರು. ಈ ವೇಳೆ ತಮ್ಮ ಹಾಗೂ ತೆಲುಗಿನ ಸಂಗೀತ ನಿರ್ದೇಶಕರುಗಳ ನಡುವಿನ ಸಂಬಂಧದ ಬಗ್ಗೆ ಸಾಧುಕೋಕಿಲ ಮಾತನಾಡಿದರು. ಈಗ ತೆಲುಗಿನಲ್ಲಿ ಟಾಪ್​ನಲ್ಲಿರುವ ತಮನ್, ತಮಿಳಿನ ಹ್ಯಾರಿಸ್ ಅವರುಗಳು ತಮಗಾಗಿ ಕೆಲಸ ಮಾಡಿದ್ದರು ಎಂದು ಸಾಧುಕೋಕಿಲ ಹೇಳಿದರು. ಇದು ದೇವಿಶ್ರೀ ಪ್ರಸಾದ್​ಗೆ ಆಶ್ಚರ್ಯ ತಂದಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More