AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ನದಿ ನೀರು ವಿಚಾರದಲ್ಲಿ ಯಾವ ಕಾರಣಕ್ಕೂ ರಾಜ್ಯದ ಹಿತ ಬಲಿಕೊಡಲ್ಲ: ಜಿ ಪರಮೇಶ್ವರ, ಗೃಹ ಸಚಿವ

ಕಾವೇರಿ ನದಿ ನೀರು ವಿಚಾರದಲ್ಲಿ ಯಾವ ಕಾರಣಕ್ಕೂ ರಾಜ್ಯದ ಹಿತ ಬಲಿಕೊಡಲ್ಲ: ಜಿ ಪರಮೇಶ್ವರ, ಗೃಹ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 21, 2023 | 5:15 PM

Share

ಸೋನಿಯಾ ಗಾಂಧಿಯವರು ಯಾವ ಸಂವೈಧಾನಿಕ ಅಧಿಕಾರದಲ್ಲಿ ಮಧ್ಯೆ ಪ್ರವೇಶಿಸುವುದು ಸಾಧ್ಯ? ಅವರ ಮಾತನ್ನು ತಮಿಳುನಾಡು ಸರ್ಕಾರ ಯಾಕೆ ಕೇಳುತ್ತದೆ? ಎಂದು ಅವರು ಹೇಳಿದರು. ತಮ್ಮ ಸರ್ಕಾರ ಖಂಡಿತವಾಗಿಯೂ ರಾಜ್ಯದ ಹಿತ ಕಾಪಾಡುತ್ತದೆ, ಮುಖ್ಮಮಂತ್ರಿ ಸಿದ್ದರಾಮಯ್ಯ ದೆಹಲಿಯಿಂದ ವಾಪಸ್ಸಾದ ಬಳಿಕ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದು ಪರಮೇಶ್ವರ ಹೇಳಿದರು.

ಬೆಂಗಳೂರು: ಇಂಡಿಯ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ (DMK) ಜೊತೆ ವಿರಸವೇರ್ಪಡಬಾರದು ಅನ್ನೋ ಕಾರಣಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ (Congress government) ತಮಿಳುನಾಡು ಕಾವೇರಿ ನದಿ ನೀರು ಹರಿಬಿಟ್ಟು ನಾಡಿನ ರೈತರ ಹಿತಾಸಕ್ತಿಯನ್ನು ಬಲಿ ಕೊಟ್ಟಿದೆ ಎಂಬ ಆರೋಪವನ್ನು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ತಳ್ಳಿ ಹಾಕಿದರು. ಇಂದು ಸುಪ್ರೀಮ್ ಕೋರ್ಟ್ ತೀರ್ಪು ಹೊರಬಿದ್ದ ಬಳಿಕ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಹಾಗೆ ಮಾಡಬೇಕಿದ್ದರೆ ಇಷ್ಟೆಲ್ಲ ಹೋರಾಟ ನಡೆಸುವ ಅಗತ್ಯ ಸರ್ಕಾರಕ್ಕಿರಲಿಲ್ಲ, ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಳ್ಳುವ ಅಗತ್ಯ ಸರ್ಕಾರಕ್ಕಿಲ್ಲ, ಪ್ರಾಧಿಕಾರ 15,000 ಕ್ಯೂಸೆಕ್ಸ್ ನೀರು ಬಿಡುವಂತೆ ಹೇಳಿತ್ತು, ಆದರೆ ನಾವು ಕಾಡಿ ಬೇಡಿ ಅದನ್ನು 5,000 ಕ್ಯೂಸೆಕ್ ಗಳಿಗೆ ಇಳಿಸಿದೆವು ಎಂದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿ ಡಿಎಂಕೆ ನಾಯಕರಿಗೆ ಹೇಳಬೇಕು ಎಂಬ ವಾದವನ್ನೂ ಪರಮೇಶ್ವರ್ ಅಲ್ಲಗಳೆದರು. ಸೋನಿಯಾ ಗಾಂಧಿಯವರು ಯಾವ ಸಂವೈಧಾನಿಕ ಅಧಿಕಾರದಲ್ಲಿ ಮಧ್ಯೆ ಪ್ರವೇಶಿಸುವುದು ಸಾಧ್ಯ? ಅವರ ಮಾತನ್ನು ತಮಿಳುನಾಡು ಸರ್ಕಾರ ಯಾಕೆ ಕೇಳುತ್ತದೆ? ಎಂದು ಅವರು ಹೇಳಿದರು. ತಮ್ಮ ಸರ್ಕಾರ ಖಂಡಿತವಾಗಿಯೂ ರಾಜ್ಯದ ಹಿತ ಕಾಪಾಡುತ್ತದೆ, ಮುಖ್ಮಮಂತ್ರಿ ಸಿದ್ದರಾಮಯ್ಯ ದೆಹಲಿಯಿಂದ ವಾಪಸ್ಸಾದ ಬಳಿಕ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದು ಪರಮೇಶ್ವರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ