ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಇರುವ ಪೂರ್ಣಿಮಾ ಪ್ಯಾಲೇಸ್ನಲ್ಲಿ ತರುಣ್ ಸುಧೀರ್ ಮತ್ತು ಸೋನಲ್ ಮಾಂತೆರೋ ಅವರ ಆರತಕ್ಷತೆ ಸಮಾರಂಭ ಜರುಗಿದೆ. ಅನೇಕ ಸೆಲೆಬ್ರಿಟಿಗಳು ಬಂದು ಆಶೀರ್ವಾದ ಮಾಡಿದ್ದಾರೆ. ನಟಿ ಸಂಜನಾ ಗಲ್ರಾನಿ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಎದುರು ಈ ಮದುವೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಇದು ಸಂಭ್ರಮದ ಕ್ಷಣ. ಜಾತಿ ಭೇದ ನೋಡದೇ ಇಬ್ಬರ ಮನಸ್ಸು, ಕುಟುಂಬ ಒಂದಾಗಿದೆ. ಜಾತಿ ಭೇದ-ಭಾವ ಇಲ್ಲದೇ ನಾವು ಒಂದಾಗಿ ಇರಬೇಕು ಎಂಬುದನ್ನು ಕರ್ನಾಟಕದಲ್ಲಿ ನಾವು ಕಲಿಯಬೇಕು. ಇಂಥ ಮಿಲನದ ಜೊತೆಯೇ ನಾವು ಬದುಕಬೇಕು’ ಎಂದು ಸಂಜನಾ ಗಲ್ರಾನಿ ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:05 pm, Sat, 10 August 24