ಕರ್ನಾಟಕ ವಿಧಾನ ಪರಿಷತ್ ಸದಸ್ಯರಿಗೆ ಶರವಣ ವತಿಯಿಂದ ಚಿನ್ನ ಲೇಪಿತ ಗಂಡಬೇರುಂಡ ಲಾಂಛನ ವಿತರಣೆ
ಚಿನ್ನಾಭರಣ ಉದ್ಯಮಿಯೂ ಆಗಿರುವ ಜೆಡಿಎಸ್ ಎಂಎಲ್ಸಿ ಟಿಎ ಶರವಣ ಕರ್ನಾಟಕ ವಿಧಾನಪರಿಷತ್ ಎಲ್ಲ ಸದಸ್ಯರಿಗೆ ಸರ್ಕಾರದ ಅಧಿಕೃತ ಲಾಂಛನವಾದ ಗಂಡಬೇರುಂಡವನ್ನು ವಿತರಣೆ ಮಾಡಿದ್ದಾರೆ. ಬೆಳ್ಳಿಯ ಅಚ್ಚಿನಲ್ಲಿ ನಿರ್ಮಿಸಿದ ಚಿನ್ನಲೇಪಿತ ಲಾಂಛನ ಇದಾಗಿದೆ. ಮಂಗಳವಾರ ವಿಧಾನಪರಿಷತ್ನಲ್ಲಿ ಲಾಂಛನ ವಿತರಣೆ ಮಾಡಲಾಯಿತು. ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು, ಆಗಸ್ಟ್ 19: ಕರ್ನಾಟಕ ವಿಧಾನ ಪರಿಷತ್ ಸದಸ್ಯರಿಗೆ ಜೆಡಿಎಸ್ ಎಂಎಲ್ಸಿ ಟಿಎ ಶರವಣ ವತಿಯಿಂದ ಅಚ್ಚಿನ ಬೆಳ್ಳಿ ಲೋಹದ ಮೇಲೆ ಬಂಗಾರದ ಲೇಪನ ಹಾಕಿ ಸಿದ್ದಪಡಿಸಿರುವ ಕರ್ನಾಟಕ ಸರ್ಕಾರದ ಲಾಂಛನ ಗಂಡಬೇರುಂಡವನ್ನು ಮಂಗಳವಾರ ವಿತರಣೆ ಮಾಡಲಾಯಿತು. ಶರವಣ ಎಂಎಲ್ಸಿಗಳಿಗೆ ಲಾಂಛನ ಸಿದ್ದಪಡಿಸಿದ್ದಾರೆ. ಅವರ ವ್ಯಾಪಾರದಲ್ಲಿ ಶ್ರಮ ಪಟ್ಟು ಗಳಿಸಿದ್ದಾರೆ. ಅದರಲ್ಲಿ ಲಾಂಛನ ಸಿದ್ಧಪಡಿಸಿ ನಮ್ಮೆಲ್ಲರಿಗೂ ತಂದುಕೊಟ್ಟಿದ್ದಾರೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದರು.