ಕರ್ನಾಟಕ ವಿಧಾನ ಪರಿಷತ್ ಸದಸ್ಯರಿಗೆ ಶರವಣ ವತಿಯಿಂದ ಚಿನ್ನ ಲೇಪಿತ ಗಂಡಬೇರುಂಡ ಲಾಂಛನ ವಿತರಣೆ

Updated on: Aug 19, 2025 | 11:54 AM

ಚಿನ್ನಾಭರಣ ಉದ್ಯಮಿಯೂ ಆಗಿರುವ ಜೆಡಿಎಸ್ ಎಂಎಲ್​ಸಿ ಟಿಎ ಶರವಣ ಕರ್ನಾಟಕ ವಿಧಾನಪರಿಷತ್ ಎಲ್ಲ ಸದಸ್ಯರಿಗೆ ಸರ್ಕಾರದ ಅಧಿಕೃತ ಲಾಂಛನವಾದ ಗಂಡಬೇರುಂಡವನ್ನು ವಿತರಣೆ ಮಾಡಿದ್ದಾರೆ. ಬೆಳ್ಳಿಯ ಅಚ್ಚಿನಲ್ಲಿ ನಿರ್ಮಿಸಿದ ಚಿನ್ನಲೇಪಿತ ಲಾಂಛನ ಇದಾಗಿದೆ. ಮಂಗಳವಾರ ವಿಧಾನಪರಿಷತ್​​ನಲ್ಲಿ ಲಾಂಛನ ವಿತರಣೆ ಮಾಡಲಾಯಿತು. ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಆಗಸ್ಟ್ 19: ಕರ್ನಾಟಕ ವಿಧಾನ ಪರಿಷತ್ ಸದಸ್ಯರಿಗೆ ಜೆಡಿಎಸ್ ಎಂಎಲ್​ಸಿ ಟಿಎ ಶರವಣ ವತಿಯಿಂದ ಅಚ್ಚಿನ ಬೆಳ್ಳಿ ಲೋಹದ ಮೇಲೆ ಬಂಗಾರದ ಲೇಪನ ಹಾಕಿ ಸಿದ್ದಪಡಿಸಿರುವ ಕರ್ನಾಟಕ ಸರ್ಕಾರದ ಲಾಂಛನ ಗಂಡಬೇರುಂಡವನ್ನು ಮಂಗಳವಾರ ವಿತರಣೆ ಮಾಡಲಾಯಿತು. ಶರವಣ ಎಂಎಲ್​​ಸಿಗಳಿಗೆ ಲಾಂಛನ ಸಿದ್ದಪಡಿಸಿದ್ದಾರೆ. ಅವರ ವ್ಯಾಪಾರದಲ್ಲಿ ಶ್ರಮ ಪಟ್ಟು ಗಳಿಸಿದ್ದಾರೆ. ಅದರಲ್ಲಿ ಲಾಂಛನ ಸಿದ್ಧಪಡಿಸಿ ನಮ್ಮೆಲ್ಲರಿಗೂ ತಂದುಕೊಟ್ಟಿದ್ದಾರೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More