AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಾನಂದ ಪಾಟೀಲ್ ಮತ್ತು ಬಸನಗೌಡ ಯತ್ನಾಳ್ ಒಟ್ಟಿಗೆ ಹೋಗಿ ರಾಜೀನಾಮೆ ಸಲ್ಲಿಸಲಿ: ಎಸ್​ಅರ್ ವಿಶ್ವನಾಥ್

ಶಿವಾನಂದ ಪಾಟೀಲ್ ಮತ್ತು ಬಸನಗೌಡ ಯತ್ನಾಳ್ ಒಟ್ಟಿಗೆ ಹೋಗಿ ರಾಜೀನಾಮೆ ಸಲ್ಲಿಸಲಿ: ಎಸ್​ಅರ್ ವಿಶ್ವನಾಥ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 05, 2025 | 12:56 PM

ಬಸನಗೌಡ ಯತ್ನಾಳ್ ಮತ್ತು ಶಿವಾನಂದ ಪಾಟೀಲ್ ತಮ್ಮ ಮಾತು ಹಾಗೂ ಕಾರ್ಯಗಳಿಂದ ಜನರ ದಿಕ್ಕು ತಪ್ಪಿಸುವ ಬದಲು ಇಬ್ಬರೂ ಒಟ್ಟಿಗೆ ವಿಧಾನಸಭಾಧ್ಯಕ್ಷರ ಬಳಿಗೆ ಹೋಗಿ ರಾಜೀನಾನಮೆ ಪತ್ರ ಸಲ್ಲಿಸಲಿ ಮತ್ತು ಯಾವ ಕ್ಷೇತ್ರದಿಂದ ತಾವಿಬ್ಬರು ಪ್ರತಿಸ್ಪರ್ಧಿಗಳಾಗಿ ಸ್ಪರ್ಧಿಸಬೇಕೆಂದು ನಿರ್ಧರಿಸಿ ಚುನಾವಣೆ ಎದುರಿಸಲಿ ಎಂದು ಬಿಜೆಪಿ ಶಾಸಕ ವಿಶ್ವನಾಥ್ ಹೇಳಿದರು.

ಬೆಂಗಳೂರು, ಮೇ 5: ಬಿಜೆಪಿ ಶಾಸಕ ಎಸ್​ಅರ್ ವಿಶ್ವನಾಥ್, ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರಿಂದ ಸಮಾನ ಅಂತರವನ್ನು ಕಾಯ್ದುಕೊಂಡಂತಿದೆ. ಶಿವಾನಂದ ಕಾಂಗ್ರೆಸ್ ಪಕ್ಷದವರಾದರೆ ಬಸನಗೌಡ ಬಿಜೆಪಿಯಿಂದ ಉಚ್ಚಾಟಿತರು! ನಗರದಲ್ಲಿಂದು ಮಾತಾಡಿದ ವಿಶ್ವನಾಥ್ ಅವರು ಶಿವಾನಂದ ಪಾಟೀಲ್ ರಾಜೀನಾಮೆ ಸಲ್ಲಿಸಿರುವುದು ಒಂದು ನಾಟಕ, ರಾಜೀನಾಮೆ ಸಲ್ಲಿಸುವವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಅಂತಷ್ಟೇ ತಮ್ಮ ಪತ್ರದಲ್ಲಿ ಬರೆಯುತ್ತಾರೆ, ಷರತ್ತುಬದ್ಧ ರಾಜೀನಾಮೆ ಪತ್ರ ಅಂಗೀಕಾರ ಅಗೋದಿಲ್ಲ ಶಿವಾನಂದಗೂ ಗೊತ್ತು, ಹಾಗಾಗಿ ಬರೀ ಡ್ರಾಮಾ ಎಂದು ಹೇಳಿದರು.

ಇದನ್ನೂ ಓದಿ:  ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಖಡ್ಗ ನೀಡಿ ಸತ್ಕರಿಸಿದ ಎಸ್​ಅರ್ ವಿಶ್ವನಾಥ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ