Karnataka Assembly Polls: ದೆಹಲಿಯಲ್ಲಿ ನಿನ್ನೆ ಸುರ್ಜೆವಾಲ ಕಾರಲ್ಲಿ ಒಟ್ಟಿಗೆ ಪಯಣಿಸಿದ್ದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಂದು ಬೇರೆ ಬೇರೆ ಕಾರುಗಳಲ್ಲಿ!
ಇಂಥ ಸಣ್ಣ ವಿಷಯಕ್ಕೆಲ್ಲ ಏನೇನೋ ಕಲ್ಪಿಸಿಕೊಳ್ಳುವುದು ತರವಲ್ಲವಾದರೂ ಸಿದ್ದರಾಮಯ್ಯ ಮತ್ತು ಶಿವಕುಮಾರ ನಡುವೆ ಸಾಗುತ್ತಾ ಬಂದಿರುವ ಶೀತಲ ಸಮರ ನಮ್ಮನ್ನು ಆ ಅನಿವಾರ್ಯತೆಗೆ ದೂಡುತ್ತದೆ.
ನವದೆಹಲಿ: ಇದು ಉದ್ದೇಶರಹಿತವೋ, ಉದ್ದೇಶಪೂರ್ವಕವೋ ಅಥವಾ ಕಾಕತಾಳೀಯವೋ ಅಂತ ಗೊತ್ತಾಗುತ್ತಿಲ್ಲ. ನಿನ್ನೆ ಕನ್ನಡಿಗರೆಲ್ಲ ಇದನ್ನು ಗಮನಿಸಿದ್ದಾರೆ, ವಿಷಯವೇನೆಂದರೆ, ದೆಹಲಿಯಲ್ಲಿ ನಿನ್ನೆ ರಂದೀಪ್ ಸುರ್ಜೆವಾಲಾ (Randeep Surjewala) ಕಾರಲ್ಲಿ ಓಡಾಡುವಾಗ ಸಿದ್ದರಾಮಯ್ಯ (Siddaramaiah) ಮುಂದಿನ ಸೀಟಿನಲ್ಲಿ ಆಸೀನರಾಗಿದ್ದರೆ, ಡಿಕೆ ಶಿವಕುಮಾರ್ (DK Shivakumar) ಮತ್ತು ಎಂಬಿ ಪಾಟೀಲ ಹಿಂಭಾಗದಲ್ಲಿ ಕೂತಿದ್ದರು. ಆದರೆ ಇಂದು ಅದೇ ಸುರ್ಜೆವಾಲಾ ಕಾರಲ್ಲಿ ಶಿವಕುಮಾರ್ ಮುಂದೆ ಕೂತಿದ್ದರೆ ಸಿದ್ದರಾಮಯ್ಯ ಬೇರೆ ಕಾರಲ್ಲಿದ್ದರು. ಇಂಥ ಸಣ್ಣ ವಿಷಯಕ್ಕೆಲ್ಲ ಏನೇನೋ ಕಲ್ಪಿಸಿಕೊಳ್ಳುವುದು ತರವಲ್ಲವಾದರೂ ಸಿದ್ದರಾಮಯ್ಯ ಮತ್ತು ಶಿವಕುಮಾರ ನಡುವೆ ಸಾಗುತ್ತಾ ಬಂದಿರುವ ಶೀತಲ ಸಮರ ನಮ್ಮನ್ನು ಆ ಅನಿವಾರ್ಯತೆಗೆ ದೂಡುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
