AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Polls: ಬಾದಾಮಿ ಜನರ ಪ್ರೀತಿ ಕಂಡು ಕರಗಿದ ಸಿದ್ದರಾಮಯ್ಯನವರ ಬಾಯಿಂದ ಮಾತು ಹೊರಡಲಿಲ್ಲ!

Assembly Polls: ಬಾದಾಮಿ ಜನರ ಪ್ರೀತಿ ಕಂಡು ಕರಗಿದ ಸಿದ್ದರಾಮಯ್ಯನವರ ಬಾಯಿಂದ ಮಾತು ಹೊರಡಲಿಲ್ಲ!

TV9 Web
| Edited By: |

Updated on:Feb 14, 2023 | 1:54 PM

Share

ವಿರೋಧ ಪಕ್ಷದ ನಾಯಕ ಅವರನ್ನು ಪ್ರೀತಿಯಿಂದ ಗದರಿದಂತೆ, ಹೊಡೆದಂತೆ ಮಾಡುತ್ತಾರೆ ಆದರೆ ಅವರ ಬಾಯಿಂದ ಮಾತೇ ಹೊರಡುವುದಿಲ್ಲ.

ಬೆಂಗಳೂರು: ಬಾದಾಮಿ ಜನರ ಪ್ರೀತಿ ಕಂಡು ಸಿದ್ದರಾಮಯ್ಯ (Siddaramaiah) ದಂಗಾಗಿದ್ದಾರೆ, ಮೂಕವಿಸ್ಮಿತರಾಗಿದ್ದಾರೆ. ಬೆಳಗ್ಗೆ ಸಿದ್ದರಾಮಯ್ಯನವರ ಮನೆ ಮುಂದೆ ಬಾದಾಮಿಯ (Badami) ಹತ್ತಾರು ಜನ ಮಾತ್ರ ಕಾಣಿಸಿದರು. ಆದರೆ ಬಿಸಿಲೇರುತ್ತಿದ್ದಂತೆ ಜನರ ಸಂಖ್ಯೆಯೂ ಹೆಚ್ಚಾಗತೊಡಗಿತು. ಈ ವಿಡಿಯೋದಲ್ಲಿ ನೋಡಿ, ಬಾದಾಮಿಯ ಸಾವಿರಾರು ಜನ ಸಿದ್ದರಾಮಯ್ಯನವರ ಮನೆ ಮುಂದೆ ಜಮಾಯಿಸಿದ್ದಾರೆ. ಆಗಲೇ ಹೇಳಿದಂತೆ, ಅವರೆಲ್ಲರ ಅಗ್ರಹ ಒಂದೇ-ಸಿದ್ದರಾಮಯ್ಯ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (assembly polls) ಬಾದಾಮಿಯಿಂದಲೇ ಸ್ಪರ್ಧಿಸಬೇಕು. ಜನ ಸಿದ್ದರಾಮಯ್ಯನವರಿಗೆ ಮಾತಾಡುವ ಅವಕಾಶವನ್ನೇ ನೀಡುತ್ತಿಲ್ಲ. ವಿರೋಧ ಪಕ್ಷದ ನಾಯಕ ಅವರನ್ನು ಪ್ರೀತಿಯಿಂದ ಗದರಿದಂತೆ, ಹೊಡೆದಂತೆ ಮಾಡುತ್ತಾರೆ ಆದರೆ ಅವರ ಬಾಯಿಂದ ಮಾತೇ ಹೊರಡುವುದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 14, 2023 01:51 PM