AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ಸಿದ್ದರಾಮಯ್ಯ ಮಾತು ಆರಂಭಿಸುವಾಗ ಡಿಕೆ ಶಿವಕುಮಾರ್ ಹೆಸರು ಮರೆತಿದ್ದು ಅಚಾತುರ್ಯವೋ?

Karnataka Assembly Polls: ಸಿದ್ದರಾಮಯ್ಯ ಮಾತು ಆರಂಭಿಸುವಾಗ ಡಿಕೆ ಶಿವಕುಮಾರ್ ಹೆಸರು ಮರೆತಿದ್ದು ಅಚಾತುರ್ಯವೋ?

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 17, 2023 | 11:39 AM

ನಂತರ ಸಿದ್ದರಾಮಯ್ಯ, ಸಾರಿ ಅಂತ ಹೇಳುತ್ತಾ, ಪಕ್ಕದಲ್ಲಿರುವವರ ಹೆಸರೇ ಮರೆತುಹೋಗುತ್ತದೆ ಎನ್ನುತ್ತಾರೆ. ಅವರ ಮಾತಿಗೆ ಶಿವಕುಮಾರ್ ಸೇರಿ ಎಲ್ಲರೂ ಜೋರಾಗಿ ನಗುತ್ತಾರೆ.

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಮಾತಾಡುವಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ವೇದಿಕೆ ಮೇಲೆ ಕುಳಿತ ಎಲ್ಲ ನಾಯಕರ ಹೆಸರು ಹೇಳುತ್ತಾ ಸಂಬೋಧಿಸುತ್ತಾರಾದರೂ ತಮ್ಮ ಎಡಪಕ್ಕದಲ್ಲೇ ಕೂತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೆಸರು ಹೇಳುವುದನ್ನು ಮರೆತುಬಿಡುತ್ತಾರೆ. ಅದು ಅಚಾತುರ್ಯವೋ, ಉದ್ದೇಶಪೂರ್ವಕವೋ ಅಂತ ಅವರೇ ಹೇಳಬೇಕು. ಸಿದ್ದರಾಮಯ್ಯ ಬಲಪಕ್ಕ ಕೂತಿದ್ದ ಎಮ್ ಬಿ ಪಾಟೀಲ್ ಅವರಿಗೆ ಶಿವಕುಮಾರ್ ಹೆಸರು ಮರೆತಿದ್ದನ್ನು ಜ್ಞಾಪಿಸುತ್ತಾರೆ. ಆಗ, ಸಿದ್ದರಾಮಯ್ಯ, ಸಾರಿ ಅಂತ ಹೇಳುತ್ತಾ, ಪಕ್ಕದಲ್ಲಿರುವವರ ಹೆಸರೇ ಮರೆತುಹೋಗುತ್ತದೆ ಎನ್ನುತ್ತಾರೆ. ಅವರ ಮಾತಿಗೆ ಶಿವಕುಮಾರ್ ಸೇರಿ ಎಲ್ಲರೂ ಜೋರಾಗಿ ನಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ