Karnataka Assembly Polls 2023; ಸಿದ್ದರಾಮಯ್ಯ ರಾಜ್ಯದ ಒಬ್ಬ ಹಿರಿಯ ಮುತ್ಸದ್ದಿ, ಅವರು ಬಳಸುವ ಭಾಷೆ ಹಿರಿತನಕ್ಕೆ ಅನುಗುಣವಾಗಿರಬೇಕು: ವಿ ಸೋಮಣ್ಣ

ಅವರೀಗ ವಿರೋಧ ಪಕ್ಷದ ನಾಯಕನೂ ಅಲ್ಲ, ಮತ್ತು ತಾನು ಮಂತ್ರಿಯೂ ಅಲ್ಲ, ತಮ್ಮಿಬ್ಬರಲ್ಲಿ ಯಾರು ಹೆಚ್ಚು ಸಮರ್ಥರು ಅನ್ನೋದನ್ನು ಜನ ನಿರ್ಧರಿಸುತ್ತಾರೆ ಎಂದು ಸೋಮಣ್ಣ ಮಾರ್ಮಿಕವಾಗಿ ಹೇಳಿದರು.

Karnataka Assembly Polls 2023; ಸಿದ್ದರಾಮಯ್ಯ ರಾಜ್ಯದ ಒಬ್ಬ ಹಿರಿಯ ಮುತ್ಸದ್ದಿ, ಅವರು ಬಳಸುವ ಭಾಷೆ ಹಿರಿತನಕ್ಕೆ ಅನುಗುಣವಾಗಿರಬೇಕು: ವಿ ಸೋಮಣ್ಣ
|

Updated on:Apr 21, 2023 | 10:46 AM

ಚಾಮರಾಜನಗರ: ವರುಣಾ ಕ್ಷೇತ್ರದಲ್ಲಿ ಬೆಜೆಪಿ ಅಭ್ಯರ್ಥಿ ವಿ ಸೋಮಣ್ಣ (V Somanna) ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ (Siddaramaiah) ನಡುವೆ ಮಾತಿನ ಕಾಳಗ ಶುರುವಾಗಿದೆ. ಸಿದ್ದರಾಮಯ್ಯ ಆಕ್ರಾಮಕ ಶೈಲಿಯ ಭಾಷೆ ಪ್ರಯೋಗಿಸಿದರೆ ಸೋಮಣ್ಣ ತಮ್ಮ ಎಂದಿನ ಸೌಮ್ಯ ಭಾಷೆಯಲ್ಲಿ ತಿರುಗೇಟು ನೀಡುತ್ತಿದ್ದಾರೆ. ಚಾಮರಾಜನಗರದಲ್ಲಿ (Chamarajanagar) ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸೋಮಣ್ಣ, ‘ಸಿದ್ದರಾಮಯ್ಯನವರನ್ನು ನಾನು ರಾಜ್ಯದ ಒಬ್ಬ ಹಿರಿಯ ಮುತ್ಸದ್ದಿಯಾಗಿ ನೋಡುತ್ತೇನೆ. ಅವರು ಇನ್ನಾದರೂ ಅವನ್ಯಾರು, ಇವನ್ಯಾರು ಅಂತ ಆಡೋದನ್ನು ನಿಲ್ಲಿಸಬೇಕು,’ ಎಂದು ಹೇಳಿದರು. ಅವರೀಗ ವಿರೋಧ ಪಕ್ಷದ ನಾಯಕನೂ ಅಲ್ಲ, ಮತ್ತು ತಾನು ಮಂತ್ರಿಯೂ ಅಲ್ಲ, ತಮ್ಮಿಬ್ಬರಲ್ಲಿ ಯಾರು ಹೆಚ್ಚು ಸಮರ್ಥರು ಅನ್ನೋದನ್ನು ಜನ ನಿರ್ಧರಿಸುತ್ತಾರೆ ಎಂದು ಸೋಮಣ್ಣ ಮಾರ್ಮಿಕವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:45 am, Fri, 21 April 23

Follow us