ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ? ರಾಜ್ಯಸಭೆ ಆಫರ್​​ ಬಂದರೆ ಸಿಎಂ ನಿಲುವೇನು?

Edited By:

Updated on: May 26, 2026 | 5:13 PM

ಡಿಸಿಎಂ ಮತ್ತು ಸಿಎಂರನ್ನು ಹೈಕಮಾಂಡ್​​ ದೆಹಲಿಗೆ ಜರೆದಿರುವ ಹಿನ್ನೆಲೆ ನಾನಾ ಲೆಕ್ಕಾಚಾರಗಳು ಶುರುವಾಗಿವೆ. ಒಂದೊಮ್ಮೆ ರಾಷ್ಟ್ರ ರಾಜಕಾರಣಕ್ಕೆ ವರಿಷ್ಠರು ಆಹ್ವಾನಿಸದರೆ ತಮ್ಮ ತೀರ್ಮಾನ ಏನು ಎಂಬ ಬಗ್ಗೆ ಸಿದ್ದರಾಮಯ್ಯ ಈಗಾಗಲೇ ಆಪ್ತರಿಗೆ ತಿಳಿಸಿದ್ದಾರೆ. ರಾಜ್ಯಸಭೆ ಆಫರ್ ಬಂದರೂ ತಿರಸ್ಕರಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರಂತೆ.

ನವದೆಹಲಿ, ಮೇ 26: ಹೈಕಮಾಂಡ್ ನಾಯಕರೊಂದಿಗೆ ಮೀಟಿಂಗ್ ವಿಚಾರ ಸಂಬಂಧ ರಾಜ್ಯಸಭೆಯ ಆಫರ್ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ. ರಾಷ್ಟ್ರ ರಾಜಕಾರಣಕ್ಕೆ ಆಹ್ವಾನ ಬಂದರೆ ನಿರಾಕರಿಸಲು ಅವರು ನಿರ್ಧರಿಸಿದ್ದು, ಈ ಬಗ್ಗೆ ಇಲ್ಲ ಎಂಬುದೇ ಸಿಎಂ ಉತ್ತರವಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಮೊದಲೇ ಆಪ್ತರೊಂದಿಗೆ ಸಿದ್ದರಾಮಯ್ಯ ಚರ್ಚಿಸಿದ್ದು, ರಾಷ್ಟ್ರ ರಾಜಕಾರಣ ಬಗ್ಗೆ ಮನಸ್ಸಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: May 26, 2026 05:09 PM
Follow Us