ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆಯನ್ನು ಅದಕ್ಕೆಂದೇ ಮೀಸಲಾಗಿರುವ ಬಸ್ಸಲ್ಲಿ ಪ್ರಯಾಣಿಸದೆ ಹೆಲಿಕಾಪ್ಟರ್ ಹಾರಾಡುತ್ತಿದ್ದಾರೆ!

|

Updated on: Feb 10, 2023 | 5:45 PM

ಬಿಳಿ ಪಂಚೆ ಮತ್ತು ಅದೇ ಬಣ್ಣದ ಜುಬ್ಬಾ ಧರಿಸಿದ ಸಿದ್ದರಾಮಯ್ಯ ಹೆಲಿಕಾಪ್ಟರ್ ನಿಂದ ಇಳಿದ ಮೇಲೆ ಖುದ್ದು ಅವರೇ ಜನರತ್ತ ಧಾವಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಯಾದಗಿರಿ: ಜಿಲ್ಲೆಯ ತಾಲ್ಲೂಕುಗಳಾಗಿರುವ ಸುರಪುರ (Shorapur) ಮತ್ತು ಶಹಾಪುರ (Shahapur) ನಡುವೆ ದೂರದ ಅಂತರವೇನೂ ಇಲ್ಲ. ಎರಡು ಪಟ್ಟಣಗಳ ನಡುವಿನ ಅಂತರ ಕೇವಲ 30 ಕಿಮೀ ಮಾತ್ರ. ಆದರೂ ಪ್ರಜಾಧ್ವನಿ ಯಾತ್ರೆಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ನಡೆಸುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಸುರಪುರದಿಂದ ಶಹಾಪುರಕ್ಕೆ ಹೆಲಿಕಾಪ್ಟರ್ ನಲ್ಲಿ ಹೋದರು. ಅವರನ್ನು ಹೊತ್ತ ಚಾಪರ್ ಶಹಾಪುರ ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗುವುದನ್ನು ನೀವು ನೋಡಬಹುದು. ಬಿಳಿ ಪಂಚೆ ಮತ್ತು ಅದೇ ಬಣ್ಣದ ಜುಬ್ಬಾ ಧರಿಸಿದ ಸಿದ್ದರಾಮಯ್ಯ ಹೆಲಿಕಾಪ್ಟರ್ ನಿಂದ ಇಳಿದ ಮೇಲೆ ಖುದ್ದು ಅವರೇ ಜನರತ್ತ ಧಾವಿಸುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Fri, 10 February 23

Follow us on