ಫಲಾನುಭವಿಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಕೋಪದಿಂದ ಪೋಡಿಯಂ ಇಳಿದುಹೋಗಿದ್ದು ಯಾಕೆ ಗೊತ್ತಾ?

ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2025 | 7:41 PM

ಸಿದ್ದರಾಮಯ್ಯ ಸಿಟ್ಟಾಗಿದ್ದನ್ನು ಕಂಡು ಕುಪಿತರಾದ ಶಿವಲಿಂಗೇಗೌಡ, ಸಚಿವ ರಾಜಣ್ಣ ಮತ್ತು ಸಂಸದ ಶ್ರೇಯಸ್ ಪಟೇಲ್ ಫೀಲ್ಡಿಗಿಳಿದರು. ಶಿವಲಿಂಗೇಗೌಡರಂತೂ ತಮ್ಮ ಅಭಿಮಾನಿಗಳೊಂದಿಗೆ ಗದರುತ್ತಲೇ ಮಾತಾಡಿದರು. ತಾನು ಅತ್ಯಂತ ಮುತುವರ್ಜಿಯಿಂದ ಏರ್ಪಡಿಸಿದ ಸಮಾವೇಶ ಹೀಗೆ ಮುಂದುವರಿಯುವುದು ಅಥವಾ ಮುಕ್ತಾಯಗೊಳ್ಳುವುದು ಅವರಿಗೆ ಬೇಕಿರಲಿಲ್ಲ. ಅವರ ಮತ್ತು ರಾಜಣ್ಣನವರ ಪ್ರಯತ್ನದಿಂದ ಜನ ಶಾಂತಗೊಂಡ ಬಳಿಕ ಸಿಎಂ ಮಾತು ಮುಂದುವರಿಸಿದರು.

ಹಾಸನ, ಜುಲೈ 26: ಶಿವಲಿಂಗೇಗೌಡರಿಗೆ ರಾಜಕೀಯ ಭವಿಷ್ಯ ಇದೆ ಎಂದು ಪೋಡಿಯಂ ಮೇಲೆ ನಿಂತು ಸಿದ್ದರಾಮಯ್ಯ ಹೇಳುತ್ತಿದ್ದರೂ ಅರಸೀಕೆರೆ ಜನರಿಗೆ ಮುಖ್ಯಮಂತ್ರಿಯಿಂದ (chief minister) ತಮ್ಮ ಶಾಸಕನನ್ನು ಮಂತ್ರಿ ಮಾಡುವ ಭರವಸೆ ಬೇಕಿತ್ತು. ಅದನ್ನು ಅವರು ಹೇಳಲಿ ಅಂತ ಕಾಯುತ್ತಿದ್ದರು. ಅದರೆ ಸಿದ್ದರಾಮಯ್ಯ ಬೇರೆ ರೀತಿಯಲ್ಲಿ ಹೇಳಿದಾಗ ಗೌಡರ ಅಭಿಮಾನಿಗಳ ತಾಳ್ಮೆ ಮೀರಿತು ಮತ್ತು ಗದ್ದಲಮಯ ವಾತಾವರಣ ಸೃಷ್ಟಿಯಾಯಿತು. ಸಿದ್ದರಾಮಯ್ಯ ಮೊದಲು ಪ್ರೀತಿಯಿಂದ ಅಮೇಲೆ ಗದರಿ ಹೇಳಿದರೂ ಪ್ರಯೋಜನವಾಗಲಿಲ್ಲ, ಗಲಾಟೆ ಹೆಚ್ಚುತ್ತಾ ಹೋದಾಗ ತಾಳ್ಮೆ ಕಳೆದುಕೊಳ್ಳುವ ಸರದಿ ಮುಖ್ಯಮಂತ್ರಿಯವರದ್ದಾಯಿತು. ಅವರು ತಮ್ಮ ಭಾಷಣವನ್ನು ನಿಲ್ಲಿಸಿ ಪೋಡಿಯಂನಿಂದ ಇಳಿದು ತಾವು ಕುಳಿತ ಸ್ಥಳಕ್ಕೆ ತೆರಳಿದರು.

ಇದನ್ನೂ ಓದಿ:   ಓಬಿಸಿ ಸಲಹಾ ಸಮಿತಿಗೆ ಸಿದ್ದರಾಮಯ್ಯ ಅಧ್ಯಕ್ಷನಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತಿಲ್ಲ: ಸತೀಶ್ ಜಾರಕಿಹೊಳಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.