ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ; ಭಕ್ತರಿಂದ ಹರಹರ ಮಹಾದೇವ ಘೋಷಣೆ

Updated on: Jan 08, 2025 | 10:29 PM

70 ವರ್ಷಗಳಿಂದ ಬೀಗ ಹಾಕಲಾಗಿದ್ದ ಸ್ಕಂದ ಪುರಾಣದಲ್ಲಿ ವರ್ಣಿಸಲಾದ ಸಿದ್ಧೇಶ್ವರ ಮಹಾದೇವನ ದೇಗುಲವನ್ನು 22 ದಿನಗಳ ಹಿಂದೆ ‘ಧುಂದೆ ಕಾಶಿ’ ತಂಡ ಪತ್ತೆ ಮಾಡಿದೆ. ಇಂದು 7 ದಶಕಗಳ ಬಳಿಕ ಈ ದೇವಾಲಯದ ಬೀಗ ತೆರೆದು ಅವಶೇಷಗಳನ್ನು ತೆಗೆದು ದೇವಾಲಯದ ಗರ್ಭಗುಡಿಯನ್ನು ಗಂಗಾಜಲದಿಂದ ಶುದ್ಧೀಕರಿಸಲಾಯಿತು. ಈ ವೇಳೆ ಭಕ್ತರು ಹರಹರ ಮಹಾದೇವ ಎಂದು ಉದ್ಘರಿಸುತ್ತಾ ಮಹಾದೇವನನ್ನು ಕಣ್ತುಂಬಿಕೊಂಡರು. ಈ ದೇವಾಲಯದಲ್ಲಿ ವೈದಿಕ ವಿಧಿವಿಧಾನಗಳ ಪ್ರಕಾರ ದೇವಾಲಯವನ್ನು ನಿರ್ವಹಿಸಲಾಗುವುದು ಮತ್ತು ತ್ರಿಕಾಲ ಸಂಧ್ಯಾ ವಿಧಿಗಳ ಪ್ರಕಾರ ಪೂಜೆ ನಡೆಯಲಿದೆ.

ವಾರಾಣಸಿ: 70 ವರ್ಷಗಳಿಂದ ಬೀಗ ಹಾಕಲಾಗಿದ್ದ ಸ್ಕಂದ ಪುರಾಣದಲ್ಲಿ ವರ್ಣಿಸಲಾದ ಸಿದ್ದೇಶ್ವರ ಮಹಾದೇವನ ದೇವಸ್ಥಾನವನ್ನು 22 ದಿನಗಳ ಹಿಂದೆ ‘ಧುಂದೆ ಕಾಶಿ’ ತಂಡ ಪತ್ತೆ ಮಾಡಿತ್ತು. ಇಂದು ಈ ದೇವಾಲಯದ ಬೀಗ ತೆರೆದು ಗರ್ಭಗುಡಿಯನ್ನು ಗಂಗಾಜಲದಿಂದ ಶುದ್ಧೀಕರಿಸಿದ ಆಡಳಿತ ಮಂಡಳಿ ಮಕರ ಸಂಕ್ರಾಂತಿಯ ನಂತರ ದೇವಾಲಯವನ್ನು ಶುದ್ಧೀಕರಿಸಿ ಪ್ರಾಣ ಪ್ರತಿಷ್ಠೆ ಮಾಡಿ ನಿತ್ಯ ಪೂಜೆ ಆರಂಭಿಸಲಾಗುವುದು ಎಂದು ಘೋಷಿಸಿತು. ಈ ವೇಳೆ ಭಕ್ತರು ಹರಹರ ಮಹಾದೇವ ಎಂದು ಉದ್ಘರಿಸುತ್ತಾ ಮಹಾದೇವನನ್ನು ಕಣ್ತುಂಬಿಕೊಂಡರು. ಈ ದೇವಾಲಯದಲ್ಲಿ ವೈದಿಕ ವಿಧಿವಿಧಾನಗಳ ಪ್ರಕಾರ ದೇವಾಲಯವನ್ನು ನಿರ್ವಹಿಸಲಾಗುವುದು ಮತ್ತು ತ್ರಿಕಾಲ ಸಂಧ್ಯಾ ವಿಧಿಗಳ ಪ್ರಕಾರ ಪೂಜೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More