‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಟ್ರೋಫಿ ಗೆಲ್ಲಬೇಕು ಎಂದು ಎಲ್ಲ ಸ್ಪರ್ಧಿಗಳು ಪ್ರಯತ್ನಿಸುತ್ತಾರೆ. ಆದರೆ ಪ್ರತಿ ವಾರ ಒಬ್ಬರು ಎಲಿಮಿನೇಟ್ ಆಗಬೇಕು ಎಂಬುದು ಆಟದ ನಿಯಮ. ಎರಡನೇ ವಾರ ನಟಿ ಸ್ಫೂರ್ತಿ ಗೌಡ ಎಲಿಮಿನೇಟ್ (Bigg Boss Kannada Elimination) ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಅವರು ಹಲವು ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆ ಇದೆ ಎಂಬುದನ್ನು ಸ್ಫೂರ್ತಿ ಗೌಡ (Spoorthi Gowda) ವಿವರಿಸಿದ್ದಾರೆ. ‘ಕ್ಯಾಪ್ಟನ್ ಹೇಳಿದ್ದನ್ನು ನಾನು ಫಾಲೋ ಮಾಡಿದೆ. ಒಂಟಿಯಾಗಿ ಆಟ ಆಡಿದ್ದರೆ ನಾನು ಗೆಲ್ಲುತ್ತಿದ್ದೆ. ನಮ್ಮ ಗ್ರೂಪ್ ಗೆಲ್ಲಬೇಕು ಎಂಬ ಆಶಯ ನನಗಿತ್ತು. ಅದೇ ನಾನು ಮಾಡಿದ ದೊಡ್ಡ ತಪ್ಪು ಅಂತ ನನಗೆ ಈಗ ಅನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.