‘ದರ್ಶನ್ ಜೈಲಲ್ಲಿ ರೌಡಿಗಳಲ್ಲದೇ ಇನ್ಯಾರ ಜತೆ ಇರೋಕೆ ಸಾಧ್ಯ?’: ಸುಮಲತಾ ಸಮರ್ಥನೆ

|

Updated on: Aug 27, 2024 | 3:16 PM

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ನಟೋರಿಯಸ್​ ರೌಡಿಗಳ ಸಹವಾಸ ಬೆಳೆದಿದೆ. ರೌಡಿಶೀಟರ್​ಗಳ ಜೊತೆ ದರ್ಶನ್​ ಇರುವ ಫೋಟೋ ಮತ್ತು ವಿಡಿಯೋ ವೈರಲ್​ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಷ್​ ಅವರು ಹೇಳಿಕೆ ನೀಡಿದ್ದಾರೆ. ದರ್ಶನ್​ ರೌಡಿಗಳ ಜೊತೆ ಇರುವುದನ್ನು ಸುಮಲತಾ ಸಮರ್ಥನೆ ಮಾಡಿಕೊಂಡಿದ್ದಾರೆ.

‘ಜೈಲಿನಲ್ಲಿ ಯಾರಪ್ಪಾ ಇರುತ್ತಾರೆ? ಜೊತೆಯಲ್ಲಿ ಓಡಾಡಲು, ಮಾತಾಡಲು ಜೈಲಲ್ಲಿ ಇನ್ಯಾರು ಸಿಕ್ತಾರೆ? ಅಲ್ಲಿ ಇರುವುದೇ ಕ್ರಿಮಿನಲ್ಸ್​’ ಎಂದು ಸುಮಲತಾ ಅಂಬರೀಷ್​ ಅವರು ಹೇಳಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನ ಪ್ರಮುಖ ಆರೋಪಿ ಆಗಿರುವ ದರ್ಶನ್​ ಅವರು ರೌಡಿಶೀಟರ್​ಗಳಾದ ವಿಲ್ಸನ್​ ಗಾರ್ಡನ್​ ನಾಗ, ಕುಳ್ಳ ಸೀನಾ ಮುಂತಾದವರ ಜೊತೆ ಇರುವ ಫೋಟೋ ವೈರಲ್​ ಆಗಿರುವುದಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on