AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಟಿ ರವಿಯನ್ನು ಸೋಲಿಸಿದ ಕಾಂಗ್ರೆಸ್​​ನ ತಮ್ಮಯ್ಯ: ಜೆಡಿಎಸ್​ ಎಂ​ಎಲ್​ಸಿಗೆ ಹಾಲಿನ ಅಭಿಷೇಕ, ವಿಡಿಯೋ ವೈರಲ್

ಸಿಟಿ ರವಿಯನ್ನು ಸೋಲಿಸಿದ ಕಾಂಗ್ರೆಸ್​​ನ ತಮ್ಮಯ್ಯ: ಜೆಡಿಎಸ್​ ಎಂ​ಎಲ್​ಸಿಗೆ ಹಾಲಿನ ಅಭಿಷೇಕ, ವಿಡಿಯೋ ವೈರಲ್

ಕಿರಣ್ ಹನುಮಂತ್​ ಮಾದಾರ್
|

Updated on: May 14, 2023 | 1:52 PM

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿಟಿ ರವಿ ಅವರ ಹೀನಾಯ ಸೋಲು ಹಿನ್ನಲೆ ಎಂಎಲ್​ಸಿ(MLC) ಎಸ್​.ಎಲ್​ ಭೋಜೇಗೌಡರಿಗೆ(S. L. Bhojegowda) ಜೆಡಿಎಸ್ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿದ್ದಾರೆ.

ಚಿಕ್ಕಮಗಳೂರು: ಮೇ.10 ರಂದು ನಡೆದಿದ್ದ ರಾಜ್ಯ ವಿಧಾನಸಭೆ ಚುನಾವಣಾ ಮತದಾನದ ಫಲಿತಾಂಶ ನಿನ್ನೆ(ಮೇ.13) ಪ್ರಕಟಗೊಂಡಿದೆ. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್​ 137 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿಟಿ ರವಿ ಅವರ ಹೀನಾಯ ಸೋಲು ಹಿನ್ನಲೆ ಎಂಎಲ್​ಸಿ(MLC) ಎಸ್​.ಎಲ್​ ಭೋಜೇಗೌಡರಿಗೆ(S. L. Bhojegowda) ಜೆ.ಡಿಎಸ್ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿದ್ದಾರೆ. ಹೌದು ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಗೆಲುವು ಹಿನ್ನೆಲೆ ನಗರದ ಹೊಸ ಮನೆ ಬಡಾವಣೆಯಲ್ಲಿ ಭೋಜೇಗೌಡರಿಗೆ ಹಾಲಿನ ಅಭಿಷೇಕ ಮಾಡಿ, ಸನ್ಮಾನಿಸಿದ್ದಾರೆ. ಕಾಂಗ್ರೆಸ್ ಜೊತೆ ಭೋಜೇಗೌಡ ಒಪ್ಪಂದ ಮಾಡಿಕೊಂಡಿದ್ದು, ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡಿದ್ದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ