ಬೆಂಗಳೂರಿಗೆ ಆಗಮಿಸಿದ ತಲೈವಾ ರಜಿನಿಕಾಂತ್, ಡಾ ಕೆ ಸುಧಾಕರ್ ಮತ್ತು ಮುನಿರತ್ನರಿಂದ ಆದರದ ಸ್ವಾಗತ

ಕರ್ನಾಟಕ ಸರ್ಕಾರದ ಪರವಾಗಿ ಸಚಿವರಾದ ಡಾ ಕೆ ಸುಧಾಕರ್ ಮತ್ತು ಮುನಿರತ್ನ ನಾಯ್ಡು ಅವರು ರಜಿನಿಕಾಂತ್ ಅವರನ್ನು ಸ್ವಾಗತಿಸಿದರು.

ಬೆಂಗಳೂರಿಗೆ ಆಗಮಿಸಿದ ತಲೈವಾ ರಜಿನಿಕಾಂತ್, ಡಾ ಕೆ ಸುಧಾಕರ್ ಮತ್ತು ಮುನಿರತ್ನರಿಂದ ಆದರದ ಸ್ವಾಗತ
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 01, 2022 | 1:28 PM

ಬೆಂಗಳೂರು: ತಮಿಳುನಾಡಲ್ಲಿ ತಮ್ಮ ಅಭಿಮಾನಿಗಳಿಂದ ತಲೈವಾ ಎಂದು ಕರೆಸಿಕೊಳ್ಳುವ ಸೂಪರ್ ಸ್ಟಾರ್ ರಜನೀಕಾಂತ್ (Rajnikanth) ಅವರು ಇಂದು ಪುನೀತ್ ರಾಜಕುಮಾರ (Puneeth Rajkumar) ಅವರಿಗೆ ಕರ್ನಾಟಕ ಸರ್ಕಾರ ಮರಣೋತ್ತರವಾಗಿ ಕೊಡಮಾಡಲಿರುವ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಈಗ್ಗೆ ಕೆಲ ನಿಮಿಷಗಳ ಮುಂಚೆ ಬಂದಿಳಿದರು. ಕರ್ನಾಟಕ ಸರ್ಕಾರದ ಪರವಾಗಿ ಸಚಿವರಾದ ಡಾ ಕೆ ಸುಧಾಕರ್ (Dr K Sudhakar) ಮತ್ತು ಮುನಿರತ್ನ ನಾಯ್ಡು (Munirathna Naidu) ಅವರು ಸ್ವಾಗತಿಸಿದರು. 71-ವರ್ಷ-ವಯಸ್ಸಿನ ತಲೈವಾ ತನ್ನ ಎಂದಿನ ಲವಲವಿಕೆಯೊಂದಿಗೆ ಆಗಮಿಸಿದರು.

Follow us