ನಾನು ಮತ್ತು ಜಾಲಪ್ಪ ಇಲ್ಲದಿದ್ದರೆ ದೇವೇಗೌಡ ಮುಖ್ಯಮಂತ್ರಿಯಾಗೋದು ಸಾಧ್ಯವಿರಲಿಲ್ಲ: ಸಿದ್ದರಾಮಯ್ಯ
ಸಿದ್ದರಾಮಯ್ಯಗೆ ಅಹಂಕಾರ ತಲೆಗೇರಿದೆ, ಅವರ ಮದ ಇಳಿಸಬೇಕು, ಗರ್ವಭಂಗ ಮಾಡಬೇಕು ಎಂದು ಮಾತಾಡುವ ದೇವೇಗೌಡರು ತಾವೊಬ್ಬ ಮಾಜಿ ಪ್ರಧಾನಿ ಅನ್ನೋದನ್ನು ಮರೆಯುತ್ತಾರೆ, ಅವರ ಮಾತು ಪಾಳೆಗಾರಿಕೆಯ ದ್ಯೋತಕವಾಗಿದೆ, ಅವರು ಪ್ರಧಾನಿಯಾಗಿದ್ದೇ ಒಂದು ಆಕಸ್ಮಿಕ ಎಂದು ಸಿದ್ದರಾಮಯ್ಯ ಹೇಳುತ್ತಾರೆ.
ರಾಮನಗರ: ಚನ್ನಪಟ್ಟಣದಲ್ಲಿ ಆಯೋಜಿಸಿದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು. ದೇವೇಗೌಡರು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿದ್ದು ತಾನು ಎಂದಿರುವುದಕ್ಕೆ ಅಬ್ಬರಿಸಿದ ಸಿದ್ದರಾಮಯ್ಯ, ತಾನು ಮತ್ತು ಜಾಲಪ್ಪ ಇರದೇ ಹೋಗಿದ್ದರೆ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗುವುದು ಸಾಧ್ಯವೇ ಇರಲಿಲ್ಲ, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗುತ್ತಿದ್ದರು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೊಮ್ಮಗನ ಗೆಲ್ಸಲು ಇಷ್ಟೆಲ್ಲ ಸುಳ್ಳು ಹೇಳ್ತೀರಲ್ರೀ, ಹಾಸನದಲ್ಲಿ ಕಣ್ಣೀರಿದ್ರಾ: ದೇವೇಗೌಡರಿಗೆ ಸಿದ್ದರಾಮಯ್ಯ ಪ್ರಶ್ನೆ
Follow Us
Latest Videos

