‘ಗಜಕೇಸರಿ ಸಿನಿಮಾ ಮಾಡುವುದಕ್ಕಿಂತ ಮೊದಲಿನಿಂದಲೂ ನಾವು ಪರಿಚಿತರು. ಅವರು ನಿರ್ದೇಶನ ಮಾಡುವಾಗಲೆಲ್ಲ ನನ್ನ ಜೊತೆ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅವರು ‘ಶುಗರ್ ಫ್ಯಾಕ್ಟರಿ’ ಸಿನಿಮಾ ಸಿದ್ಧವಾದ ಮೇಲೆ ನನಗೆ ತೋರಿಸಿ, ಏನಾದರೂ ತಿದ್ದುಪಡಿ ಇದ್ದರೇ ತಿಳಿಸಿ ಅಂತ ಸಲಹೆ ಕೇಳಿದ್ದರು. ಅವರ ಇಡೀ ಕುಟುಂಬದವರು ನಮಗೆ ಆಪ್ತರಾಗಿದ್ದರು. ಅನಾರೋಗ್ಯದಲ್ಲೂ ಅವರು ನಮ್ಮ ಮದುವೆಗೆ ಬಂದು ಹರಸಿದ್ದರು. ಗುಣಮುಖರಾಗುತ್ತಾರೆ ಎಂಬ ನಂಬಿಕೆಯಲ್ಲಿ ನಾವು ಇದ್ದೆವು. ಆದರೆ ನಿನ್ನೆ ನಿಧನರಾಗಿದ್ದು ನಮಗೆ ಶಾಕಿಂಗ್’ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.