Daily Devotional: ಮಕ್ಕಳ ನಾಲಿಗೆ ಮೇಲೆ ಓಂಕಾರ ಬರೆಯುವುದರ ಹಿಂದಿನ ರಹಸ್ಯವೇನು?

Updated on: Mar 15, 2026 | 7:30 AM

ಈ ಓಂಕಾರವನ್ನು ಮಗುವಿನ ನಾಲಿಗೆ ಮೇಲೆ ಬರೆಯುವುದರಿಂದ ಸರಸ್ವತಿ, ಗಣೇಶ, ಹಯಗ್ರೀವ ಹಾಗೂ ಜ್ಞಾನದ ಅಧಿದೇವತೆಗಳ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆಯಿದೆ. ತುಪ್ಪ ಮತ್ತು ಜೇನುತುಪ್ಪವನ್ನು ಬೆರೆಸಿ, ಬಂಗಾರ, ತುಳಸಿ, ಶ್ರೀಗಂಧ ಅಥವಾ ಬಿಲ್ವಪತ್ರೆಯ ಕಡ್ಡಿಯಿಂದ ಓಂಕಾರವನ್ನು ಬರೆಯಲಾಗುತ್ತದೆ. ಇದರಿಂದ ಮಗುವಿನ ಸಪ್ತ ಚಕ್ರಗಳು ಜಾಗೃತಗೊಂಡು, ಮಧುರ ಮಾತುಗಳು, ದೇಹದ ಕಾಂತಿ, ಜ್ಞಾನ ವೃದ್ಧಿ ಮತ್ತು ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಅಲ್ಲದೆ, ನಕಾರಾತ್ಮಕ ಶಕ್ತಿಗಳು ದೂರವಾಗಿ ಮಗು ಆರೋಗ್ಯವಂತವಾಗಿರುತ್ತದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಕ್ಕಳ ನಾಲಿಗೆ ಮೇಲೆ ಓಂಕಾರ ಬರೆಯುವುದರ ಹಿಂದಿನ ರಹಸ್ಯವೇನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ ಸಂಪ್ರದಾಯಗಳು ಮತ್ತು ಸಂಸ್ಕಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಜನನದ ನಂತರ ಮಗುವಿಗೆ ನೀಡಲಾಗುವ ಸಂಸ್ಕಾರಗಳಲ್ಲಿ, ಅಕ್ಷರಾಭ್ಯಾಸದ ಸಂದರ್ಭದಲ್ಲಿ ಮಗುವಿನ ನಾಲಿಗೆಯ ಮೇಲೆ ಓಂಕಾರ ಬರೆಯುವುದು ಒಂದು ಪ್ರಮುಖ ಆಚರಣೆಯಾಗಿದೆ. ಓಂಕಾರವು ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನಮಾನವನ್ನು ಹೊಂದಿರುವ ಒಂದು ಶಬ್ದ. ಅಕಾರ, ಉಕಾರ, ಮಕಾರಗಳ ಸಮ್ಮಿಲನವೇ ಓಂಕಾರವಾಗಿದ್ದು, ಇದನ್ನು ಬ್ರಹ್ಮಾಂಡದ ಪ್ರಪ್ರಥಮ ಶಬ್ದ ಮತ್ತು ಪ್ರಣವ ಮಂತ್ರ ಎಂದು ಪರಿಗಣಿಸಲಾಗುತ್ತದೆ.

ಈ ಓಂಕಾರವನ್ನು ಮಗುವಿನ ನಾಲಿಗೆ ಮೇಲೆ ಬರೆಯುವುದರಿಂದ ಸರಸ್ವತಿ, ಗಣೇಶ, ಹಯಗ್ರೀವ ಹಾಗೂ ಜ್ಞಾನದ ಅಧಿದೇವತೆಗಳ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆಯಿದೆ. ತುಪ್ಪ ಮತ್ತು ಜೇನುತುಪ್ಪವನ್ನು ಬೆರೆಸಿ, ಬಂಗಾರ, ತುಳಸಿ, ಶ್ರೀಗಂಧ ಅಥವಾ ಬಿಲ್ವಪತ್ರೆಯ ಕಡ್ಡಿಯಿಂದ ಓಂಕಾರವನ್ನು ಬರೆಯಲಾಗುತ್ತದೆ. ಇದರಿಂದ ಮಗುವಿನ ಸಪ್ತ ಚಕ್ರಗಳು ಜಾಗೃತಗೊಂಡು, ಮಧುರ ಮಾತುಗಳು, ದೇಹದ ಕಾಂತಿ, ಜ್ಞಾನ ವೃದ್ಧಿ ಮತ್ತು ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಅಲ್ಲದೆ, ನಕಾರಾತ್ಮಕ ಶಕ್ತಿಗಳು ದೂರವಾಗಿ ಮಗು ಆರೋಗ್ಯವಂತವಾಗಿರುತ್ತದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More