AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗಿ ಭದ್ರತಾ ಏರ್ಪಾಟುಗಳೊಂದಿಗೆ ಇಂದಿನಿಂದ ಪುನರಾರಂಭಗೊಂಡ ದಿ ರಾಮೇಶ್ವರಂ ಕೆಫೆ

ಬಿಗಿ ಭದ್ರತಾ ಏರ್ಪಾಟುಗಳೊಂದಿಗೆ ಇಂದಿನಿಂದ ಪುನರಾರಂಭಗೊಂಡ ದಿ ರಾಮೇಶ್ವರಂ ಕೆಫೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 09, 2024 | 10:49 AM

ಬಾಂಬ್ ಸ್ಫೋಟಗೊಂಡ ಬಳಿಕ ನಿಶ್ಚಿತವಾಗಿ ವಿಚಲಿತರಾಗಿದ್ದ ದಿ ರಾಮೇಶ್ವರಂ ಕೆಫೆಯ ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ರಾವ್ ಹೋಟೆಲ್ ಅನ್ನು ನಿನ್ನೆ ರೀಓಪನ್ ಮಾಡೋದಾಗಿ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಅದು ನಿನ್ನೆ ಸಂಭವಿಸಲಿಲ್ಲ, ಇವತ್ತು ಆರಂಭಗೊಂಡಿದೆ.

ಬೆಂಗಳೂರು: ಕಳೆದ ಶುಕ್ರವಾರ ಅಂದರೆ ಮಾರ್ಚ್ ಒಂದರಂದು ನಡೆದ ಬಾಂಬ್ ಸ್ಫೋಟ (Bomb blast) ಪ್ರಕರಣದ ಬಳಿಕ ಮುಚ್ಚಿದ್ದ ನಗರದ ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ದಿ ರಾಮೇಶ್ವರಂ ಕೆಫೆ (The Rameshwaram Café) ಇಂದಿನಿಂದ ಪುನರಾರಂಗೊಂಡು ಗ್ರಾಹಕ ಸೇವೆ ಶುರುಮಾಡಿದೆ. ಕೆಫೆ ಖಾಯಂ ಗ್ರಾಹಕರು (customers) ಎಂದಿನಂತೆ ಬಂದು ತಮ್ಮ ಇಷ್ಟದ ತಿಂಡಿಗಳನ್ನು ತಿನ್ನುತ್ತಿದ್ದಾರೆ ಮತ್ತು ಟೀ-ಕಾಫೀ ಸವಿಯುತ್ತಿದ್ದಾರೆ. ಆದರೆ, ಕೆಫೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೃಶ್ಯಗಳಲ್ಲಿ ಕಾಣುತ್ತಿರುವ ಹಾಗೆ ಪ್ರವೇಶದ್ವಾರದ ಬಳಿ ಮೆಟಲ್ ಡಿಟೆಕ್ಟರ್ ಗಳನ್ನು ಅಳವಡಿಸಲಾಗಿದೆ. ಅಲ್ಲಿ ಕಾವಲು ನಿಂತಿರುವ ಭದ್ರತಾ ಸಿಬ್ಬಂದಿ ಕೆಫೆಗೆ ಆಗಮಿಸುತ್ತಿರುವ ಪ್ರತಿಯೊಬ್ಬನ ಗ್ರಾಹಕನ ಬ್ಯಾಗ್ ಗಳನ್ನು ಪರೀಕ್ಷಿಸುತ್ತಿದ್ದಾರೆ. ನಿಮಗೆ ನೆನಪಿರಬಹುದು, ಬಾಂಬ್ ಸ್ಫೋಟಗೊಂಡ ಬಳಿಕ ನಿಶ್ಚಿತವಾಗಿ ವಿಚಲಿತರಾಗಿದ್ದ ದಿ ರಾಮೇಶ್ವರಂ ಕೆಫೆಯ ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ರಾವ್ ಹೋಟೆಲ್ ಅನ್ನು ನಿನ್ನೆ ರೀಓಪನ್ ಮಾಡೋದಾಗಿ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಅದು ನಿನ್ನೆ ಸಂಭವಿಸಲಿಲ್ಲ, ಇವತ್ತು ಆರಂಭಗೊಂಡಿದೆ. ಬೆಂಗಳೂರು ಮತ್ತು ಕರ್ನಾಟಕದ ಜನ ಅವರ ಜೊತೆ ನಿಂತಿದ್ದಾರೆ, ಆತಂಕಿತರಾಗುವ ಅವಶ್ಯಕತೆಯಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಮೇಶ್ವರಂ ಕೆಫೆಗೆ ಅಸಾದುದ್ದೀನ್ ಒವೈಸಿ ಭೇಟಿ; ಬಾಂಬ್ ಸ್ಫೋಟ ಘಟನೆ ಭಾರತೀಯ ಮೌಲ್ಯಗಳ ಮೇಲಿನ ಆಕ್ರಮಣ ಎಂದು ಬಣ್ಣಿಸಿದ ಎಐಎಂಐಎಂ ಮುಖ್ಯಸ್ಥ