AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hotel Business: ರಾಮೇಶ್ವರಂ ಕೆಫೆ- ಬೆಂಗಳೂರಿನ ಗ್ರಾಹಕ ಪ್ರಿಯವಾದ ಈ ಹೋಟೆಲಿಗೆ ಆ ಹೆಸರು ಬಂದಿದ್ದು ಹೇಗೆ ಗೊತ್ತಾ?

Bangalore's Rameshwaram Cafe: ತುಪ್ಪದ ಪುಡಿ ಇಡ್ಲಿ, ತುಪ್ಪದ ಪುಡಿ ಮಸಾಲೆ ದೋಸೆ, ಬಟನ್ ಇಡ್ಲಿ ಸಾಂಬಾರ್, ಪೊಂಗಲ್, ಬೆಳ್ಳುಳ್ಳಿ ರೋಸ್ಟ್ ದೋಸೆಗಳು ಬೆಂಗಳೂರಿನ ರಾಮೇಶ್ವರಂ ಕೆಫೆಯ ಮೇರು ಭಕ್ಷ್ಯಗಳಾಗಿವೆ.

Hotel Business:  ರಾಮೇಶ್ವರಂ ಕೆಫೆ- ಬೆಂಗಳೂರಿನ ಗ್ರಾಹಕ ಪ್ರಿಯವಾದ ಈ ಹೋಟೆಲಿಗೆ ಆ ಹೆಸರು ಬಂದಿದ್ದು ಹೇಗೆ ಗೊತ್ತಾ?
ರಾಮೇಶ್ವರಂ ಕೆಫೆ- ಬೆಂಗಳೂರಿನ ಈ ಹೋಟೆಲಿಗೆ ಆ ಹೆಸರು ಬಂದಿದ್ದು ಹೇಗೆ ಗೊತ್ತಾ?
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:May 14, 2023 | 6:14 PM

Share

ಬೆಂಗಳೂರು: ಬೆಂಗಳೂರಿಗರ ಜಿಹ್ವಾ ಚಾಪಲ್ಯ ತಣಿಸುವ ಅಸಂಖ್ಯಾತ ಹೋಟೆಲ್​ಗಳಿವೆ. ಫುಟ್​ಪಾತ್​ನಲ್ಲಿರುವ ಒಂದು ಸಣ್ಣ ಗೂಡಂಗಡಿ ಹೋಟೆಲ್​ನಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್​ವರೆಗೂ ವಿವಿಧ ಸ್ತರಗಳ ಜನರ ಬಜೆಟ್​ಗಳಿಗೆ, ಅಭಿರುಚಿಗಳಿಗೆ ಅನುಗುಣವಾದ ಆಹಾರ ಆಯ್ಕೆಗಳಿವೆ. ಆದರೂ ಬೆಂಗಳೂರಿನ ಹೋಟೆಲ್ ಎಂದರೆ ತತ್​ಕ್ಷಣ ನೆನಪಿಗೆ ಬರುವುದು ವಿದ್ಯಾರ್ಥಿ ಭವನ್, ಎಂಟಿಅರ್, ವೀಣಾ ಸ್ಟೋರ್ಸ್, ಅಯ್ಯರ್ಸ್ ಮೆಸ್ ಇತ್ಯಾದಿ. ಸಣ್ಣ ಜಾಗದಲ್ಲಿ ಸ್ಥಾಪನೆಯಾಗಿ ಇವು ದಿನವೂ ನೂರಾರು ಸಾವಿರಾರು ಮಂದಿ ಗ್ರಾಹಕರನ್ನು ಸೆಳೆಯುತ್ತವೆ.

ಇಂದಿರಾ ನಗರ, ಜೆಪಿ ನಗರ ಇತ್ಯಾದಿ ಕಡೆ ಇರುವ ರಾಮೇಶ್ವರಂ ಕೆಫೆ ಇಂತಹ ಒಂದು ಹೋಟೆಲ್. ರಾಮೇಶ್ವರಂ ಕೆಫೆಯು (Rameshwaram Cafe) ಬೆಂಗಳೂರಿನಲ್ಲಿರುವ ಪ್ರೀಮಿಯಂ ದಕ್ಷಿಣ ಭಾರತೀಯ ವೆಜ್ ಕೆಫೆಯಾಗಿದೆ. ಈ ಕೆಫೆಯು ಭಾರತದ ಹೆಮ್ಮೆಯ ಪುತ್ರ, ಮಿಸೈಲ್ ಮ್ಯಾನ್ ಮತ್ತು ದೇಶದ ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ (Dr APJ Abdul Kalam) ಅವರಿಂದ ಸ್ಫೂರ್ತಿ ಪಡೆದು ಮತ್ತು ಅವರಿಗೆ ಸಮರ್ಪಿತವಾದ ಹೋಟೆಲ್​ ಆಗಿದೆ. ಏಕೆಂದರೆ ರಾಮೇಶ್ವರಂ (Rameshwaram) ಎಂಬುದು ಅಬ್ದುಲ್ ಕಲಾಂ ಅವರ ಜನ್ಮಸ್ಥಳ. ಹಾಗಾಗಿಯೇ ಆ ಮಹಾನ್​ ಚೇತನದಿಂದ ಸ್ಫೂರ್ತಿ ಪಡೆದು ನಮ್ಮ ಹೋಟೆಲಿಗೆ ರಾಮೇಶ್ವರಂ ಕೆಫೆ ಎಂದು ಹೆಸರು ಇಟ್ಟೆವು ಎಂದು ಸ್ಥಾಪಕರಾದ ದಿವ್ಯಾ ಮತ್ತು ರಾಘವೇಂದ್ರ ರಾವ್ ಹೆಮ್ಮೆಯಿಂದ ಹೇಳುತ್ತಾರೆ. ರಾಮೇಶ್ವರಂ ಕೆಫೆಯು ಎಲ್ಲಾ ರೀತಿಯ ಜನರಿಗೆ ಮುಂಜಾನೆ 5 ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಸೇವೆ ಸಲ್ಲಿಸುವ ಬೆಂಗಳೂರಿನಲ್ಲಿರುವ ಏಕೈಕ ರೆಸ್ಟೋರೆಂಟ್ ಇದಾಗಿದೆ.

ಇದನ್ನೂ ಓದಿ: Apple Phones: ಆ್ಯಪಲ್ ಫೋನ್ ಫ್ಯಾಕ್ಟರಿಗಾಗಿ ಬೆಂಗಳೂರಿನಲ್ಲಿ 303 ಕೋಟಿ ರೂ.ಗೆ ಭೂಮಿ ಖರೀದಿಸಿದ ಫಾಕ್ಸ್​ಕಾನ್

ದಿವ್ಯಾ ಮತ್ತು ರಾಘವೇಂದ್ರ ರಾವ್ ಸ್ಥಾಪಿಸಿರುವ ರಾಮೇಶ್ವರಂ ಕೆಫೆ ಈಗ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹರಡಿದೆ. ಎಲ್ಲಾ ಬ್ರ್ಯಾಂಚ್​ಗಳಲ್ಲೂ ಉತ್ತಮ ಬ್ಯುಸಿನೆಸ್ ಕಾಣುತ್ತಿದೆ. ಬೆಂಗಳೂರಿನ ಬ್ರಾಹ್ಮಿಣ್ಸ್, ಅಯ್ಯಂಗಾರ್ ಬ್ರ್ಯಾಂಡ್​ನ ಹೋಟೆಲ್​ಗಳಲ್ಲಿರುವಂತೆ ರಾಮೇಶ್ವರಂ ಕೆಫೆಯಲ್ಲಿ ಸ್ವಾದಿಷ್ಟಕರ ಆಹಾರಗಳ ಆಯ್ಕೆ ಇದೆ. ಅಪ್ಪಟ ಸಸ್ಯಾಹಾರದ ಖಾದ್ಯಗಳ ಮೆನು ಇಲ್ಲಿದೆ. ಇಡ್ಲಿ ವಡೆ, ದೋಸೆ, ರೈಸ್​ಬಾತ್ ಇತ್ಯಾದಿ ಮಾಮೂಲಿಯ ಆಹಾರವೇ ಆದರೂ ರುಚಿಯಲ್ಲಿ ಒಂದು ಹಂತ ಮೇಲಿದೆ. ಹೀಗಾಗಿ, ಈ ಹೋಟೆಲ್​ ಸದಾ ಜನರಿಂದ ತುಂಬಿರುತ್ತದೆ. ತುಪ್ಪದ ಪುಡಿ ಇಡ್ಲಿ, ತುಪ್ಪದ ಪುಡಿ ಮಸಾಲೆ ದೋಸೆ, ಬಟನ್ ಇಡ್ಲಿ ಸಾಂಬಾರ್, ಪೊಂಗಲ್, ಬೆಳ್ಳುಳ್ಳಿ ರೋಸ್ಟ್ ದೋಸೆಗಳು ನಮ್ಮ ಮೇರು ಭಕ್ಷ್ಯಗಳಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Sun, 14 May 23

Follow Us
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ