AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳವಾರ ಆಂಜನೇಯನಿಗೆ ಪ್ರದಕ್ಷಿಣೆ ಮಾಡುವುದರ ಆಧ್ಯಾತ್ಮಿಕ ಮಹತ್ವ

ಮಂಗಳವಾರ ಆಂಜನೇಯನಿಗೆ ಪ್ರದಕ್ಷಿಣೆ ಮಾಡುವುದರ ಆಧ್ಯಾತ್ಮಿಕ ಮಹತ್ವ

Ganapathi Sharma
|

Updated on: May 27, 2025 | 7:00 AM

Share

ಮಂಗಳವಾರ ಹನುಮ ದೇವಸ್ಥಾನದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಅನೇಕ ಲಾಭಗಳಿವೆ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ. 108, 54, 27 ಅಥವಾ 11 ಪ್ರದಕ್ಷಿಣೆಗಳನ್ನು ಮಾಡಬಹುದು. ಕಡಿಮೆ ಸಾಧ್ಯವಾದರೆ ಐದು ಪ್ರದಕ್ಷಿಣೆಗಳೊಂದಿಗೆ ‘ಓಂ ನಮೋ ಆಂಜನೇಯ’ ಮಂತ್ರವನ್ನು ಜಪಿಸಬಹುದು. ಇದರಿಂದ ಶಕ್ತಿ, ಯುಕ್ತಿ ಮತ್ತು ಭಕ್ತಿ ಹೆಚ್ಚಾಗುವುದು.

ಮಂಗಳವಾರದ ದಿನ ಹನುಮನಿಗೆ ಪ್ರದಕ್ಷಿಣೆ ಮಾಡುವುದರ ಮಹತ್ವವನ್ನು ಖ್ಯಾತ ವಾಸ್ತುಶಾಸತ್ರಜ್ಞ ಹಾಗೂ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ಇಲ್ಲಿ ವಿವರಿಸಿದ್ದಾರೆ. ಹನುಮನಿಗೆ ಮಂಗಳವಾರ ಪವಿತ್ರ ದಿನವಾಗಿರುವುದರಿಂದ ಈ ದಿನ ಪ್ರದಕ್ಷಿಣೆ ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ. 108 ಪ್ರದಕ್ಷಿಣೆಗಳಿಂದ ಸರ್ವಫಲ ದೊರೆಯುತ್ತದೆ ಎಂದು ಹೇಳಲಾಗಿದೆ. 54 ಪ್ರದಕ್ಷಿಣೆಗಳು ಕೂಡ ಶ್ರೇಷ್ಠ. 27 ಅಥವಾ 11 ಪ್ರದಕ್ಷಿಣೆಗಳು ಕೂಡ ಫಲಪ್ರದ. ಶಾರೀರಿಕ ಸಾಮರ್ಥ್ಯ ಕಡಿಮೆಯಿದ್ದರೆ, ಐದು ಪ್ರದಕ್ಷಿಣೆಗಳೊಂದಿಗೆ ‘ಓಂ ನಮೋ ಆಂಜನೇಯ’ ಮಂತ್ರವನ್ನು ಜಪಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಪ್ರದಕ್ಷಿಣೆಯ ಸಮಯದಲ್ಲಿ ಮುಂದೆ ನೋಡಿಕೊಂಡು ಹನುಮನ ಮೇಲೆ ಧ್ಯಾನವನ್ನು ಕೇಂದ್ರೀಕರಿಸಬೇಕು. ಈ ಪ್ರದಕ್ಷಿಣೆಯಿಂದ ಶಕ್ತಿ, ಯುಕ್ತಿ, ಭಕ್ತಿ ಹೆಚ್ಚುತ್ತದೆ ಮತ್ತು ಸಂಕಟಗಳಿಂದ ಮುಕ್ತಿ ಸಿಗುತ್ತದೆ ಎಂದು ಅವರು ಹೇಳಿದ್ದು, ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ.