ಮೈಸೂರು, (ಅಕ್ಟೋಬರ್ 10): ಮನುಷ್ಯನಿಗೆ ಅದೃಷ್ಟ ಖುಲಾಯಿಸಿದ್ರೆ ಹಾಗೆನೇ, ಫುಟ್ಬಾತ್ನಲ್ಲಿದ್ದವರನ್ನೂ ಸಹ ಅರಮನೆಯಲ್ಲಿ ಕೂರಿಸುತ್ತೆ. ಅದರಂತೆ ಮಂಡ್ಯದ ಬೈಕ್ ಮೆಕಾನಿಕ್ಗೆ ಅದೃಷ್ಟ ಖುಲಾಯಿಸಿದ್ದು,ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಹೌದು…ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ನಿವಾಸಿಯಾಗಿರುವ ಅಲ್ತಾಫ್ ಪಾಷಾಗೆ ಕೇರಳದ ಬಂಪರ್ ಲಾಟರಿ ಹೊಡೆದಿದೆ. ಮೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಆಲ್ತಾಫ್ ಪಾಷಾ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಗೆದ್ದಿದ್ದಾರೆ. ಇತ್ತೀಚಿಗಷ್ಟೆ ಕೇರಳಕ್ಕೆ ಹೋಗಿದ್ದಾಗ 500 ರೂ ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಇದೀಗ 25 ಕೋಟಿ ರೂ. ಲಾಟರಿ ಹೊಡೆದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಹಣದ ಮೂಟೆ ಕಟ್ಟಿಕೊಂಡು ಬರಲು ಕೇರಳದತ್ತ ಹೊರಟ್ಟಿದ್ದಾರೆ. ಅದಕ್ಕೂ ಮೊದಲು ಲಾಟರಿ ಹೊಡೆದಿರುವ ಬಗ್ಗೆ ಟಿವಿ9 ಜತೆ ಅಲ್ತಾಫ್ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಹಾಗಾದ್ರೆ, ಈ 25 ಕೋಟಿ ರೂ. ಜಾಕ್ಪಾಟ್ ಹೊಡೆದಿರುವುದಕ್ಕೆ ಅಲ್ತಾಫ್ ಹೇಳಿದ್ದೇನು? ಇಷ್ಟೊಂದು ಹಣವನ್ನು ಏನು ಮಾಡ್ತಾರೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.