ನಮ್ಮ ನೀರು-ನಮ್ಮ ಹಕ್ಕು ಎಂದು ಬಿರಿಯಾನಿ ತಿನ್ನುತ್ತಾ ಪಾದಯಾತ್ರೆ ಮಾಡಿದವರು ಇಂದು ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ: ಎಚ್​ಡಿ ಕುಮಾರಸ್ವಾಮಿ ಆಕ್ರೋಶ

ಸಾಧು ಶ್ರೀನಾಥ್​

Updated on: Oct 09, 2023 | 7:09 PM

ಕಾಂಗ್ರೆಸ್ ನಾಯಕರು ಸಂಗಮ ಸುತತಮುತ್ತ  ನಮ್ಮ ನೀರು-ನಮ್ಮ ಹಕ್ಕು (Namma Neeru Namma Hakku) ಎಂದು ನಡೆಸಿದ ಪಾದಯಾತ್ರೆ (Mekedatu Padayatra) ಬಿರಿಯಾನಿ ಮತ್ತು ಚಿಕನ್ ಲೆಗ್ ಪೀಸ್ ತಿನ್ನುವುದಕ್ಕಾಗೇ ಹೊರತು ಬೇರೆ ಯಾವುದೇ ಪುರುಷಾರ್ಥಕ್ಕಲ್ಲ -ಮಾಜಿ ಮುಖ್ಯಮಂತ್ರಿ ಹೆಚ್ ಡಿ ​ ಕುಮಾರಸ್ವಾಮಿ ವ್ಯಂಗ್ಯ

ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಮೇಕೆದಾಟು ಯೋಜನೆ ಆಗ್ರಹಿಸಿ ಕನಕಪುರ ಸಂಗಮ ಸುತತಮುತ್ತ  ನಮ್ಮ ನೀರು-ನಮ್ಮ ಹಕ್ಕು (Namma Neeru Namma Hakku) ಎಂದು ನಡೆಸಿದ ಪಾದಯಾತ್ರೆ (Mekedatu Padayatra) ಬಿರಿಯಾನಿ ಮತ್ತು ಚಿಕನ್ ಲೆಗ್ ಪೀಸ್ ತಿನ್ನುವುದಕ್ಕಾಗೇ ಹೊರತು ಬೇರೆ ಯಾವುದೇ ಪುರುಷಾರ್ಥಕ್ಕಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ​ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ನಿನ್ನೆ ಭಾನುವಾರ ತಮ್ಮ ಬಿಡದಿ ನಿವಾಸದದಲ್ಲಿ ರಾಮನಗರ ಜೆಡಿಎಸ್​​ ಮುಖಂಡರ ಸಭೆಯಲ್ಲಿ ಮಾತನಾಡಿದ H.D. ಕುಮಾರಸ್ವಾಮಿ ಹಾಲಿ ಕಾಂಗ್ರೆಸ್​​ ಸರ್ಕಾರ ಪತನ ಗ್ಯಾರಂಟಿ, ಡಿಕೆ ಶಿವಕುಮಾರ್​​ ತಿಹಾರ್​ ಜೈಲಿಗೆ ಹೋಗೋದು ಖಚಿತ.. ನಮ್ಮನ್ನ ಹಾಸನಕ್ಕೆ ಕಳಿಸಬಹುದು, ಆದರೆ ಅವರು ತಿಹಾರ್​ಗೆ ಓಡುವ ಕಾಲ ಹತ್ತಿರವಿದೆ. ಡಿ.ಕೆ.ಶಿವಕುಮಾರ್ ಒಮ್ಮೆ ತಿಹಾರ್​​ ಜೈಲು ನೋಡಿಕೊಂಡು ಬಂದಿದ್ದಾರೆ.. ಮುಂದೆ ಡಿಕೆಶಿವಕುಮಾರ್​ ಶಾಶ್ವತವಾಗಿ ತಿಹಾರ್​ಗೆ ಹೋದರೂ ಅಚ್ಚರಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 09, 2023 07:08 PM
Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು