ಹೆದ್ದಾರಿಯಲ್ಲಿ ವಸೂಲಿಗೆ ನಿಂತ ಪೊಲೀಸರು ಜನರಿಂದ ತರಾಟೆಗೊಳಗಾದ ಬಳಿಕ ಇಲಾಖೆಯಿಂದ ಅಮಾನತು ಆದೇಶ!
ವಿಡಿಯೋ ಅವರ ಮೇಲಧಿಕಾರಿಗಳಿಗೆ ತಲುಪಿದಾಗ ಎಎಸ್ ಐ ಮತ್ತು ಪೇದೆಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ತುಮಕೂರು: ಶಿರಾ-ತುಮಕೂರು (Sira-Tumakuru) ನಡುವೆ ಓಡಾಡುತ್ತಿದ್ದ ವಾಹನ ಚಾಲಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಒಬ್ಬ ಎಎಸ್ ಐ (ASI) ಮತ್ತು ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಡಬಲ್ ಡೋಸ್ ಟ್ರೀಟ್ ಮೆಂಟ್ ಸಿಕ್ಕಿದೆ. ಕುರಿ ಸಾಗಿಸುತ್ತಿದ್ದ ಲಾರಿಯೊಂದನ್ನು (truck) ಅಡ್ಡಗಟ್ಟಿ ವಸೂಲಿಗೆ ನಿಂತ ಈ ಪೊಲೀಸರನ್ನು ಮೊದಲು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಕುರಿಸಾಗಣೆ ಮಾಡುತ್ತಿದ್ದವರಲ್ಲಿ ನಿಯಮಬದ್ಧ ಕಾಗದಪತ್ರಗಳಿದ್ದರೂ ಹಣ ಯಾಕೆ ಕೇಳತ್ತಿದ್ದೀರಿ ಅಂತ ಜನ ದಬಾಯಿಸಿದಾಗ ಪೊಲೀಸರು ಪೆ ಪೆ ಪೆ ಮಾಡಿದ್ದಾರೆ. ಆಮೇಲೆ ಈ ವಿಡಿಯೋ ಅವರ ಮೇಲಧಿಕಾರಿಗಳಿಗೆ ತಲುಪಿದಾಗ ಎಎಸ್ ಐ ಮತ್ತು ಪೇದೆಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಮಾಡಿದ್ದುಣ್ಣೋ ಮಹಾರಾಯ…
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 09, 2023 11:33 AM
Latest Videos
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

