ಸುಹಾಸ್​ಗೆ ನಿನ್ನೆ ಊರಿಗೆ ಬಾ ಅಂತ ಹೇಳಿದ್ದೆ, ಅದರೆ ಬರಲಿಲ್ಲ, ಕೊಲೆ ಸುದ್ದಿ ಬಂತು: ಮೋಹನ್ ಶೆಟ್ಟಿ, ಸುಹಾಸ್ ತಂದೆ

ಅರುಣ್​ ಕುಮಾರ್​ ಬೆಳ್ಳಿ

Updated on: May 02, 2025 | 12:15 PM

ಸುಹಾಸ್ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು ಮತ್ತು ಅದೇ ಕಾರಣಕ್ಕೆ ಅವನ ಕೊಲೆಯಾಗಿರುವ ಸಾಧ್ಯತೆ ಇದೆಯೆಂದು ಮೋಹನ್ ಶೆಟ್ಟಿ ಹೇಳುತ್ತಾರೆ. ಅವನಿಗಿನ್ನೂ ಮದುವೆಯಾಗಿರಲಿಲ್ಲ, ತಮ್ಮದೊಂದು ಹಳೆಯ ಇದ್ದು ಅದನ್ನು ಕೆಡವಿ ಹೊಸ ಮನೆ ಕಟ್ಟಿದ ನಂತರ ಮದುವೆಯಾಗೋದಾಗಿ ಸುಹಾಸ್ ಹೇಳುತ್ತಿದ್ದ ಎಂದು ಮೋಹನ್ ಶೆಟ್ಟಿ ಹೇಳುತ್ತಾರೆ.

ಮಂಗಳೂರು, ಮೇ 2: ನಿನ್ನೆ ಕೊಲೆಯಾದ ಸುಹಾಸ್ ಶೆಟ್ಟಿಯ ತಂದೆ ಮೋಹನ್ ಶೆಟ್ಟಿ (Mohan Shetty) ಅವರು ನಮ್ಮ ಮಂಗಳೂರು ವರದಿಗಾರನೊಂದಿಗೆ ಮಾತಾಡಿದ್ದು, ಕಳೆದ ಒಂದೂವರೆ ವರ್ಷದಿಂದ ತನ್ನ ಮಗ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳುತ್ತಾರೆ. ಬೆಳ್ತಂಗಡಿಯಲ್ಲಿ ತನ್ನ ತಮ್ಮನ ಮಗಳ ಮದುವೆ ಇತ್ತು, ಏಪ್ರಿಲ್ 29 ಮತ್ತು 30 ರಂದು ಅವನು ಅಲ್ಲೇ ಇದ್ದ, ನಂತರ ಮೇ 1ರಂದು ಬಜ್ಪೆಗೆ ಯಾವುದೋ ಕೆಲಸದ ನಿಮಿತ್ತ ಹೋಗಿದ್ದ ಎಂದು ಮೋಹನ್ ಶೆಟ್ಟಿ ಹೇಳುತ್ತಾರೆ. ಸುಹಾಸ್ ಹತ್ಯೆಯಾದ ಸುದ್ದಿ ಅವರಿಗೆ ನಿನ್ನೆ ರಾತ್ರಿ 9 ಗಂಟೆಗೆ ಗೊತ್ತಾಗಿದೆ.

ಇದನ್ನೂ ಓದಿ:  ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ: ಇಂದು ದಕ್ಷಿಣ ಕನ್ನಡ ಬಂದ್, ಮಂಗಳೂರಿನಲ್ಲಿ ನಿಷೇಧಾಜ್ಞೆ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us