Bumper price for tomato: ಪೊಲೀಸ್ ಕೆಲಸ ಮಾಡಿಕೊಂಡು ಟೊಮೆಟೊ ಬೆಳೆಗಾರನಾಗಿರುವ ಭೈರೇಶ್ ಈಗ ಲಕ್ಷಾಧಿಪತಿ!

ಅರುಣ್​ ಕುಮಾರ್​ ಬೆಳ್ಳಿ

Updated on: Jul 14, 2023 | 12:45 PM

ಹಿಂದೆಲ್ಲ ಕೇವಲ ರೂ.100 ಗಳಿಗೆ ಒಂದು ಕ್ರೇಟ್ ಟೊಮೆಟೊ ಮಾರುತ್ತಿದ್ದವರಿಗೆ ಈ ಬಾರಿ ಚಿಕ್ಕಮಗಳೂರು ಮಾರ್ಕೆಟ್ ನಲ್ಲಿ ಪ್ರತಿ ಕ್ರೇಟ್ ಗೆ ರೂ 3,800 ರವರೆಗೆ ಬೆಲೆ ಸಿಕ್ಕಿದೆಯಂತೆ!

ಹಾಸನ: ಈ ವರ್ಷ ಟೊಮೆಟೊ (tomato) ಬೆಳೆದ ರೈತ ಬಂಗಾರದ ಮನುಷ್ಯ ಮಾರಾಯ್ರೇ. ಬೆಳೆದ ಫಸಲಿಗೆ ಬೆಲೆಯಿಲ್ಲದೆ ರೈತರು ಟೊಮೆಟೊ ಹಣ್ಣು ರಸ್ತೆಗೆ ತಂದು ಬಿಸಾಡಿದ್ದನ್ನು ನಾವು ಹಲವಾರು ಬಾರಿ ವರದಿ ಮಾಡಿದ್ದೇವೆ. ಆದರೆ ಈ ವರ್ಷದ ಕತೆ ಸಂಪೂರ್ಣವಾಗಿ ಭಿನ್ನವಾಗಿದೆ. ವೃತ್ತಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ (police constable) ಆಗಿದ್ದರೂ ಬೇಸಾಯ ಮತ್ತು ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಸ್ತಿಹಳ್ಳಿಯ ಭೈರೇಶ್ (Bhyresh) ತಮ್ಮ ತೋಟದಲ್ಲಿ ಬೆಳೆದ ಟೊಮೆಟೊಗೆ ಬಂಪರ್ ಬೆಲೆ ಪಡೆದಿದ್ದಾರೆ. ತಮ್ಮ 1 ಎಕರೆ ಮತ್ತು 6 ಗುಂಟೆ ಜಮೀನಲ್ಲಿ ಅವರು 2 ಎಕರೆ ಜಮೀನಲ್ಲಿ ಬೆಳೆಯುವಷ್ಟು ಫಸಲು ಬೆಳೆದಿದ್ದಾರೆ. ಅವರು ಹೇಳುವಂತೆ ಹಿಂದೆಲ್ಲ ಕೇವಲ ರೂ.100 ಗಳಿಗೆ ಒಂದು ಕ್ರೇಟ್ ಟೊಮೆಟೊ ಮಾರುತ್ತಿದ್ದವರಿಗೆ ಈ ಬಾರಿ ಚಿಕ್ಕಮಗಳೂರು ಮಾರ್ಕೆಟ್ ನಲ್ಲಿ ಪ್ರತಿ ಕ್ರೇಟ್ ಗೆ ರೂ 3,800 ರವರೆಗೆ ಬೆಲೆ ಸಿಕ್ಕಿದೆಯಂತೆ! ದೇನೆವಾಲಾ ಜಬ್ ಭೀ ದೇತಾ ದೇತಾ ಛಪ್ಪಡ್ ಫಾಡ್ ಕೇ… ಅನ್ನೋದು ನಿಜ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.