ಚಾಮರಾಜನಗರದ ಒಂದು ಗ್ರಾಮವನ್ನು ದ್ವೀಪವಾಗಿ ಮಾರ್ಪಡಿಸಿದ ಧಾರಾಕಾರ ಮಳೆ, ಮನೆಗಳಲ್ಲೂ ನೀರು!

ನಿಮಗಿಲ್ಲಿ ಕಾಣಿತ್ತಿರೋದು ಚಾಮರಾಜನಗರ ತಾಲ್ಲೂಕಿನ ಬೇಡರಪುರ ಗ್ರಾಮ. ಗ್ರಾಮ ಅಂತ ಹೇಳುವ ಬದಲು ಬೇಡರಪುರ ದ್ವೀಪ ಅಂತ ಹೇಳಿದರೆ ಹೆಚ್ಚು ಸೂಕ್ತವೆನಿಸಬಹುದು.

| Edited By: Arun Kumar Belly

Updated on: Nov 18, 2021 | 10:22 PM

ಪ್ರತಿದಿನ ನಾವು ಮಳೆ ಬಗ್ಗೆಯೇ ಹೆಚ್ಚು ಚರ್ಚೆ ಮಾಡುತ್ತಿದ್ದೇವೆ. ಅದನ್ನು ಮಾಡದೆ ವಿಧಿಯಿಲ್ಲ ಬಿಡಿ ಮಾರಾಯ್ರೇ. ರಾಜ್ಯದ ಎಲ್ಲಾ ಭಾಗಗಳಲ್ಲಿ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ. ಪ್ರತಿದಿನ ಮಳೆಯಾಗುವ ಮುನ್ಸೂಚನೆ ನೀಡಿ ಹವಾಮಾನ ಇಲಾಖೆಯವರಿಗೂ (ಐ ಎಮ್ ಡಿ) ರೋಸಿ ಹೋಗಿರಬಹುದು. ಮಳೆ ಹೀಗೆಯೇ ಮುಂದುವರಿದರೆ, ಐ ಎಮ್ ಡಿ ಯವರ ಒಂದೇ ವಾಕ್ಯದಲ್ಲಿ ವೆದರ್ ಫೋರ್ ಕಾಸ್ಟ್ ಹೇಳಿ ಮುಗಿಸಬಹುದು-ಎಂದಿನಂತೆ ಇವತ್ತೂ ಮಳೆ ಸುರಿಯಲಿದೆ! ಅಂದಹಾಗೆ, ಮಳೆರಾಯನ ಕಾಟಕ್ಕೆ ಈ ವರ್ಷವೂ ರೈತರು ಕಂಗಾಲಾಗಿದ್ದಾರೆ. ಬಿತ್ತುವ ಮೊದಲು ಹುಯ್ಯೋ ಹುಯ್ಯೋ ಮಳೆರಾಯ ಅನ್ನುತ್ತಿದ್ದವರು, ಯಾಕಾದರೂ ಈ ಪಾಟಿ ಸುರಿಯುತ್ತಿರುವೆಯೋ ಮಳೆರಾಯ, ಸಾಕು ಮಾಡೋ ಮಳೆರಾಯ ಅನ್ನುತ್ತಿದ್ದಾರೆ.

ಮಳೆ ಸೃಷ್ಟಿಸುತ್ತಿರುವ ಅವಾಂತರದ ಮತ್ತೊಂದು ವಿಡಿಯೋವನ್ನು ನಿಮಗೆ ತೋರಿಸುತ್ತಿದ್ದೇವೆ. ನಿಮಗಿಲ್ಲಿ ಕಾಣಿತ್ತಿರೋದು ಚಾಮರಾಜನಗರ ತಾಲ್ಲೂಕಿನ ಬೇಡರಪುರ ಗ್ರಾಮ. ಗ್ರಾಮ ಅಂತ ಹೇಳುವ ಬದಲು ಬೇಡರಪುರ ದ್ವೀಪ ಅಂತ ಹೇಳಿದರೆ ಹೆಚ್ಚು ಸೂಕ್ತವೆನಿಸಬಹುದು. ಊರೆಲ್ಲ ಅಲ್ಲ, ಊರಲ್ಲಿರುವ ಎಲ್ಲ ಮನೆಗಳಲ್ಲೂ ನೀರು. ಜನ ಮನೆ ಬಿಟ್ಟು ಕದಲದ ಹಾಗೆ ಮಳೆ ಸುರಿದಿದೆ ಅಂತಲೂ ಹೇಳಲಾಗದು. ಯಾಕೆಂದರೆ, ಮನೆಯೆಲ್ಲೆಲ್ಲ ಮಳೆ ನೀರು ಆವರಿಸಿರುವುದರಿಂದ ಜನ ಅಲ್ಲಿ ಇರುವುದು ಸಹ ಸಾಧ್ಯವಿಲ್ಲದಂತಾಗಿದೆ.

ಆಗಸದಿಂದ ಮಳೆ ಸುರಿಯುತ್ತಿರುವುದು ಸಾಲದೆಂಬಂತೆ, ಬೇಡರಪುರ ಗ್ರಾಮದಲ್ಲಿ ಭುವಿಯೊಳಗಿಂದಲೂ ನೀರು ಉಕ್ಕಿ ಹೊರಬರುತ್ತಿದೆ. ವಿಡಿಯೋನಲ್ಲಿ ನಿಮಗದು ಕಾಣಿಸುತ್ತದೆ.

ಇದನ್ನೂ ಓದಿ:   ನಿಮ್ಮ ವಿಡಿಯೋಗೆ ಯೂಟ್ಯೂಬ್ ವೇದಿಕೆಯಲ್ಲಿ ಡಿಸ್ಲೈಕ್​ಗಳು ಬರುತ್ತಿದ್ದರೆ ಚಿಂತೆ ಬೇಡ, ಇನ್ನು ಮುಂದೆ ಆ ಕೌಂಟರ್ ಕಾಣದಂತೆ ಮರೆಯಾಗುವುದು

Follow us
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು
ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ:ಎರಡು ಪಕ್ಷಗಳ ಕೆಲ ಮುಖಂಡರು ಕಾಂಗ್ರೆಸ್​ಗೆ
ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ:ಎರಡು ಪಕ್ಷಗಳ ಕೆಲ ಮುಖಂಡರು ಕಾಂಗ್ರೆಸ್​ಗೆ
ಹಳೆಯ ದೋಸ್ತಿ ಜಮೀರ್ ಆಹ್ಮದ್ ರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೆಚ್​ಡಿಕೆ
ಹಳೆಯ ದೋಸ್ತಿ ಜಮೀರ್ ಆಹ್ಮದ್ ರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೆಚ್​ಡಿಕೆ
ಬಿಜೆಪಿ ಜೊತೆ ಮೈತ್ರಿ ಬೆಳೆಸುವ ಸಲಹೆ ನಾನೇ ನೀಡಿದ್ದೆ: ಹೆಚ್​ಡಿ ದೇವೇಗೌಡ
ಬಿಜೆಪಿ ಜೊತೆ ಮೈತ್ರಿ ಬೆಳೆಸುವ ಸಲಹೆ ನಾನೇ ನೀಡಿದ್ದೆ: ಹೆಚ್​ಡಿ ದೇವೇಗೌಡ
ದಸರಾ ಉತ್ಸವಕ್ಕೆ ತಯಾರಾಗುತ್ತಿರುವ ಗಜಪಡೆಗೆ ಇಂದು ನಡೆಯಿತು ತೂಕ ಪರೀಕ್ಷೆ!
ದಸರಾ ಉತ್ಸವಕ್ಕೆ ತಯಾರಾಗುತ್ತಿರುವ ಗಜಪಡೆಗೆ ಇಂದು ನಡೆಯಿತು ತೂಕ ಪರೀಕ್ಷೆ!
ಸಿಡಬ್ಲ್ಯೂಅರ್​ಸಿ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ : ಸಿಎಂ
ಸಿಡಬ್ಲ್ಯೂಅರ್​ಸಿ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ : ಸಿಎಂ