ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೈಲು

Updated on: Jan 26, 2026 | 3:12 PM

ಬಿಎಂಟಿಸಿ ಬಸ್​​​ಗೆ  (BMTC Bus)ರೈಲು ನಡುವೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಸಾದರಮಂಗಲ ಬಳಿ ನಡೆದಿದೆ. ರೈಲ್ವೆ ಪ್ಯಾರ್ಲಲ್ ರೋಡ್​ನಲ್ಲಿ ರಿವರ್ಸ್ ತೆಗೆದುಕೊಳ್ಳುವಾಗ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಬಸ್​ನಲ್ಲಿ ಪ್ರಯಾಣಿಕರು ಇರಲಿಲ್ಲ. ಇದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಇಂದು (ಜನವರಿ 26) ಬೆಳಗ್ಗೆ ಸಾದರಮಂಗಲ ಡಿಪೋ 51ರ KA57 F6000 ನಂಬರ್​ನ ಬಸ್​ ಕಾಡುಗೋಡಿ ಬಸ್ ಸ್ಟ್ಯಾಂಡ್ ಹೋಗಬೇಕೆಂದು ಚಾಲಕ ರಿವರ್ಸ್ ತೆಗೆದುಕೊಳ್ಳಲು ರೈಲ್ವೆ ಪ್ಯಾರ್ಲಲ್ ರೋಡ್ ನುಗ್ಗಿಸಿದ್ದಾನೆ. ಪರಿಣಾಮ ಏಕಾಏಕಿ ರೈಲು ಬಂದು ಗುದ್ದಿದ್ದು, ಬಸ್​ ಹಿಂಭಾಗ ಜಖಂ ಆಗಿದೆ.

ಬೆಂಗಳೂರು, (ಜನವರಿ 26): ಬಿಎಂಟಿಸಿ ಬಸ್​​​ಗೆ  (BMTC Bus)ರೈಲು ನಡುವೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಸಾದರಮಂಗಲ ಬಳಿ ನಡೆದಿದೆ. ರೈಲ್ವೆ ಪ್ಯಾರ್ಲಲ್ ರೋಡ್​ನಲ್ಲಿ ರಿವರ್ಸ್ ತೆಗೆದುಕೊಳ್ಳುವಾಗ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಬಸ್​ನಲ್ಲಿ ಪ್ರಯಾಣಿಕರು ಇರಲಿಲ್ಲ. ಇದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಇಂದು (ಜನವರಿ 26) ಬೆಳಗ್ಗೆ ಸಾದರಮಂಗಲ ಡಿಪೋ 51ರ KA57 F6000 ನಂಬರ್​ನ ಬಸ್​ ಕಾಡುಗೋಡಿ ಬಸ್ ಸ್ಟ್ಯಾಂಡ್ ಹೋಗಬೇಕೆಂದು ಚಾಲಕ ರಿವರ್ಸ್ ತೆಗೆದುಕೊಳ್ಳಲು ರೈಲ್ವೆ ಪ್ಯಾರ್ಲಲ್ ರೋಡ್ ನುಗ್ಗಿಸಿದ್ದಾನೆ. ಪರಿಣಾಮ ಏಕಾಏಕಿ ರೈಲು ಬಂದು ಗುದ್ದಿದ್ದು, ಬಸ್​ ಹಿಂಭಾಗ ಜಖಂ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 26, 2026 03:11 PM