AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್ ನಾರಾಯಣ್ ಹೆಸರಲ್ಲಿ ‘ದೊಡ್ಮನೆ’ ವಿರುದ್ಧ ಪೋಸ್ಟ್: ದೂರು ದಾಖಲು

ಎಸ್ ನಾರಾಯಣ್ ಹೆಸರಲ್ಲಿ ‘ದೊಡ್ಮನೆ’ ವಿರುದ್ಧ ಪೋಸ್ಟ್: ದೂರು ದಾಖಲು

ಮಂಜುನಾಥ ಸಿ.
|

Updated on: Jul 30, 2025 | 9:33 PM

Share

S Narayan: ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ, ನಟ ಎಸ್ ನಾರಾಯಣ್ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಎಸ್ ನಾರಾಯಣ್ ಅವರ ಹೆಸರು, ಚಿತ್ರ ಬಳಸಿ ವ್ಯಕ್ತಿಯೊಬ್ಬ ಶಿವರಾಜ್ ಕುಮಾರ್, ಅಪ್ಪು, ಸುದೀಪ್, ಯಶ್ ಇನ್ನೂ ಕೆಲವು ನಟ, ನಟಿಯರ ಬಗ್ಗೆ ಅಶ್ಲೀಲ ಪೋಸ್ಟ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾನೆ.

ಸಾಮಾಜಿಕ ಜಾಲತಾಣದ ಟ್ರೋಲ್​ಗಳು ಈಗ ಚಿತ್ರರಂಗದಲ್ಲಿ ದೊಡ್ಡ ವಿವಾದ ಎಬ್ಬಿಸಿವೆ. ಎಲ್ಲದರ ಕೇಂದ್ರ ಬಿಂದು ದರ್ಶನ್ ಮತ್ತು ಅವರ ಅಭಿಮಾನಿಗಳು. ರಮ್ಯಾಗೆ (Ramya) ಕೆಟ್ಟದಾಗಿ ಸಂದೇಶ ಕಳಿಸಿರುವ ಆರೋಪ ದರ್ಶನ್ ಅಭಿಮಾನಿಗಳ ಮೇಲಿದೆ. ಪ್ರಥಮ್​ಗೆ ನೇರವಾಗಿ ಆಯುಧ ತೋರಿಸಿ ಬೆದರಿಕೆ ಸಹ ಹಾಕಲಾಗಿದೆ. ಇದೀಗ ಎಸ್ ನಾರಾಯಣ್ ಅವರ ಹೆಸರಿನಲ್ಲಿ ದೊಡ್ಮನೆಯ ಮಂದಿಗೆ ಅವಮಾನ ಮಾಡುವ ಕೆಲಸ ಮಾಡಲಾಗುತ್ತಿದೆ. ಅಪ್ಪು, ಶಿವರಾಜ್ ಕುಮಾರ್, ಯಶ್, ಸುದೀಪ್ ಇನ್ನಿತರೆ ನಟ-ನಟಿಯರ ಬಗ್ಗೆ ಎಸ್ ನಾರಾಯಣ್ ಹೆಸರಲ್ಲಿ ಕೆಟ್ಟದಾಗಿ ಪೋಸ್ಟ್​ಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಎಸ್ ನಾರಾಯಣ್ ದೂರು ನೀಡಿದ್ದು, ಪ್ರಕರಣವನ್ನು ಮಾಧ್ಯಮಗಳ ಬಳಿ ವಿವರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More