ಮಟ್ಟಣ್ಣನವರ್​ಗೆ ಮತ್ತಷ್ಟು ಸಂಕಷ್ಟ, ಜೈನ ರಾಜರನ್ನು ಕ್ರೂರಿಗಳು ಅಂದ ಆರೋಪದ ಹಿನ್ನೆಲೆ ಎಫ್ಐಆರ್

ಅರುಣ್​ ಕುಮಾರ್​ ಬೆಳ್ಳಿ

Updated on: Aug 26, 2025 | 5:57 PM

ಮಟ್ಟಣ್ಣನವರ್ ವಿರುದ್ಧ ದಾಖಲಾಗಿರುವ ಎಫ್ಐಅರ್ ಪ್ರತಿ ಮತ್ತು ತನ್ನಲ್ಲಿರುವ ಸಾಕ್ಷ್ಯಗಳನ್ನು ತೆಗೆದುಕೊಂಡು ಬರುವಂತೆ ಬೆಳ್ತಂಗಡಿ ಪೊಲೀಸರು ಹೇಳಿದ್ದರಿಂದ ಮಂಜುನಾಥ್ ಇಲ್ಲಿಗೆ ಆಗಮಿಸಿದ್ದಾರೆ. ಮಟ್ಟಣ್ಣನವರ್ ಮತ್ತು ಯೂಟ್ಯೂಬ್ ಚ್ಯಾನೆಲ್ ಮಾಲೀಕ ವಿರುದ್ಧ ಕಾನೂನು ಕ್ರಮ ಜರುಗಬೇಕು, ಅವರು ಕ್ಷಮಾಪಣೆ ಕೇಳಿದರೆ ಅದು ತನಗೆ ಸ್ವೀಕೃತವಲ್ಲ ಎಂದು ಜೈನ ಸಮುದಾಯದವರಾಗಿರುವ ಮಂಜುನಾಥ್ ಹೇಳುತ್ತಾರೆ.

ದಕ್ಷಿಣ ಕನ್ನಡ, ಆಗಸ್ಟ್ 26: ಹೋರಾಟಗಾರ ಎಂದು ಹೇಳಿಕೊಂಡು ತಿರುಗುತ್ತಿರುವ ಗಿರೀಶ್ ಮಟ್ಟಣ್ಣನವರ್​ಗೆ (Girish Mattennanavar) ಸಂಕಷ್ಟಗಳ ಸರಮಾಲೆ ಎದುರಾಗಿದೆ. ಧಾರವಾಡದ ಮಂಜುನಾಥ್ (Manjunath, Dharwad) ಎನ್ನುವವರು ಮಟ್ಟಣ್ಣನವರ್ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಸ್ಟೇಶನ್​ನಲ್ಲಿ ದೂರೊಂದನ್ನು ನೀಡಿ ಎಫ್​ಐಆರ್ ದಾಖಲಿಸಿದ್ದರು. ಮಟ್ಟಣ್ಣನವರ್ ಬೆಳ್ತಂಗಡಿಯಲ್ಲಿ ಜೈನ ರಾಜರು ಮತ್ತು ಸುಮುದಾಯದ ವಿರುದ್ಧ ಹೇಳಿಕೆ ನೀಡಿದ್ದರಿಂದ ಆ ಎಫ್​ಐಅರ್ ಅನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ಜೈನ ರಾಜರು ಕ್ರೂರಿಗಳಾಗಿದ್ದರು, ಏಕಶಿಲೆಯಲ್ಲಿ ಬಾಹುಬಲಿಯನ್ನು ಕೆತ್ತಿದ ಶಿಲ್ಪಿಗಳ ಕೈಗಳನ್ನು ಕಟ್ ಮಾಡಿದ್ದರು, ಮತ್ತು ಅವರ ಶಾಸನ ಕಾಲದಲ್ಲಿ ಮದುವೆಯಾದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಜೊತೆ ಮೊದಲ ರಾತ್ರಿಯಲ್ಲಿ ಭಾಗಿಯಾಗುವ ಮೊದಲು ಆಕೆಯನ್ನು ರಾಜರ ಬಳಿಗೆ ಕಳಿಸಬೇಕಿತ್ತು ಅಂತ ಗಿರೀಶ್ ಮಟ್ಟಣ್ಣನವರ್ ಜೈನ ರಾಜರನ್ನು ಬಹಳ ಕೆಟ್ಟದ್ದಾಗಿ ಚಿತ್ರಿಸುವ ಕೆಲಸ ಮಾಡಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಇದನ್ನೂ ಓದಿ:  ಧರ್ಮಸ್ಥಳ ಪ್ರಕರಣ: ‘ಬುರುಡೆ’ ಚಿನ್ನಯ್ಯನ ಮೂಲ ಕೆದಕಿದ ಎಸ್ಐಟಿ, ತಮಿಳುನಾಡಿಗೂ ಲಿಂಕ್!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.