ಮೊಹರಂ ಆಚರಣೆಯಲ್ಲಿ ತಲ್ವಾರ್ ಹಿಡಿದು ಕುಣಿದರು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್
ತುಮಕೂರು ತಾಲ್ಲೂಕಿನ ಹೆಬ್ಬೂರಿನಲ್ಲಿ ನಡೆದ ಮೊಹರಂ ಆಚರಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿ(ಎಸ್) ಶಾಸಕ ಡಿಸಿ ಗೌರಿಶಂಕರ್ ಭಾಗಿಯಾಗಿ ಕೈಯಲ್ಲಿ ತಲ್ವಾರ್ ಹಿಡಿದು ಮೊಹರಂ ಕುಣಿತ ಮಾಡಿದರು.
ಮೊಹರಂ (Muharrum) ಆಚರಣೆಯ ಪದ್ಧತಿಗಳು ಒಂದೇ ತೆರನಾಗಿಲ್ಲ. ಕೆಲವು ಕಡೆ ಅದನ್ನು ಹಬ್ಬ ಸಂಭ್ರಮ ಎಂದು ಆಚರಿಸುವುದಿಲ್ಲ. ಉತ್ತರ ಕರ್ನಾಟಕದಲ್ಲಿ ನಿಸ್ಸಂದೇಹವಾಗಿ ಅದು ಸಂಭ್ರಮ. ತುಮಕೂರು ಜಿಲ್ಲೆಯಲ್ಲೂ ಅದನ್ನು ಸಂಭ್ರಮವಾಗಿ ಆಚರಿಸಲಾಗುತ್ತದೆ. ಮಂಗಳವಾರ ತುಮಕೂರು ತಾಲ್ಲೂಕಿನ ಹೆಬ್ಬೂರಿನಲ್ಲಿ ನಡೆದ ಮೊಹರಂ ಆಚರಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿ(ಎಸ್) (JDS) ಶಾಸಕ ಡಿಸಿ ಗೌರಿಶಂಕರ್ (DC Gowri Shankar) ಭಾಗಿಯಾಗಿ ಕೈಯಲ್ಲಿ ತಲ್ವಾರ್ ಹಿಡಿದು ಮೊಹರಂ ಕುಣಿತ ಮಾಡಿದರು.
Follow Us

