ಬಂಧನದಲ್ಲಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್​ಗೆ ಮುಳುಬಾಗಿಲು ಬಳಿ 14-ಎಕರೆ ಫಾರ್ಮ್​ಹೌಸ್ ಇದೆ

ಟೊಮೆಟೊ ಸೇರಿದಂತೆ ಬಗೆಬಗೆಯ ತರಕಾರಿಗಳನ್ನು ಇಲ್ಲಿ ಬೆಳೆಯಲಾಗುತ್ತದಂತೆ. ಸಂತೋಷ್ ಬಂಧನನಕ್ಕೊಳಗಾದ ಸುದ್ದಿ ಕಿವಿಗೆ ಬಿದ್ದ ಮೇಲೆ ತೋಟವನ್ನು ಗುತ್ತಿಗೆ ಪಡೆದಿರುವ ವ್ಯಕ್ತಿ ಅದಕ್ಕೆ ಬೀಗ ಜಡಿದಿದ್ದಾರೆ. ಸಂತೋಷ್ ಭವಿಷ್ಯ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ. ಅವರ ವಕೀಲ ಜಾಮೀನುಗಾಗಿ ಮನವಿ ಸಲ್ಲಿಸಿದ್ದು, ನ್ಯಾಯಾಲಯ ನಾಳೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಬಂಧನದಲ್ಲಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್​ಗೆ ಮುಳುಬಾಗಿಲು ಬಳಿ 14-ಎಕರೆ ಫಾರ್ಮ್​ಹೌಸ್ ಇದೆ
|

Updated on: Oct 24, 2023 | 1:44 PM

ಕೋಲಾರ: ಬಿಗ್ ಬಾಸ್ ಕನ್ನಡ ಸೀಸನ್ 10ರ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ವರ್ತೂರು ಸಂತೋಷ್ (Varthur Santosh) ಹುಲಿಯುಗುರು ಪೆಂಡೆಂಟ್ ಧರಿಸಿದ ಅರೋಪ ಹೊತ್ತು ನ್ಯಾಯಾಂಗ ಕಸ್ಟಡಿಯಲ್ಲಿರೋದು (judicial custody) ಕನ್ನಡಿಗರಿಗೆ ಗೊತ್ತಿದೆ. ಅವರಿಗೆ ಸೇರಿದ ಫಾರ್ಮ್ ಹೌಸ್ ಬಗ್ಗೆ ಇವತ್ತು ಮಾಹಿತಿ ಹೊರಬಂದಿದೆ. ಆಫ್ ಕೋರ್ಸ್, ಅವರ ಬಂಧನ ಮತ್ತು ಮುಳಬಾಗಿಲು ತಾಲ್ಲೂಕಿನ ಖಾದ್ರಿಪುರದಲ್ಲಿರುವ 14 ಎಕರೆ ತೋಟದ ನಡುವೆ ಯಾವುದೇ ಸಂಬಂಧವಿಲ್ಲ. ಸುಮಾರು 8 ಕೋಟಿ ರೂ. ಮೌಲ್ಯದ ಫಾರ್ಮ್ ಹೌಸ್ ಅನ್ನು (farmhouse worth Rs 8 crore) ಸಂತೋಷ್ ಸ್ಥಳೀಯರೊಬ್ಬರಿಗೆ ಗುತ್ತಿಗೆ ನೀಡಿ ಕೃಷಿ ಮಾಡಿಸುತ್ತಿದ್ದಾರೆ. ಟೊಮೆಟೊ ಸೇರಿದಂತೆ ಬಗೆಬಗೆಯ ತರಕಾರಿಗಳನ್ನು ಇಲ್ಲಿ ಬೆಳೆಯಲಾಗುತ್ತದಂತೆ. ಸಂತೋಷ್ ಬಂಧನನಕ್ಕೊಳಗಾದ ಸುದ್ದಿ ಕಿವಿಗೆ ಬಿದ್ದ ಮೇಲೆ ತೋಟವನ್ನು ಗುತ್ತಿಗೆ ಪಡೆದಿರುವ ವ್ಯಕ್ತಿ ಅದಕ್ಕೆ ಬೀಗ ಜಡಿದಿದ್ದಾರೆ. ಸಂತೋಷ್ ಭವಿಷ್ಯ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ. ಅವರ ವಕೀಲ ಜಾಮೀನುಗಾಗಿ ಮನವಿ ಸಲ್ಲಿಸಿದ್ದು, ನ್ಯಾಯಾಲಯ ನಾಳೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us