‘ಉಪಾಧ್ಯಕ್ಷ’ ಯಶಸ್ಸು: ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ ಸಿನಿಮಾ ತಂಡ

ನಿರ್ಮಾಪಕ ಉಮಾಪತಿ ಶ್ರೀನಿವಾಸ್, ನಟ ಚಿಕ್ಕಣ್ಣ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ ಸಿನಿಮಾ ಪ್ರಾರಂಭವಾದಾಗ ಉಮಾಪತಿ ಹರಕೆ ಹೊತ್ತಿದ್ದರು. ಈಗ ಹರಕೆಯನ್ನು ಅವರು ತೀರಿಸಿದ್ದಾರೆ.

‘ಉಪಾಧ್ಯಕ್ಷ’ ಯಶಸ್ಸು: ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ ಸಿನಿಮಾ ತಂಡ
|

Updated on:Feb 03, 2024 | 9:46 AM

‘ಉಪಾಧ್ಯಕ್ಷ’ ಸಿನಿಮಾ‌ದಲ್ಲಿ (Upadhyaksha Movie) ಚಿಕ್ಕಣ್ಣ ಉಪಾಧ್ಯಕ್ಷನಾಗಿ ಕಾಣಿಸಿಕೊಂಡಿದ್ದಾರೆ. ‘ಅಧ್ಯಕ್ಷ’ ಚಿತ್ರದ ಸ್ಪಿನ್​ಆಫ್ ರೀತಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಬಹುತೇಕ ‘ಅಧ್ಯಕ್ಷ’ ಸಿನಿಮಾದ ಪಾತ್ರವರ್ಗವನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಹೀಗಾಗಿ, ನಟ ಚಿಕ್ಕಣ್ಣ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ ಸಿನಿಮಾ ಪ್ರಾರಂಭವಾದಾಗ ಉಮಾಪತಿ ಹರಕೆ ಹೊತ್ತಿದ್ದರು. ಈಗ ಹರಕೆಯನ್ನು ಅವರು ತೀರಿಸಿದ್ದಾರೆ. ಜನವರಿ 26ರಂದು ‘ಉಪಾಧ್ಯಕ್ಷ’ ಸಿನಿಮಾ ರಿಲೀಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:13 am, Sat, 3 February 24

Follow us