‘ಅಂಥ ಮುಠಾಳ ನಾನಲ್ಲ’: ಹೆಂಡತಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ವರ್ತೂರು ಸಂತೋಷ್​ ಗರಂ

|

Updated on: Feb 08, 2024 | 2:46 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಸ್ಪರ್ಧಿಸಿ ಬಂದಿರುವ ವರ್ತೂರು ಸಂತೋಷ್​ ಅವರ ಜೀವನದಲ್ಲಿ ಕೆಲವು ವಿವಾದಗಳು ಇವೆ. ಅವರ ದಾಂಪತ್ಯದಲ್ಲಿ ಈ ಮೊದಲೇ ಬಿರುಕು ಮೂಡಿತ್ತು. ಆ ಕುರಿತು ಬಿಗ್​ ಬಾಸ್​ ಮನೆಯಲ್ಲಿ ಅವರು ಮಾತನಾಡಿದ್ದರು. ಶೋ ಮುಗಿದ ನಂತರವೂ ಆ ವಿಚಾರದ ಬಗ್ಗೆ ಮತ್ತೆ ಮತ್ತೆ ಪ್ರಶ್ನೆ ಎದುರಾಗುತ್ತಿದೆ. ಪತ್ನಿಯ ಜೊತೆಗಿನ ಕಿರಿಕ್​ ಬಗ್ಗೆ ಪ್ರಶ್ನೆ ಕೇಳಿದಾಗ ಸಂತೋಷ್​ ಖಡಕ್​ ಉತ್ತರ ನೀಡಿದ್ದಾರೆ.

ಹಳ್ಳಿಕಾರ್ ತಳಿಯ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ವರ್ತೂರು ಸಂತೋಷ್​ ಅವರು ತುಂಬ ಫೇಮಸ್​ ಆಗಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ಫಿನಾಲೆ ತನಕ ಪೈಪೋಟಿ ನೀಡಿದ್ದ ಅವರಿಗೆ ಅಪಾರ ಜನಬೆಂಬಲ ಸಿಕ್ಕಿತು. ವರ್ತೂರು ಸಂತೋಷ್​ (Varthur Santhosh) ಅವರ ಜೀವನದಲ್ಲಿ ಒಂದಷ್ಟು ವಿವಾದಗಳು ಕೂಡ ಇವೆ. ಅವರ ಸಂಸಾರದಲ್ಲಿ ಬಹಳ ಹಿಂದೆಯೇ ಬಿರುಕು ಮೂಡಿತ್ತು. ಆ ಬಗ್ಗೆ ಬಿಗ್​ ಬಾಸ್​ ಮನೆಯಲ್ಲೂ ಅವರು ಮಾತನಾಡಿದ್ದರು. ದೊಡ್ಮನೆಯಿಂದ ಹೊರಬಂದ ನಂತರವೂ ಆ ಬಗ್ಗೆ ಪದೇಪದೇ ಪ್ರಶ್ನೆ ಎದುರಾಗುತ್ತಿದೆ. ಹಳ್ಳಿಕಾರ್​ ರೇಸ್​ ಬಗ್ಗೆ ಮಾಹಿತಿ ನೀಡಲು ಕರೆದ ಸುದ್ದಿಗೋಷ್ಠಿಯಲ್ಲಿ ಪತ್ನಿ (Varthur Santhosh Wife) ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಂತೋಷ್​ ಗರಂ ಆಗಿದ್ದಾರೆ. ‘ಇದು ಪರ್ಸನಲ್​ ವಿಚಾರ. ಅದನ್ನು ತಂದು ಪಬ್ಲಿಕ್​ನಲ್ಲಿ ಹೇಳುವ ಮುಠಾಳ ನಾನಲ್ಲ. ಯಾರೋ ಮುಠಾಳರು ಅಂಥ ಕೆಲಸ ಮಾಡಿದ್ದಾರೆ ಎಂದರೆ ಅವರ ಮಟ್ಟಕ್ಕೆ ಇಳಿಯಲು ನಾವು ರೆಡಿ ಇಲ್ಲ. ಎಲ್ಲರ ಮನೆಯ ದೋಸೆ ಕೂಡ ತೂತು. ಕೆಲವರ ಮನೆ ಹಂಚೇ ತೂತಾಗಿರುತ್ತದೆ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on