ಕಾಗೆ-ಕೋಗಿಲೆ ಕಥೆ ಹೇಳಿದ ವರ್ತೂರು ಸಂತೋಷ್; ಇಲ್ಲಿ ಕಾಗೆ ಯಾರು, ಕೋಗಿಲೆ ಯಾರು?

Updated on: Nov 22, 2023 | 9:35 PM

ಬಿಗ್ ಬಾಸ್ ಮನೆಯಲ್ಲೂ ವರ್ತೂರು ಸಂತೋಷ್ ಕಾಗೆ-ಕೋಗಿಲೆ ಕಥೆ ಹೇಳಿದ್ದಾರೆ. ಇದನ್ನು ಕೇಳಿದ ಕಾರ್ತಿಕ್ ಮಹೇಶ್​ಗೆ ಸಖತ್ ಗೊಂದಲ ಆಗಿದೆ. ಸಂತೋಷ್ ತಮ್ಮನ್ನೇ ಉದ್ದೇಶಿಸಿ ಹೇಳಿದ ಕಥೆ ಎಂಬುದು ಅವರಿಗೆ ಗೊತ್ತಾಗಿದೆ.

ಕೋಗಿಲೆ ಮೊಟ್ಟೆಯನ್ನು ತೆಗೆದು ಕಾಗೆ ಗೂಡಲ್ಲಿ ಇಡುತ್ತದೆ. ಕಾಗೆ ಕಾವು ಕೊಟ್ಟು ಮರಿ ಮಾಡುತ್ತದೆ. ಆ ಮರಿಯನ್ನು ಕಾಗೆಯೇ ದೊಡ್ಡ ಮಾಡುತ್ತದೆ. ಆ ಬಳಿಕ ಅದಕ್ಕೆ ನಿಜವಿಚಾರ ಗೊತ್ತಾಗುತ್ತದೆ. ಹೀಗೊಂದು ಮಾತನ್ನು ಎಲ್ಲರೂ ಹೇಳುತ್ತಾರೆ. ಈಗ ಬಿಗ್ ಬಾಸ್ ಮನೆಯಲ್ಲೂ ವರ್ತೂರು ಸಂತೋಷ್ (Varthur Santosh) ಅವರು ಇದೇ ಕಥೆ ಹೇಳಿದ್ದಾರೆ. ಇದನ್ನು ಕೇಳಿದ ಕಾರ್ತಿಕ್ ಮಹೇಶ್​ಗೆ ಸಖತ್ ಗೊಂದಲ ಆಗಿದೆ. ಸಂತೋಷ್ ತಮ್ಮನ್ನೇ ಉದ್ದೇಶಿಸಿ ಹೇಳಿದ ಕಥೆ ಎಂಬುದು ಅವರಿಗೆ ಗೊತ್ತಾಗಿದೆ. ಇಲ್ಲಿ ಕಾಗೆ ಯಾರು, ಕೋಗಿಲೆ ಯಾರು ಎನ್ನುವ ಪ್ರಶ್ನೆ ಅವರಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More