Kannada News Videos Vijayalakshmi looks sad during her meet with Darshan in Bellary jail Entertainment News in Kannada
ಬಳ್ಳಾರಿ ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ಅವರು ದರ್ಶನ್ ಪರವಾಗಿ ಕಾನೂನಿನ ಹೋರಾಟ ಮಾಡುತ್ತಿದ್ದಾರೆ. ಬಳ್ಳಾರಿ ಜೈಲಿಗೆ ತೆರಳಿ ಪತಿಯನ್ನು ಅವರು ಭೇಟಿ ಮಾಡಿದ್ದಾರೆ. ಆದರೆ ಈ ಭೇಟಿಯ ಬಳಿಕ ಅವರ ಮುಖ ಬಾಡಿತ್ತು. ತುಂಬ ಬೇಸರದಲ್ಲೇ ಅವರು ಜೈಲಿನಿಂದ ಹೊರಟಿದ್ದಾರೆ. ದಿನದಿಂದ ದಿನಕ್ಕೆ ದರ್ಶನ್ ಅವರ ಆರೋಗ್ಯ ಹದಗೆಡುತ್ತಿದೆ. ಹಾಗಾಗಿ ವಿಜಯಲಕ್ಷ್ಮಿ ಅವರಿಗೆ ಚಿಂತೆ ಹೆಚ್ಚಿದಂತಿದೆ.
ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ದರ್ಶನ್ ಅವರಿಗೆ ಇತ್ತೀಚೆಗೆ ನಿರಾಸೆ ಆಯಿತು. ಈಗ ಅವರು ಬಳ್ಳಾರಿ ಜೈಲಿನಲ್ಲಿ ಆರೋಗ್ಯ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ದರ್ಶನ್ ಅವರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ ಇಂದು (ಅಕ್ಟೋಬರ್ 22) ಬಳ್ಳಾರಿ ಜೈಲಿಗೆ ಬಂದಿದ್ದರು. ವಾಪಸ್ ತೆರಳುವಾಗ ಅವರು ಬೇಸರ ಮಾಡಿಕೊಂಡಿದ್ದರು. ದರ್ಶನ್ ಅವರ ಅನಾರೋಗ್ಯದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೂ ವಿಜಯಲಕ್ಷ್ಮಿ ಉತ್ತರಿಸಿಲ್ಲ.