ಪ್ರತಾಪ್ ಹಳ್ಳಿ ವಿಚಾರ ಮಾತನಾಡೋದು ತಪ್ಪಾ? ವಿನಯ್ ಕ್ಯಾತೆಗೆ ವೀಕ್ಷಕರ ಪ್ರಶ್ನೆ
ಪ್ರತಾಪ್ ಹಳ್ಳಿ ವಿಚಾರ ಎತ್ತುತ್ತಿರುವುದು ತಪ್ಪು ಹೇಗಾಗುತ್ತದೆ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಈ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತದೆ. ಈ ವಾರ ಮಸಿಯ ನೀರು ಹಾಕಿ ನಾಮಿನೇಟ್ ಮಾಡಬೇಕಿದೆ. ಇದರ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಹಳ್ಳಿ ವಿಚಾರ ಮಾತನಾಡುತ್ತಾರೆ ಎನ್ನುವ ಕಾರಣ ಇಟ್ಟುಕೊಂಡು ವಿನಯ್ ಅವರು ಪ್ರತಾಪ್ನ ನಾಮಿನೇಟ್ ಮಾಡಿದ್ದಾರೆ. ಮೈಕಲ್ ಅವರು ಕಾರ್ತಿಕ್ ಮೇಲೆ ಮಸಿ ನೀರು ಸುರಿದರೆ, ಕಾರ್ತಿಕ್ (Karthik Mahesh) ಅವರು ಪ್ರತಾಪ್ ಮೇಲೆ ಮಸಿ ನೀರು ಎರಚಿದ್ದಾರೆ. ಕಾರ್ತಿಕ್ ಅವರು ಸಖತ್ ಅಗ್ರೆಸ್ಸಿವ್ ಆಗಿದ್ದಾರೆ. ಇನ್ನು ಪ್ರತಾಪ್ ಹಳ್ಳಿ ವಿಚಾರ ಎತ್ತುತ್ತಿರುವುದು ತಪ್ಪು ಹೇಗಾಗುತ್ತದೆ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಈ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
