ದರ್ಶನ್​ ವಿಚಾರದಲ್ಲಿ ಲೀಲಾವತಿಗೆ ಕೊಟ್ಟ ಮಾತು ಉಳಿಸಿಕೊಂಡ ವಿನೋದ್​ ರಾಜ್​

Edited By:

Updated on: Nov 25, 2025 | 12:27 PM

ನಟ ದರ್ಶನ್ ಅವರು ‘ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಇಲ್ಲದೆ ಈ ಸಿನಿಮಾ ತೆರೆಗೆ ಬರಲಿದೆ. ಸಿನಿಮಾನ ಅವರ ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ. ಈಗ ವಿನೋದ್ ರಾಜ್ ಕೂಡ ಈ ಸಿನಿಮಾಗೆ ಬೆಂಬಲ ನೀಡಿದ್ದಾರೆ. ಅವರು ಈ ಸಿನಿಮಾನ ಪ್ರಚಾರ ಮಾಡಿದ್ದಾರೆ.  

ನಟ ದರ್ಶನ್ ಹಾಗೂ ವಿನೋದ್ ರಾಜ್ ಮಧ್ಯೆ ಆಪ್ತತತೆ ಇದೆ. ಅವರು ಈಗ ದರ್ಶನ್ ಸಿನಿಮಾ ಬೆಂಬಲ ಮಾಡಿದ್ದಾರೆ. ‘ಡೆವಿಲ್’ ಸಿನಿಮಾದ ಪೋಸ್ಟರ್ ಹಿಡಿದು, ಡೆವಿಲ್ ರೀತಿ ಗಹಗಹಿಸಿ ನಕ್ಕಿದ್ದಾರೆ. ಆ ಬಳಿಕ ಡೆೆವಿಲ್ ಸಿನಿಮಾದ ಡೈಲಾಗ್ ಹೇಳಿದ್ದಾರೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ವಿನೋದ್ ರಾಜ್​ ಅವರಿಗೆ ಅನಾರೋಗ್ಯ ಉಂಟಾದಾಗ ದರ್ಶನ್ ಸಹಾಯ ಮಾಡಿದ್ದರಂತೆ. ಈಗ ಅವರು ದರ್ಶನ್ ಸಿನಿಮಾ ಪ್ರಚಾರ ಮಾಡಿ ಋಣ ತೀರಿಸಿದ್ದಾರೆ. ಇನ್ನು, ದರ್ಶನ್ ಅವರನ್ನು ಯಾವಾಗಲೂ ಕೈ ಬಿಡದಂತೆ ವಿನೋದ್ ರಾಜ್​ಗೆ ತಾಯಿ ಲೀಲಾವತಿ ಹೇಳಿದ್ದರಂತೆ. ಆ ಮಾತನ್ನು ಈಗ ಅವರು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 25, 2025 11:50 AM