Viral Video: ಯಕ್ಷಗಾನಕ್ಕೂ ಕಾಲಿಟ್ಟ ರೇವಣ್ಣನ ಪ್ರಸಂಗ

ಜನಪ್ರಿಯವಾಗಿರುವ ಹಾಡುಗಳು, ಡ್ಯಾನ್ಸ್ ಸ್ಟೆಪ್​ಗಳು, ಟ್ರೋಲ್​ಗಳು ಕೂಡ ಯಕ್ಷಗಾನದ ಸಂಭಾಷಣೆಯ ನಡುವೆ ಇತ್ತೀಚೆಗೆ ತೂರಿಕೊಳ್ಳುವುದು ಹೆಚ್ಚಾಗಿದೆ. ರೇವಣ್ಣನ ಪ್ರಕರಣಗಳ ಪ್ರಸ್ತಾಪವನ್ನೂ ಯಕ್ಷಗಾನದಲ್ಲಿ ಮಾಡಲಾಗಿದೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.

Viral Video: ಯಕ್ಷಗಾನಕ್ಕೂ ಕಾಲಿಟ್ಟ ರೇವಣ್ಣನ ಪ್ರಸಂಗ
|

Updated on: May 25, 2024 | 8:49 PM

ಗಂಡು ಮೆಟ್ಟಿದ ಕಲೆಯಾದ ಯಕ್ಷಗಾನದಲ್ಲಿ (Yakshagana) ಆಗಾಗ ನಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಹಾಸ್ಯಮಯವಾಗಿ ಸೇರಿಸಿಕೊಳ್ಳಲಾಗುತ್ತದೆ. ಜನಪ್ರಿಯವಾಗಿರುವ ಹಾಡುಗಳು, ಡ್ಯಾನ್ಸ್ ಸ್ಟೆಪ್​ಗಳು, ಟ್ರೋಲ್​ಗಳು ಕೂಡ ಯಕ್ಷಗಾನದ ಸಂಭಾಷಣೆಯ ನಡುವೆ ಇತ್ತೀಚೆಗೆ ತೂರಿಕೊಳ್ಳುವುದು ಹೆಚ್ಚಾಗಿದೆ. ಅದೇರೀತಿ ಕೆಲವು ದಿನಗಳಿಂದ ಭಾರೀ ಚರ್ಚೆ ಉಂಟುಮಾಡಿರುವ ಪ್ರಜ್ವಲ್ ರೇವಣ್ಣನ (Prajwal Revanna) ಪೆನ್ ಡ್ರೈವ್ ಪ್ರಕರಣ ಹಾಗೂ ಎಚ್​ಡಿ ರೇವಣ್ಣನ (HD Revanna) ಪ್ರಕರಣಗಳ ಪ್ರಸ್ತಾಪವನ್ನೂ ಯಕ್ಷಗಾನದಲ್ಲಿ ಮಾಡಲಾಗಿದೆ.

ದಕ್ಷಿಣ ಕನ್ನಡದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರು ಮಾಡಿದ ಯಕ್ಷಗಾನದಲ್ಲಿ ಪಾತ್ರಧಾರಿಗಳು ರೇವಣ್ಣನ ಹೆಸರು ಪ್ರಸ್ತಾಪಿಸಿದ್ದಾರೆ. ‘ಹೆಣ್ಣುಮಕ್ಕಳ ವಿಷಯಕ್ಕೆ ಹೋದರೆ ಏನಾಗುತ್ತದೆ ಎಂದು ಪುರಾಣದಲ್ಲೇ ತಿಳಿಸಲಾಗಿದೆ. ಸೀತೆಯನ್ನು ಅಪಹರಿಸಿದ ರೇವಣ್ಣನ ಕತೆ ಏನಾಗಿದೆ ಎಂದು ನಿನಗೆ ಗೊತ್ತಿಲ್ಲವೇ?’ ಎಂದು ಓರ್ವ ಪಾತ್ರಧಾರಿ ಕೇಳುತ್ತಾನೆ. ಅದಕ್ಕೆ ಮತ್ತೋರ್ವ ಪಾತ್ರಧಾರಿ ‘ರೇವಣ್ಣ ಅಲ್ಲ ಸೀತೆಯನ್ನು ಅಪಹರಿಸಿದ್ದು. ಅವರು ಬೇರೆಯವಳನ್ನು ಅಪಹರಿಸಿದ್ದು’ ಎಂದು ಹೇಳಿದಾಗ ಅಲ್ಲಿ ಕುಳಿತಿದ್ದ ಪ್ರೇಕ್ಷಕರು ನಗುವುದನ್ನು ಇದೀಗ ವೈರಲ್ ಆಗಿರುವ ಯಕ್ಷಗಾನದ ವಿಡಿಯೋದಲ್ಲಿ ಕಾಣಬಹುದು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಯೂಟರ್ನ್‌ ಹೊಡೆದ ಸಚಿವ ಜಮೀರ್ ಅಹ್ಮದ್ ಖಾನ್!
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಜೈಲು ಆವರಣದೊಳಗೆ ಕಾರು ಬಿಡದ್ದಕ್ಕೆ ಪೊಲೀಸರೊಂದಿಗೆ ದರ್ಶನ್ ವಕೀಲನ ಕಿರಿಕ್
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..
ಮೊದಲ ಬಾರಿಗೆ ಕಾಶ್ಮೀರ ಕಂಡಾಗ ಈ ಕಂದಮ್ಮನ ಖುಷಿ ಹೇಗಿತ್ತು ನೋಡಿ..
ನಮ್ಮ ಮನೆಯಲ್ಲಿ ರೇಣುಕಾಸ್ವಾಮಿ ಆಭರಣ ಸಿಕ್ಕಿಲ್ಲ: ಸಹನಾ, ಆರೋಪಿ ರಘು ಪತ್ನಿ
ನಮ್ಮ ಮನೆಯಲ್ಲಿ ರೇಣುಕಾಸ್ವಾಮಿ ಆಭರಣ ಸಿಕ್ಕಿಲ್ಲ: ಸಹನಾ, ಆರೋಪಿ ರಘು ಪತ್ನಿ
ಸಿದ್ದರಾಮಯ್ಯರನ್ನು ಭೇಟಿಯಾಗಿ ದುಃಖ ತೋಡಿಕೊಂಡ ರೇಣುಕಾಸ್ವಾಮಿ ಅಪ್ಪ-ಅಮ್ಮ
ಸಿದ್ದರಾಮಯ್ಯರನ್ನು ಭೇಟಿಯಾಗಿ ದುಃಖ ತೋಡಿಕೊಂಡ ರೇಣುಕಾಸ್ವಾಮಿ ಅಪ್ಪ-ಅಮ್ಮ
ಸಿಎಂ ಸಿದ್ದರಾಮಯ್ಯರ ಎದುರು ಕಣ್ಣೀರಿಟ್ಟ ರೇಣುಕಾ ಸ್ವಾಮಿ ಪೋಷಕರು
ಸಿಎಂ ಸಿದ್ದರಾಮಯ್ಯರ ಎದುರು ಕಣ್ಣೀರಿಟ್ಟ ರೇಣುಕಾ ಸ್ವಾಮಿ ಪೋಷಕರು
ದರ್ಶನ್​ ನೋಡಲು ಜೈಲಿನ ಬಳಿ ಬಂದ ಅಭಿಮಾನಿಯ ಮಾತು
ದರ್ಶನ್​ ನೋಡಲು ಜೈಲಿನ ಬಳಿ ಬಂದ ಅಭಿಮಾನಿಯ ಮಾತು
ಕಡಿಮೆ ಬೆಲೆಗೆ ಪವರ್​​ ಬ್ಯಾಂಕ್​​​ ಖರೀದಿಸುವವರು ಈ ವಿಡಿಯೋ ನೋಡಲೇಬೇಕು
ಕಡಿಮೆ ಬೆಲೆಗೆ ಪವರ್​​ ಬ್ಯಾಂಕ್​​​ ಖರೀದಿಸುವವರು ಈ ವಿಡಿಯೋ ನೋಡಲೇಬೇಕು