ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?

Updated By: ಮದನ್​ ಕುಮಾರ್​

Updated on: Aug 12, 2025 | 8:34 PM

‘ಸಾಹಸ ಸಿಂಹ’ ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿದ್ದನ್ನು ಅವರ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ವಿಷ್ಣುವರ್ಧನ್ ಅಭಿಮಾನಿ ಸರವಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ಅಂಬರೀಷ್ ಅವರ ಮನೆಯಲ್ಲಿ ನಟ ಬಾಲಣ್ಣ ಮಗಳು ಗೀತಾ ಬಾಲಿ ಜೊತೆ ಸಭೆ ಮಾಡಲಾಗಿತ್ತು. ಆಗ ಏನೆಲ್ಲ ನಡೆದಿತ್ತು ಎಂಬುದನ್ನು ಸರವಣ ವಿವರಿಸಿದ್ದಾರೆ.

ನಟ ವಿಷ್ಣುವರ್ಧನ್ ಅವರ ಸಮಾಧಿ (Vishnuvardhan Samadhi) ನೆಲಸಮ ಮಾಡಿದ್ದನ್ನು ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ವಿಷ್ಣು ಅಭಿಮಾನಿ ಸರವಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ಅಂಬರೀಷ್ ಅವರ ಮನೆಯಲ್ಲಿ ನಟ ಬಾಲಣ್ಣ ಮಗಳು ಗೀತಾ ಬಾಲಿ ಜೊತೆ ಸಭೆ ಮಾಡಲಾಗಿತ್ತು. ಕೇಸ್ ಹಿಂಪಡೆಯುವಂತೆ ಮನವೊಲಿಸಲಾಗಿತ್ತು. ಆದರೆ ಆ ಮಾತಿನಂತೆ ಗೀತಾ ಬಾಲಿ ನಡೆದುಕೊಳ್ಳಲಿಲ್ಲ ಎಂದು ಸರವಣ ಹೇಳಿದ್ದಾರೆ. ಈಗ ಅಭಿಮಾನಿಗಳ (Vishnuvardhan Fans) ಜೊತೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರು ಸಭೆ ಕರೆದಿದ್ದಾರೆ. ಮುಂದಿನ ನಡೆ ಬಗ್ಗೆ ಅಭಿಮಾನಿ ಸರವಣ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.