Assembly Polls; ರಾಮನಗರದಿಂದ ಡಿಕೆ ಸುರೇಶ್ ರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿಸಲು ಪ್ರಸ್ತಾಪಗಳು ಬಂದಿವೆ: ಡಿಕೆ ಶಿವಕುಮಾರ್
ಪಕ್ಷದ ಹೈಕಮಾಂಡ್ ಮತ್ತು ರಾಜ್ಯದ ನಾಯಕರ ಜೊತೆ ಚರ್ಚಿಸಿ ಸುರೇಶ್ ಕ್ಯಾಂಡಿಡೇಚರ್ ಬಗ್ಗೆ ಒಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು
ಬೆಂಗಳೂರು: ರಾಮನಗರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಡಿಕೆ ಸುರೇಶ್ (DK Suresh) ಸ್ಪರ್ಧಿಸಲಿದ್ದಾರೆಯೇ? ಅಂಥದ್ದೊಂದು ಪ್ರಸ್ತಾಪವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳುತ್ತಾರೆ. ಕ್ಷೇತ್ರದಿಂದ ಜನರಿಂದ ಪ್ರಸ್ತಾಪಗಳು ಬಂದಿವೆ ಆದರೆ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಪಕ್ಷದ ಹೈಕಮಾಂಡ್ (high command) ಮತ್ತು ರಾಜ್ಯದ ನಾಯಕರ ಜೊತೆ ಚರ್ಚಿಸಿ ಸುರೇಶ್ ಕ್ಯಾಂಡಿಡೇಚರ್ ಬಗ್ಗೆ ಒಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:03 pm, Tue, 14 March 23