ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದರೂ ಅರೆಸ್ಟ್ ಮಾಡಿಕೊಂಡು ಬರುತ್ತೇವೆ: ಸಿದ್ದರಾಮಯ್ಯ, ಸಿಎಂ

|

Updated on: May 03, 2024 | 1:09 PM

ಇದೇ ಹಿನ್ನಲೆಯಲ್ಲಿ ತಾವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದು ಪ್ರಜ್ವಲ್ ರೇವಣ್ಣನ ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್ ರದ್ದು ಮಾಡುವಂತೆ ಮನವಿ ಮಾಡಿದ್ದೇನೆ, ಅದು ರದ್ದಾದರೆ, ಪ್ರಜ್ವಲ್ ಯಾವ ದೇಶದಲ್ಲೂ ಇರಲಾಗಲ್ಲ, ಪ್ರಧಾನಿಯವರು ಅದನ್ನು ಮಾಡಲಿ ಎಂದರು.

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಪರ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಡೆಪ್ಯುಟಿ ಸಿಎಂ ಡಿಕೆ ಶಿವಕುಮಾರ್ (DCM DK Shivakumar) ನಗರದಲ್ಲಿ ಪ್ರಚಾರ ಮಾಡಿದರು. ಏತನ್ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿದ್ದಾರಾಮಯ್ಯ, ಪ್ರಜ್ವಲ್ ರೇವಣ್ಣ (Prajwal Revanna) ಯಾವ ದೇಶದಲ್ಲಿದ್ದರೂ ತಮ್ಮ ಸರ್ಕಾರ ಎಳೆದುತರಲಿದೆ ಎಂದರು. ಇದೇ ಹಿನ್ನಲೆಯಲ್ಲಿ ತಾವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದು ಪ್ರಜ್ವಲ್ ರೇವಣ್ಣನ ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್ ರದ್ದು ಮಾಡುವಂತೆ ಮನವಿ ಮಾಡಿದ್ದೇನೆ, ಅದು ರದ್ದಾದರೆ, ಪ್ರಜ್ವಲ್ ಯಾವ ದೇಶದಲ್ಲೂ ಇರಲಾಗಲ್ಲ, ಪ್ರಧಾನಿಯವರು ಅದನ್ನು ಮಾಡಲಿ ಎಂದರು. ಪ್ರಜ್ವಲ್ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರ ಮತ್ತು ಬಿಜೆಪಿ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಅಂತ ಹೇಳಿದಾಗ ಸಿದ್ದರಾಮಯ್ಯ ಅವರ ನಿಲುವು ಏನು? ಕೇಂದ್ರ ಸರ್ಕಾರ ಗಮನಕ್ಕೆ ಬಾರದೆ ಯಾರಾದರೂ ವಿದೇಶಕ್ಕೆ ಹೋಗುವುದು ಸಾಧ್ಯವೇ? ಕೇಂದ್ರ ಸರ್ಕಾರವೇ ಪ್ರಜ್ವಲ್ ರಕ್ಷಣೆ ನಿಂತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ವಿಧಾನಸಭೆ ಎಲೆಕ್ಷನ್​ನಲ್ಲಿ ಸಿದ್ದರಾಮಯ್ಯ ನನ್ನ ಜತೆ ಸಂಧಾನ ಮಾಡಿಕೊಂಡಿದ್ರು: ರೆಡ್ಡಿ ಬಾಂಬ್  

Follow us on