Jaggesh: ಹೊಸ ಪ್ರತಿಭೆಗಳಿಗೆ ನವರಸ ನಾಯಕ ಜಗ್ಗೇಶ್ ನೀಡಿದ ಅಡ್ವೈಸ್ ಏನು?       

Edited By:

Updated on: Dec 08, 2022 | 6:30 AM

ಹೊಸ ಪ್ರತಿಭೆಗಳ 'ಪದವಿಪೂರ್ವ' ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ನವರಸ ನಾಯಕ ಜಗ್ಗೇಶ್ ಅವರು ಇಂದು (ಡಿ. 7) ಚಿತ್ರದ ಟೀಸರ್ ಲಾಂಚ್ ಮಾಡಿದ್ದಾರೆ.

ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಪೃಥ್ವಿ ಶಾಮನೂರು, ಅಂಜಲಿ ಅನಿಶ್, ಯಶಾ ಶಶಿಕುಮಾರ್ ಮುಂತಾದವರು ನಟಿಸಿದ ‘ಪದವಿಪೂರ್ವ’ (Padavipoorva) ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ನವರಸ ನಾಯಕ ಜಗ್ಗೇಶ್ ಅವರು ಮಂಗಳವಾರ (ಡಿ. 6) ಚಿತ್ರದ ಟೀಸರ್ ಲಾಂಚ್ ಮಾಡಿದರು. ಈ ವೇಳೆ ಮಾತನಾಡಿದ ನಟ ಜಗ್ಗೇಶ್ ಚಿತ್ರರಂಗಕ್ಕೆ ಬರುತ್ತಿರುವ ಹೊಸ ಪ್ರತಿಭೆಗಳಿಗೆ ಅಡ್ವೈಸ್ ಮಾಡಿದ್ದಾರೆ. ‘ತಾಳಿದವನು ಬಾಳಿಯಾನು. ಯಾರಿಗೆ ಪ್ರತಿಭೆ ಇದೆ ಅವರಿಗೆ ಪುರಸ್ಕಾರ ಸಿಗುತ್ತದೆ. ಹೊಸ ಪ್ರತಿಭೆಗಳನ್ನು ದಯವಿಟ್ಟು ಬೆಳೆಸಿ’ ಎಂದು ತಮ್ಮದೆ ಸ್ಟೈಲ್​ನಲ್ಲಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Web contact

TV9 Kannada

Read More