AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಶ್ವರಪ್ಪ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದನ್ನೇ ಈಗ ನಾವು ಅವರಿಗೆ ಕೇಳುತ್ತಿದ್ದೇವೆ: ಅರ್ ಅಶೋಕ

ಈಶ್ವರಪ್ಪ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದ್ದನ್ನೇ ಈಗ ನಾವು ಅವರಿಗೆ ಕೇಳುತ್ತಿದ್ದೇವೆ: ಅರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 02, 2025 | 3:21 PM

ಈಶ್ವರಪ್ಪ ಪ್ರಕರಣದಲ್ಲಿ ಅವರ ಹೆಸರನ್ನು ಸಾವಿಗೆ ಶರಣಾದ ಸಂತೋಷ್ ತನ್ನ ಡೆತ್ ನೋಟಲ್ಲಿ ಬರೆದಿದ್ದ ಆದರೆ ಸಚಿನ್ ಬರೆದಿರುವವ ಡೆತ್ ನೋಟಲ್ಲಿ ತನ್ನ ಹೆಸರಿಲ್ಲ, ತಾನ್ಯಾಕೆ ರಾಜೀನಾಮೆ ನೀಡಬೇಕು ಅಂತ ಖರ್ಗೆ ಹೇಳಿದ್ದಾರೆಂದು ತಿಳಿಸಿದಾಗ ಅಶೋಕ ಅವರು ಅವರು ಹೆಸರು ಯಾಕಿಲ್ಲ, ಇದೆ ಎಂದು ಹೇಳುತ್ತಾರೆ. ಆದರೆ ಅವರ ಮಾತಿನಲ್ಲಿ ಧೃಡತೆ ಕಾಣೋದಿಲ್ಲ, ತಲೆ ಮಾತ್ರ ಅಲ್ಲಾಡಿಸುತ್ತಾರೆ.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ವಿರೋಧಪಕ್ಷದ ನಾಯಕ ಅರ್ ಅಶೋಕ ಗುತ್ತಿಗೆದಾರ ಸಚಿನ್ ಪಾಂಚಾಳ್ ಸಾವು ಪ್ರಕರಣವನ್ನು ರಾಜ್ಯ ಬಿಜೆಪಿ ಬಹಳ ಗಂಭೀರವಾಗಿ ಪರಿಗಣಿಸಿದೆ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದ ಹೊರತು ವಿಶ್ರಮಿಸುವುದಿಲ್ಲ ಎಂದರು. ಮಾಜಿ ಸಚಿವ ಕೆಎಸ್ಈಶ್ವರಪ್ಪ ಪ್ರಕರಣದ ನಡೆದಾಗ ಶಾಸಕರಾಗಿದ್ದ ಪ್ರಿಯಾಂಕ್ ಖರ್ಗೆ ಅವರು ಏನು ಹೇಳಿದ್ದರು ಅನ್ನೋದನ್ನು ಮಾಧ್ಯಮಗಳಿಗೆ ಓದಿ ಹೇಳಿದ ಅಶೋಕ, ಅವರು ಆಗ ಹೇಳಿದ್ದನ್ನು ಈಗ ಸಚಿವರಾಗಿರುವ ಖರ್ಗೆ ಅವರಿಗೆ ಕೇಳುತ್ತೇವೆ ಎಂದರು. ಈಶ್ವರಪ್ಪ ನಿರ್ದೋಷಿಯೆಂದು ನ್ಯಾಯಲಯ ತೀರ್ಪು ನೀಡಿತ್ತು ಎಂದು ಹೇಳಿದ ಅಶೋಕ, ಪ್ರಿಯಾಂಕ್ ಖರ್ಗೆಯ ರಾಜೀನಾಮೆ ಪಡೆಯುವ ತಾಕತ್ತು ಸಿದ್ದರಾಮಯ್ಯ ಅವರಿಗಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ, ಸಿಬಿಐ ತನಿಖೆಗಾಗಿ ಪ್ರಧಾನಿಯವರಿಗೆ ಪತ್ರ ಬರೆಯುತ್ತೇವೆ: ಸಚಿನ್ ಸಹೋದರಿ